ಹೈದರಾಬಾದ್ ; ಖ್ಯಾತ ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ರಾಮಗೋಪಾಲ ವರ್ಮಾ ಅವರಿಗೆ ಮುಂಬೈ ನ್ಯಾಯಾಲಯವು ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ನ್ಯಾಯಾಲಯದ ತೀರ್ಪು ಹಲವಾರು ವರ್ಷಗಳಿಂದ ನಡೆಯುತ್ತಿರುವ ಕಾನೂನು ಹೋರಾಟದ ನಂತರ ಬಂದಿದೆ. ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಕೂಡ ಹೊರಡಿಸಲಾಗಿದೆ.
ಅಂಧೇರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮಂಗಳವಾರ (ಜನವರಿ 21) ಚೆಕ್ ಬೌನ್ಸ್ ಪ್ರಕರಣದ ತೀರ್ಪನ್ನು ಚಿತ್ರನಿರ್ಮಾಪಕ ರಾಮಗೋಪಾಲ ವರ್ಮಾ ಅವರು ತನ್ನ ಮುಂಬರುವ ಚಲನಚಿತ್ರ ಸಿಂಡಿಕೇಟ್ ಅನ್ನು ಘೋಷಿಸುವ ಒಂದು ದಿನ ಮೊದಲು ನಿಗದಿಪಡಿಸಿತ್ತು. ಇದೀಗ ತೆಲಂಗಾಣ ಟುಡೇ ವರದಿ ಪ್ರಕಾರ, ಏಳು ವರ್ಷಗಳ ಕಾಲ ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಮುಂಬೈ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ ಎಂದು ಹೇಳಿಕೊಂಡಿದೆ.
ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ನ ಸೆಕ್ಷನ್ 138 ರ ಅಡಿಯಲ್ಲಿ ರಾಮಗೋಪಾಲ ವರ್ಮಾ ತಪ್ಪಿತಸ್ಥರೆಂದು ಸಾಬೀತಾಗಿದೆ.ಜೈಲು ಶಿಕ್ಷೆಯ ಜೊತೆಗೆ, ದೂರುದಾರರಿಗೆ ಪರಿಹಾರ ನೀಡಲು ರಾಮಗೋಪಾಲ ವರ್ಮಾ 3.75 ಲಕ್ಷ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ ಮತ್ತು ಮೂರು ತಿಂಗಳಲ್ಲಿ ಅದನ್ನು ಮಾಡಲು ವಿಫಲವಾದರೆ, ಅವರಿಗೆ ಹೆಚ್ಚುವರಿ ಮೂರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.
ಆರ್ಜಿವಿ ಸಂಸ್ಥೆಯ ವಿರುದ್ಧ 2018 ರಲ್ಲಿ ಮಹೇಶ್ಚಂದ್ರ ಮಿಶ್ರಾ ಮೂಲಕ ಶ್ರೀ ಹೆಸರಿನ ಕಂಪನಿಯು ದೂರು ಸಲ್ಲಿಸಿದ ನಂತ ಈ ಪ್ರಕರಣವು ಉದ್ಭವಿಸಿದೆ, ವರ್ಮಾ ನೀಡಿದ ಚೆಕ್ ಬೌನ್ಸ್ ಆಗಿದೆ ಎಂದು ಆರೋಪಿಸಲಾಗಿತ್ತು. ಜೂನ್ 2022 ರಲ್ಲಿ, ನಿರ್ದೇಶಕರಿಗೆ ವೈಯಕ್ತಿಕ ಬಾಂಡ್ ಮತ್ತು 5000 ರೂ. ಭದ್ರತಾ ಠೇವಣಿ ನೀಡಿದ ನಂತರ ಜಾಮೀನು ನೀಡಲಾಯಿತು. ಆರ್ಜಿವಿ ‘ವಿಚಾರಣೆಯ ಸಮಯದಲ್ಲಿ ಕಸ್ಟಡಿಯಲ್ಲಿಲ್ಲ’ ಎಂಬ ಕಾರಣಕ್ಕೆ ‘ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 428 ರ ಅಡಿಯಲ್ಲಿ ಯಾವುದೇ ಸೆಟ್-ಆಫ್’ ಇರುವುದಿಲ್ಲ ಎಂದು ಮ್ಯಾಜಿಸ್ಟ್ರೇಟ್ ಸ್ಪಷ್ಟಪಡಿಸಿದರು.
ಹಲವಾರು ವಿಚಾರಣೆಗಳು ಮತ್ತು ಕಾನೂನು ಪ್ರಕ್ರಿಯೆಗಳ ನಂತರ, ನ್ಯಾಯಾಲಯವು ಚಲನಚಿತ್ರ ನಿರ್ಮಾಪಕರ ವಿರುದ್ಧ ತೀರ್ಪು ನೀಡಿತು, ಆರೋಪಗಳನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿವೆ ಎಂದು ಅದು ಹೇಳಿದೆ.
ಸತ್ಯ, ಕಂಪನಿ ಮತ್ತು ಸರ್ಕಾರ್ನಂತಹ ಅದ್ಭುತ ಚಿತ್ರಗಳಿಗೆ ಹೆಸರುವಾಸಿಯಾಗಿರುವ ರಾಮಗೋಪಾಲ ವರ್ಮಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. “ನನ್ನ ಮತ್ತು ಅಂಧೇರಿ ನ್ಯಾಯಾಲಯದ ಕುರಿತಾದ ಸುದ್ದಿಗಳಿಗೆ ಸಂಬಂಧಿಸಿದಂತೆ, ನನ್ನ ಮಾಜಿ ಉದ್ಯೋಗಿಗೆ ಸಂಬಂಧಿಸಿದ 7 ವರ್ಷಗಳ ಹಿಂದಿನ 2.38 ಲ್ಷ ರೂ.ಗಳ ಮೊತ್ತದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಸ್ಪಷ್ಟಪಡಿಸಲು ಬಯಸುತ್ತೇನೆ .. ನನ್ನ ವಕೀಲರು ಅದಕ್ಕೆ ಹಾಜರಾಗುತ್ತಿದ್ದಾರೆ. ಮತ್ತು ವಿಷಯವು ನ್ಯಾಯಾಲಯದಲ್ಲಿರುವುದರಿಂದ ನಾನು ಮುಂದೆ ಏನನ್ನೂ ಹೇಳಲಾರೆ ಎಂದು ಅವರು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ