ರಿಯೋ: ರಿಯೋ ಜಿ-20 ಶೃಂಗಸಭೆಯ ಪಕ್ಕದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ ಹಾಗೂ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಭೇಟಿಯಾಗಿದ್ದಾರೆ. ಉಭಯ ದೇಶಗಳ ವಿದೇಶಾಂಗ ಸಚಿವರು ಭೇಟಿ ಮಾಡಿ, ಗಡಿಗಳಲ್ಲಿನ ಸೇನಾ ಹಿಂತೆಗೆತದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಇದೇ ವೇಳೆ ಭಾರತ-ಚೀನಾ ಸಂಬಂಧಗಳ ಸುಧಾರಣೆಗಳ ಬಗ್ಗೆಯೂ ಜೈಶಂಕರ್, ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಚರ್ಚಿಸಿದ್ದಾರೆ.
ಭಾರತ-ಚೀನಾ ನಡುವೆ ನೇರ ವಿಮಾನ ಸಂಪರ್ಕ ಆರಂಭಿಸುವುದು, ಮಾನಸ ಸರೋವರ ಯಾತ್ರೆಯನ್ನು ಪುನಾರಂಭ ಮಾಡುವುದರ ಬಗ್ಗೆಯೂ ವಾಂಗ್ ಯಿ ಹಾಗೂ ಜೈಶಂಕರ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಪೂರ್ವ ಲಡಾಖ್ನ ಡೆಪ್ಸಾಂಗ್ ಮತ್ತು ಡೆಮ್ಚೋಕ್ನ ಎರಡು ವಿವಾದಿತ ಪ್ರದೇಶಗಳಲ್ಲಿ ಸೈನ್ಯ ಹಿಂತೆಗೆತದ ಪ್ರಕ್ರಿಯೆ ಪೂರ್ಣಗೊಂಡ ನಂತರ ಇದು ಉಭಯ ದೇಶಗಳ ನಡುವಿನ ಮೊದಲ ಉನ್ನತ ಮಟ್ಟದ ಸಭೆಯಾಗಿದೆ. ಜೈಶಂಕರ ಜೊತೆಗಿನ ಮಾತುಕತೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಸಚಿವಾಲಯ, ಇದು ಭಾರತ- ಚೀನಾ ಸಂಬಂಧದಲ್ಲಿ ಹೊಸ ಆರಂಭದ ಹಂತ” ಎಂದು ಹೇಳಿಕೊಂಡಿದೆ.
2020 ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಭಾರತ ಮತ್ತು ಚೀನಾ ನಡುವೆ ನೇರ ವಿಮಾನಯಾನ ಸ್ಥಗಿತಗೊಳಿಸಲಾಯಿತು ಮತ್ತು ನಿರ್ಬಂಧಗಳನ್ನು ತೆಗೆದುಹಾಕಿದರೂ ನಂತರ ಆರಂಭವಾಗಿರಲಿಲ್ಲ.
ಆ ವರ್ಷದ ಮೇ ತಿಂಗಳಲ್ಲಿ ಲಡಾಖ್ನಲ್ಲಿ ಘರ್ಷಣೆ ಪ್ರಾರಂಭವಾಯಿತು ಮತ್ತು ಮುಂದಿನ ತಿಂಗಳು ಲಡಾಖ್ನ ಗಾಲ್ವಾನ್ನಲ್ಲಿ ಘರ್ಷಣೆ ನಡೆಯಿತು. ಇದರಲ್ಲಿ 20 ಭಾರತೀಯ ಸೈನಿಕರು ಕೊಲ್ಲಲ್ಪಟ್ಟರು ಮತ್ತು ಚೀನಾದ ಕಡೆಯವರು ಸಹ ನಷ್ಟವನ್ನು ಅನುಭವಿಸಿದರು, ಆದರೆ ನಿಖರವಾದ ಸಂಖ್ಯೆಯನ್ನು ಚೀನಾ ಈವರೆಗೂ ದೃಢೀಕರಿಸಿಲ್ಲ. ಉಭಯ ರಾಷ್ಟ್ರಗಳ ನಡುವೆ ನಂತರದ ಹಂತದಲ್ಲಿ ಮಿಲಿಟರಿ ಮಟ್ಟದ ಮಾತುಕತೆಗಳು ನಡೆಯಲು ಪ್ರಾರಂಭವಾದವು. ಆದರೆಕೆಲ ದಿನಗಳ ಹಿಂದೆ ಇದರಲ್ಲಿ ಮಹತ್ವದ ಬೆಳವಣಿಗೆಗಳು ನಡೆದು ಉಭಯ ದೇಶಗಳು ಗಾಲ್ವಾನ್ ಪ್ರದೇಶದಲ್ಲಿನ ಸೈನ್ಯ ಹಿಂತೆಗೆತಕ್ಕೆ ಒಪ್ಪಿದ್ದವು. ನಂತರ ಹಿಂತೆಗೆತದ ಪ್ರಕ್ರಿಯೆ ನಡೆದಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ