ನವದೆಹಲಿ: ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ ತಾವ್ಡೆ ಅವರು ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಮೂವರು ಹಿರಿಯ ಕಾಂಗ್ರೆಸ್ ನಾಯಕರಿಗೆ 100 ಕೋಟಿ ರೂಪಾಯಿ ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ. . ಬುಧವಾರದ ಚುನಾವಣೆಗೆ ಮುನ್ನ ವೋಟಿಗಾಗಿ ₹ 5 ಕೋಟಿ ಹಣ ಹಂಚುತ್ತಿರುವ ಬಗ್ಗೆ ತಮ್ಮ ವಿರುದ್ಧ “ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ ಎಂದು ಹೇಳಿರುವ ಅವರು ಈ ಸಂಬಂಧ ಕಾಂಗ್ರೆಸ್ನ ಮೂರು ನಾಯಕರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
“ಪಕ್ಷದ (ಬಿಜೆಪಿ) ಇಮೇಜ್ ಹಾಳುಮಾಡುವ ಮತ್ತು ನನಗೆ ಮಾನಹಾನಿ ಮಾಡುವ ಉದ್ದೇಶದಿಂದ ಈ ಆರೋಪಗಳನ್ನು ಮಾಡಲಾಗಿದೆ” ಎಂದು ತಾವ್ಡೆ ಆರೋಪಿಸಿದ್ದಾರೆ. ನಲ್ಲಸೋಪಾರ ಪ್ರಕರಣದಲ್ಲಿ ಸುಳ್ಳು ಆರೋಪ ಮಾಡಿದ ಕುರಿತು ನಾನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಪಕ್ಷದ ವಕ್ತಾರರಾದ ಸುಪ್ರಿಯಾ ಶ್ರೀನಾತೆ ಅವರಿಗೆ ಮಾನನಷ್ಟ ನೋಟಿಸ್ ಕಳುಹಿಸಿದ್ದೇನೆ. ಏಕೆಂದರೆ ಅವರು ಸುಳ್ಳುಗಳನ್ನು ಹರಡುವ ಮೂಲಕ ನನ್ನ ಮತ್ತು ಭಾರತೀಯ ಜನತಾ ಪಕ್ಷದ ಇಮೇಜ್ಗೆ ಧಕ್ಕೆ ತರಲು ಪ್ರಯತ್ನಿಸಿದ್ದಾರೆ ಎಂದು ತಾವ್ಡೆ ಹೇಳಿದ್ದಾರೆ.
”ಸತ್ಯ ಎಲ್ಲರ ಮುಂದಿದೆ… ಚುನಾವಣಾ ಆಯೋಗ ಮತ್ತು ಪೊಲೀಸರು ನಡೆಸಿದ ತನಿಖೆಯಲ್ಲಿ ₹ 5 ಕೋಟಿ ಹಣ ಸೀಜ್ ಮಾಡಿಲ್ಲ. ಈ ಪ್ರಕರಣ ಕಾಂಗ್ರೆಸ್ನ ಕೀಳುಮಟ್ಟದ ರಾಜಕಾರಣಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಪ್ರಶ್ನಾರ್ಹವಾದ ಆರೋಪಗಳನ್ನು ಮತದಾನ ಪ್ರಾರಂಭವಾಗುವ 24 ಗಂಟೆಗಳ ಮೊದಲು ಪ್ರಾದೇಶಿಕ ಪಕ್ಷವಾದ ಬಹುಜನ ವಿಕಾಸ ಅಘಾಡಿ ಮಂಗಳವಾರ ಮೊದಲು ಮಾಡಿತು. ಬಿಜೆಪಿಯ ನಲ್ಲಸೋಪಾರ ಅಭ್ಯರ್ಥಿ ರಾಜನ ನಾಯ್ಕ ಅವರು ಮತದಾರರ ಮೇಲೆ ಪ್ರಭಾವ ಬೀರಲು ತಾವ್ಡೆ ಅವರ ಸಮ್ಮುಖದಲ್ಲಿ ನಗದು ಹಂಚುತ್ತಿದ್ದಾರೆ ಎಂದು ಬಹುಜನ ವಿಕಾಸ ಅಘಾಡಿ ಆರೋಪಿಸಿದೆ.
ಪ್ರದೇಶಿಕ ಪಕ್ಷವಾದ ಬಹುಜನ ಅಘಾಡಿಯ (BVA)ಯ ಕ್ಷಿತಿಜ್ ಠಾಕೂರ್ ಅವರು 2019 ರಲ್ಲಿ ಈ ಕ್ಷೇತ್ರದಲ್ಲಿ 43,000 ಮತಗಳಿಂದ ಗೆದ್ದಿದ್ದಾರೆ. ಈ ಬಾರಿ ಅವರು ಬಿಜೆಪಿಯ ರಾಜನ್ ನಾಯ್ಕ, ಕಾಂಗ್ರೆಸ್ನ ಸಂದೀಪ ಪಾಂಡೆ ಮತ್ತು ರಾಜ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ವಿನೋದ ಮೋರೆ ಅವರ ಸ್ಪರ್ಧೆ ಎದುರಿಸುತ್ತಿದ್ದಾರೆ.
ಬಹುಜ ವಿಕಾಸ ಅಘಾಡಿ (BVA) ಪ್ರಕಾರ, ತಾವ್ಡೆ ಮತ್ತು ಬಿಜೆಪಿ ಅಭ್ಯರ್ಥಿ ರಾಜನ ನಾಯ್ಕ ಮತದಾರರೊಂದಿಗೆ ಸಂವಾದ ನಡೆಸುತ್ತಿದ್ದ ಹೋಟೆಲ್ನಲ್ಲಿ ನಗದು ತುಂಬಿದ ಲಕೋಟೆಗಳು ಕಂಡುಬಂದಿವೆ. ಬಿವಿಎ ಬೆಂಬಲಿಗರು ತಾವ್ಡೆ ಅವರ ಮುಂದೆ ಕರೆನ್ಸಿ ನೋಟುಗಳನ್ನು ಬೀಸುತ್ತಿರುವುದನ್ನು ವೈರಲ್ ವೀಡಿಯೊಗಳು ತೋರಿಸಿವೆ. ಈವರೆಗೆ ಎರಡು ಪೊಲೀಸ್ ಪ್ರಕರಣಗಳು ದಾಖಲಾಗಿವೆ.
ತಾವ್ಡೆ ಅವರನ್ನು ಒಂದರಲ್ಲಿ ಹೆಸರಿಸಲಾಗಿದೆ. ಎರಡನೆಯದರಲ್ಲಿ, ಅವರ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಜಿಲ್ಲಾಧಿಕಾರಿಗಳ ಪ್ರಕಾರ ₹ 9,93,000 ನಗದು ಪತ್ತೆಯಾಗಿದೆ. ಆದರೆ ಈಗಾಗಲೇ ₹ 5 ಕೋಟಿ ವಿತರಿಸಲಾಗಿದೆ ಎಂದು ಬಹಜನ ವಿಕಾಸ ಅಘಾಡಿ (BVA) ಆರೋಪಿಸಿದೆ ಮತ್ತು ಸ್ವೀಕರಿಸುವವರ ವಿವರಗಳು ತಾವ್ಡೆ ಡೈರಿಯಲ್ಲಿದೆ ಎಂದು ಆರೋಪಿಸಿದೆ.
ಬಿಜೆಪಿಯು “ಆಧಾರರಹಿತ” ಆರೋಪ ಎಂದು ಹೇಳಿತು ಮತ್ತು ಮತದಾನದ ಮುನ್ನಾದಿನದಂದು ಬಿವಿಎ(BVA)ಯ ರಾಜಕೀಯ ಸ್ಟಂಟ್ ಎಂದು ಕರೆದಿದೆ. ಚುನಾವಣಾ ಪೂರ್ವ ತಯಾರಿ ಕುರಿತು ಚರ್ಚಿಸಲು ತಾವ್ಡೆ ಅವರು ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗಿದ್ದಾರೆ ಅಷ್ಟೆ ಎಂದು ಪಕ್ಷ ತಿಳಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ