ನಿರ್ದೇಶಕನ ಕೊಲೆ ಯತ್ನ ಆರೋಪ ; ನಟ ತಾಂಡವ ರಾಮ ಬಂಧನ

 ಬೆಂಗಳೂರು: ನಿರ್ದೇಶಕನಿಗೆ ಬೆದರಿಕೆ ಹಾಕಿದ್ದಲ್ಲದೆ, ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ತಾಂಡವ ರಾಮ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಚಂದ್ರಲೇಔಟ್‌ನಲ್ಲಿ ಘಟನೆ ನಡೆದಿದ್ದು, ಸಿನಿಮಾ ಅರ್ಧಕ್ಕೆ ನಿಲ್ಲಿಸಿದ್ದಾರೆ ಎಂದು ಮುಗಿಲ್ ಪೇಟೆ ಸಿನಿಮಾ ನಿರ್ದೇಶಕ ಭರತ್ ಹತ್ಯೆಗೆ ಯತ್ನಿಸಿದ ಆರೋಪದಲ್ಲಿ ನಟ ತಾಂಡವ ರಾಮ ಬಂಧನವಾಗಿದೆ. ತಾಂಡವ ರಾಮ ಕಿರುತೆರೆಯಲ್ಲಿ ನಟಿಸಿದ್ದಾರೆ. ಅವರು ಜೋಡಿ ಹಕ್ಕಿ, ಭೂಮಿಗೆ ಬಂದ ಭಗವಂತ ಧಾರಾವಾಹಿಯಲ್ಲಿ ನಟಿಸಿದ್ದರು. ಕೆ.ಎಂ ಚೈತನ್ಯ ನಿರ್ದೇಶನದ ‘ಅಬ್ಬಬ್ಬ’ ಸಿನಿಮಾದಲ್ಲಿಯೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಮುಗಿಲ್ ಪೇಟೆ’ ಸಿನಿಮಾ ನಿರ್ದೇಶನ ಮಾಡಿದ್ದ ಭರತ ಎಂಬವರ ಜೊತೆಗೆ ತಾಂಡವ ರಾಮ ಸಿನಿಮಾ ಮಾಡುತ್ತಿದ್ದರು. ಈ ಸಿನಿಮಾ ಕೆಲ ಕಾರಣಗಳಿಂದ ಅರ್ಧಕ್ಕೇ ನಿಂತಿತ್ತು. ಇದೇ ವಿಚಾರವಾಗಿ ಚರ್ಚಿಸಲು ಭರತ ಹಾಗೂ ತಾಂಡವ ರಾಮ ಚಂದ್ರಾ ಲೇಔಟ್ ಬಳಿಕ ಆಫೀಸ್‌ನಲ್ಲಿ ಸೇರಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆಗೆ ತಾಂಡವ ರಾಮ ನಿರ್ದೇಶಕರ ಮೇಲೆ ಫೈರಿಂಗ್ ಮಾಡಿದ್ದು,  ಅದೃಷ್ಟವಶಾತ್ ಬುಲೆಟ್ ನಿರ್ದೇಶಕ ಭರತ್‌ಗೆ ತಗುಲದೆ, ಗೋಡೆಗೆ ಬಡಿದಿದೆ ಎಂದು ಹೇಳಲಾಗಿದೆ. ಸದ್ಯ ತಾಂಡವ್‌ ರಾಮ ಅವರನ್ನು ಚಂದ್ರಾ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದು, ಕೊಲೆಯತ್ನ ಪ್ರಕರಣದಡಿ ವಿಚಾರಣೆಗೆ ಒಳಪಡಿಸಿದ್ದಾರೆ. ಪರವಾನಗಿ ಹೊಂದಿದ್ದ ಪಿಸ್ತೂಲ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಡಳಿತ ಸಂಪೂರ್ಣ ವಿಫಲ ; ಬಿ.ಆರ್.​ ಪಾಟೀಲ ಬೆನ್ನಲ್ಲೇ ತಮ್ಮ ಸರ್ಕಾರದ ವಿರುದ್ಧವೇ ಸಿಡಿದೆದ್ದ ಮತ್ತೊಬ್ಬ ಕಾಂಗ್ರೆಸ್ ಶಾಸಕ ; ರಾಜೀನಾಮೆ ಮಾತು

ಭರತ ನಾವುಂಡ ನಿರ್ದೇಶನದಲ್ಲಿ ‘ದೇವನಾಂಪ್ರಿಯ’ ಎಂಬ ಸಿನಿಮಾ ಈ ಹಿಂದೆ ಸೆಟ್ಟೇರಿತ್ತು. ಈ ಸಿನಿಮಾದಲ್ಲಿ ತಾಂಡವ ರಾಮ ನಾಯಕನಾಗಿ ನಟಿಸುತ್ತಿದ್ದರು. ಈ ಸಿನಿಮಾದ ನಿರ್ದೇಶನಕ್ಕಾಗಿ ತಾಂಡವ್ ಆರು ಲಕ್ಷ ರೂಪಾಯಿ ಹಣವನ್ನು ಭರತ ಅವರಿಗೆ ನೀಡಿದ್ದರು. ಆದರೆ ಇತ್ತೀಚೆಗೆ ಈ ಸಿನಿಮಾವನ್ನು ಭರತ್ ಅರ್ಧಕ್ಕೆ ನಿಲ್ಲಿಸಿಬಿಟ್ಟಿದ್ದರಂತೆ. ಇದೇ ವಿಚಾರವಾಗಿ ನಿರ್ಮಾಪಕ ಕುಮಾರಸ್ವಾಮಿ ಎಂಬವರ ಚಂದ್ರಾಲೇಔಟ್‌ ಕಚೇರಿಯಲ್ಲಿ ಭರತ್ ಅವರನ್ನು ಕರೆಸಿ ಮಾತುಕತೆ ನಡೆಸಲಾಗಿತ್ತು. ಈ ವೇಳೆ ನೀಡಿರುವ ಹಣವನ್ನು ಹಿಂತಿರುಗಿಸುವಂತೆ ತಾಂಡವ ಕೇಳಿದ್ದಾರೆ. ಆಗ ಮಾತು ಬೆಳೆದು ವಿಕೋಪಕ್ಕೆ ಹೋಗಿ ತಾಂಡವ ಬೆದರಿಕೆ ಹಾಕಿದ್ದಾರೆ. ಹಾಗೂ ಗುಂಡು ಹಾರಿಸಿ ಹತ್ಯೆಗೂ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

4.8 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement