ಬುಲ್ಡೋಜರ್ ನ್ಯಾಯ ಅಸಾಂವಿಧಾನಿಕ ; ಆರೋಪ- ಅಪರಾಧಗಳ ಕಾರಣಕ್ಕೆ ಆಸ್ತಿ ಕೆಡಹುವಂತಿಲ್ಲ : ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ನವದೆಹಲಿ: ಬುಲ್ಡೋಜರ್‌ ನ್ಯಾಯ ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ಎಂದು ಮಹತ್ವದ ತೀರ್ಪು ಸುಪ್ರೀಂ ಕೋರ್ಟ್‌ ಆರೋಪಿಯ ಅಪರಾಧದ ಹಿನ್ನೆಲೆಯನ್ನು ಪ್ರಸ್ತಾಪಿಸಿ ಸರ್ಕಾರಿ ಅಧಿಕಾರಿಗಳು ಆತನ ಮನೆಯನ್ನು ಕೆಡಹುವಂತಿಲ್ಲ ಎಂದು ಹೇಳಿದೆ.
ಆರೋಪಿಯ ತಪ್ಪು ಅಥವಾ ಮುಗ್ಧತೆಯನ್ನು ಸರ್ಕಾರಿ ಅಧಿಕಾರಿಗಳು ನಿರ್ಧರಿಸುವಂತಿಲ್ಲ. ಅಂತಹ ವ್ಯಕ್ತಿಯ ತಪ್ಪನ್ನು ನಿರ್ಧರಿಸುವ ಹೊಣೆಗಾರಿಕೆ ನ್ಯಾಯಾಂಗಕ್ಕೆ ಸೇರಿದ್ದು ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಹೇಳಿದೆ.
ಆರೋಪಿಯ ಮನೆ ಕೆಡಹುವುದು ಸಂವಿಧಾನದ 21 ನೇ ವಿಧಿಯಡಿ ಒದಗಿಸಲಾದ ಆಶ್ರಯ ಪಡೆಯುವ ಹಕ್ಕಿನ ಉಲ್ಲಂಘನೆಯಾಗಲಿದೆ. ಆರೋಪಿಯ ಕೃತ್ಯಕ್ಕೂ ತಮಗೂ ಸಂಬಂಧವೇ ಇರದ ಕುಟುಂಬ ಸದಸ್ಯರಿಗೆ ಶಿಕ್ಷೆ ವಿಧಿಸಿದಂತಾಗುತ್ತದೆ ಎಂದು ನ್ಯಾಯ ಪೀಠ ಹೇಳಿದೆ.

“ವ್ಯಕ್ತಿಯ ಮೇಲಿನ ಆರೋಪದ ಕಾರಣಕ್ಕಾಗಿ ಆತನ ಆಸ್ತಿಯನ್ನು ಕೆಡವಿದರೆ, ಅದು ಸಂಪೂರ್ಣವಾಗಿ ಅಸಾಂವಿಧಾನಿಕವಾಗುತ್ತದೆ. ಯಾರು ತಪ್ಪಿತಸ್ಥರು ಎಂಬುದನ್ನು ಕಾರ್ಯಾಂಗ ನಿರ್ಧರಿಸುವಂತಿಲ್ಲ. ಅಧಿಕಾರಿಗಳು ಅದನ್ನು ನಿರ್ಧರಿಸುವ ನ್ಯಾಯಾಧೀಶರು ಸಾಧ್ಯವಿಲ್ಲ. ಸಾಂವಿಧಾನಿಕ ಮೌಲ್ಯಗಳು ಮತ್ತು ನೀತಿಗಳು ಅಂತಹ ಅಧಿಕಾರದ ದುರುಪಯೋಗವನ್ನು ಸಮ್ಮತಿಸುವುದಿಲ್ಲ. ಕಾರ್ಯಾಂಗದ ಅಂತಹ ಕ್ರಮ ಕಾನೂನುಬಾಹಿರವಾಗುವುದರಿಂದ ಶಿಕ್ಷೆಗೊಳಗಾದ ವ್ಯಕ್ತಿಯ ವಿರುದ್ಧವೂ ಅದು ಅಂತಹ ಕ್ರಮ ಕೈಗೊಳ್ಳುವಂತಿಲ್ಲ. ಹಾಗೆ ಮಾಡಿದರೆ ಕಾರ್ಯಾಂಗವೇ ಕಾನೂನನ್ನು ಕೈಗೆತ್ತಿಕೊಂಡಂತಾಗುತ್ತದೆ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪೂರ್ವಭಾವಿ ಶೋಕಾಸ್ ನೋಟಿಸ್ ನೀಡದೆ ಮತ್ತು ನೋಟಿಸ್ ಜಾರಿ ಮಾಡಿದ 15 ದಿನಗಳ ಒಳಗಾಗಿ ಯಾವುದೇ ಕಟ್ಟಡವನ್ನು ಕೆಡವಬಾರದು ಎಂದು ಪೀಠ ಸೂಚಿಸಿದೆ.

ಪ್ರಮುಖ ಸುದ್ದಿ :-   ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿ ಅದನ್ನೇ ನಿಗ್ರಹಿಸಿದ ಯುವಕ..! ದೃಶ್ಯ ವೀಡಿಯೊದಲ್ಲಿ ಸೆರೆ-ವೀಕ್ಷಿಸಿ

ಆದರೆ ಇದೆವೇಳೆ ಸಾರ್ವಜನಿಕ ಭೂಮಿಯಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣವಾದರೆ ಅಂತಹ ಸಮಯದಲ್ಲಿ ಈ ನಿರ್ದೇಶನ ಅನ್ವಯವಾಗುವುದಿಲ್ಲ ಎಂದು ತಿಳಿಸಿದೆ. ಒಂದು ವೇಳೆ ಕಟ್ಟಡ ಕೆಡವಬೇಕಾದ ಅನಿವಾರ್ಯತೆ ಇದ್ದರೆ ಅದರ ಸಂಪೂರ್ಣ ಪ್ರಕ್ರಿಯೆಗಳನ್ನು ವಿಡಿಯೊ ಚಿತ್ರೀಕರಣ ಮಾಡಬೇಕು ಎಂದು ಕೋರ್ಟ್‌ ಹೇಳಿದೆ.
ಇಂತಹ ಅಸಾಂವಿಧಾನಿಕ ಮತ್ತು ಅನಿಯಂತ್ರಿತ ಕ್ರಮಗಳಿಗೆ ಕಾರಣವಾಗುವ ಸಾರ್ವಜನಿಕ ಇಲ್ಲವೇ ಸರ್ಕಾರಿ ಅಧಿಕಾರಿಗಳಿಗೆ ಅವರೇ ಹಾನಿಯ ವೆಚ್ಚ ಪಾವತಿಸುವಂತೆ ಮಾಡುವ ಮೂಲಕ ಅವರನ್ನು ಹೊಣೆಗಾರರನ್ನಾಗಿಸಬೇಕು ಎಂದು ಪೀಠ ತಿಳಿಸಿದೆ.ಈ ನಿಟ್ಟಿನಲ್ಲಿ ಸರ್ಕಾರ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ತಾನು ನಿಗದಿಪಡಿಸುವುದಾಗಿ ಅದು ತಿಳಿಸಿದೆ. ರಾಜ್ಯ ಮತ್ತು ಅದರ ಅಧಿಕಾರಿಗಳು ನಿರಂಕುಶ ಮತ್ತು ಮಿತಿಮೀರಿದ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ರಾಜ್ಯದ ಯಾವುದೇ ಅಧಿಕಾರಿಯು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡರೆ ಅಥವಾ ಸಂಪೂರ್ಣ ಅನಿಯಂತ್ರಿತ ಅಥವಾ ದುರುದ್ದೇಶಪೂರಿತ ರೀತಿಯಲ್ಲಿ ವರ್ತಿಸಿದರೆ, ಅವರನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಅದು ಹೇಳಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವುದು ಮತ್ತು ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದು ಸರ್ಕಾದ ಜವಾಬ್ದಾರಿಯಾಗಿದ್ದರೂ, ಅಂತಹ ಅಧಿಕಾರವನ್ನು ಸರ್ಕಾರ ಮನಸೋಇಚ್ಛೆಯಿಂದ ಚಲಾಯಿಸುವಂತಿಲ್ಲ ಮತ್ತು ಆಸ್ತಿಯನ್ನು ವ್ಯಕ್ತಿಯಿಂದ ನಿರಂಕುಶವಾಗಿ ಕಸಿದುಕೊಳ್ಳಲು ಸಾಧ್ಯವಿಲ್ಲ. ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸುವುದು ಮುಖ್ಯ ಎಂದು ಪೀಠ ಹೇಳಿದೆ.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

ಅಪರಾಧ ಪ್ರಕ್ರಿಯೆಯಲ್ಲಿ ಆರೋಪಿಗಳಾಗಿರುವವರ ಮನೆ ಅಥವಾ ಅಂಗಡಿಗಳನ್ನು ನೆಲಸಮ ಮಾಡುವ ಕಾನೂನುಬಾಹಿರ ಕ್ರಮ ಕೈಗೊಳ್ಳದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ನಡೆದ ವಿಚಾರಣೆ ವೇಳೆ ಪೀಠ ಈ ವಿಚಾರಗಳನ್ನು ತಿಳಿಸಿದೆ.
ನ್ಯಾಯಾಲಯದ ಅನುಮತಿ ಪಡೆಯದೆ ಆರೋಪಿಗಳ ಆಸ್ತಿ ನೆಲಸಮ ಮಾಡದಂತೆ ಅಧಿಕಾರಿಗಳಿಗೆ ಈ ಹಿಂದೆ ಪೀಠ ಮಧ್ಯಂತರ ಆದೇಶ ನೀಡಿತ್ತು. ಅಕ್ಟೋಬರ್ 1 ರಂದು ತೀರ್ಪು ಕಾಯ್ದಿರಿಸಿತ್ತು.
ಉತ್ತರ ಪ್ರದೇಶ, ಗುಜರಾತ್ ಹಾಗೂ ಮಧ್ಯಪ್ರದೇಶ ಸರ್ಕಾರಗಳ ಪರವಾಗಿ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ವಾದ ಮಂಡಿಸಿದರು.
ಸಂತ್ರಸ್ತ ಕಕ್ಷಿದಾರರನ್ನು ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಸಿ ಯು ಸಿಂಗ್, ಸಂಜಯ ಹೆಗ್ಡೆ, ಎಂ ಆರ್ ಶಂಶಾದ್ ಮತ್ತು ವಕೀಲರಾದ ನಿಜಾಮ್ ಪಾಷಾ, ಅನಸ್ ತನ್ವೀರ್ ಪ್ರತಿನಿಧಿಸಿದ್ದರು.
ನ್ಯಾಯವಾದಿ ವೃಂದಾ ಗ್ರೋವರ್ ಅವರು ವಿಶ್ವಸಂಸ್ಥೆ ಸೂಕ್ತ ವಸತಿ ಸೌಕರ್ಯ ಕುರಿತ ವಿಶೇಷ ವರದಿಗಾರರ ಪರವಾಗಿ ವಾದ ಮಂಡಿಸಿದರು.

1 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement