ಮಂಡ್ಯ: ಅಣ್ಣ ತಮ್ಮ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಸಿಡಿದು (Firing) 3 ವರ್ಷದ ಮಗು ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೊಂದೆಮಾದಿಹಳ್ಳಿಯ ಕೋಳಿ ಫಾರಂ ಒಂದರಲ್ಲಿ ಭಾನುವಾರ (ಫೆ. 16) ನಡೆದಿದೆ ಎಂದು ವರದಿಯಾಗಿದೆ.
ಮಕ್ಕಳು ಅದು ನಿಜವಾದ ಬಂದೂಕು ಎಂದು ತಿಳಿಯದೆ ಆಟವಾಡುವ ಬಂದೂಕು ಎಂದು ತಿಳದು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಸಿಡಿದಿದೆ ಎಂದು ಹೇಳಲಾಗಿದೆ. ಮೃತ ಬಾಲಕನನ್ನು ಪಶ್ಚಿಮ ಬಂಗಾಳ ಮೂಲಕ ಅಭಿಷೇಕ (3) ಎಂದು ಗುರುತಿಸಲಾಗಿದೆ. ಈತ ಕೋಳಿ ಪಾರಂನಲ್ಲಿ ಕೆಸ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಶಶಾಂಕ ದಾಸ್ ಮತ್ತು ಲಿಪಿಕಾ ದಂಪತಿಯ ಪುತ್ರ.
ಪಶ್ಚಿಮ ಬಂಗಾಳ ಮೂಲದ ಶಶಾಂಕ ಹಾಗೂ ಲಿಪಿಕ ದಂಪತಿ ಕೋಳಿ ಫಾರಂನಲ್ಲಿ ಹಲವು ವರ್ಷಗಳಿಂದ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಭದ್ರತೆಗಾಗಿ ಕೋಳಿ ಫಾರಂನಲ್ಲಿ ಒಂದು ನಿಜವಾದ ಗನ್ ಇಡಲಾಗಿತ್ತು. ಅದು ಸಜೀವ ಗುಂಡುಗಳಿಂದ ಲೋಡ್ ಆಗಿತ್ತು. ಶಶಾಂಕ ಹಾಗೂ ಲಿಪಿಕರನ್ನ ನೋಡಲು ಅವರ ಭಾವ ಶಂಕರ ದಾಸ್ ಬಂದಿದ್ದರು. ಅವರ ಜೊತೆ ಅವರ ಮಗ ಸುದೀಪ ದಾಸ್ ಕೂಡ ಬಂದಿದ್ದ. 13 ವರ್ಷದ ಬಾಲಕ ಸುದೀಪ ದಾಸ್ನೊಂದಿಗೆ 3 ವರ್ಷದ ಮಗುವನ್ನು ಆಟವಾಡುತ್ತಿತ್ತು.. ಈ ವೇಳೆ ಬಾಲಕ ಸುದೀಪಗೆ ಗನ್ ಸಿಕ್ಕಿದೆ.
ಇದು ಆಟಿಕೆಯ ಗನ್ ಎಂದು ಭಾವಿಸಿ ಆಡಲು ತೆಗೆದುಕೊಂಡಿದ್ದು, ಕಳ್ಳ ಪೊಲೀಸ್ ಆಟವಾಡುತ್ತಿದ್ದಾಗ ಆತನ ಕೈಯಿಂದ ಆಕಸ್ಮಿಕವಾಗಿ ಫೈರಿಂಗ್ ಆಗಿದೆ ಎನ್ನಲಾಗಿದೆ. ಘಟನೆಯಲ್ಲಿ ಪುಟ್ಟ ಮಗುವಿನ ಹೊಟ್ಟೆಯೊಳಗೆ ಗುಂಡು ಹೊಕ್ಕಿದೆ ಎನ್ನಲಾಗಿದ್ದು, ಮಗುವನ್ನು ತಕ್ಷಣವೇ ಆಸ್ಪತ್ರೆಗೆ ಒಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಅಭಿಷೇಕ ಅವರ ತಾಯಿ ಲಿಪಿಕಾಗೂ ಗಾಯವಾಗಿದೆ.
ಈ ಕೋಳಿ ಫಾರಂ ನರಸಿಂಹಮೂರ್ತಿ ಎಂಬವರಿಗೆ ಸೇರಿದ್ದು ಎಂದು ಹೇಳಲಾಗಿದೆ. ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ