ನವದೆಹಲಿ: ಆಪಾದಿತ ಮದ್ಯ ಹಗರದಲ್ಲಿ ಮಾಜಿ ಮುಖ್ಯಮಂತ್ರಿ ಭೂಪೇಶ ಬಾಘೇಲ್ ಪುತ್ರ ತನಿಖೆ ಎದುರಿಸುತ್ತಿದ್ದು, ಛತ್ತೀಸ್ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ ಬಾಘೇಲ್ ಅವರ ನಿವಾಸದಲ್ಲಿ ಶೋಧ ನಡೆಸಿದ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳ ಮೇಲೆ ಜನರ ಗುಂಪೊಂದು ದಾಳಿ ನಡೆಸಿದೆ.
ಸೋಮವಾರ ಮುಂಜಾನೆ, ಇಡಿಯು ಆಪಾದಿತ ಮದ್ಯ ಹಗರಣದ ಬಗ್ಗೆ ನಡೆಯುತ್ತಿರುವ ತನಿಖೆಯ ಭಾಗವಾಗಿ ಬೂಪೇಶ ಬಾಘೆಲ್ ಮತ್ತು ಅವರ ಮಗ ಚೈತನ್ಯ ಅವರ ಒಡೆತನದ ವಸತಿ ಮತ್ತು ಇತರ ಆವರಣಗಳು ಸೇರಿದಂತೆ ದುರ್ಗ ಜಿಲ್ಲೆಯ 14 ಸ್ಥಳಗಳ ಮೇಲೆ ದಾಳಿ ನಡೆಸಿತು.
ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ದಾಳಿಯಿಂದ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು, ಬಾಘೇಲ್ ಅವರ ನಿವಾಸದ ಹೊರಗೆ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿಯೊಂದಿಗೆ ಘರ್ಷಣೆಗೆ ಇಳಿದರು. ಮತ್ತು ತನಿಖಾ ಸಂಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಘರ್ಷಣೆಯ ಸಮಯದಲ್ಲಿ, ಕೆಲವು ಇಡಿ ಸಿಬ್ಬಂದಿಯನ್ನು ಮ್ಯಾನ್ ಹ್ಯಾಂಡಲ್ ಮಾಡಲಾಗಿದೆ. ಅಲ್ಲದೆ, ಅವರ ಕಾರನ್ನು ಸುತ್ತುವರೆದು ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ. ಪ್ರತಿಭಟನಾಕಾರರ ವಿರುದ್ಧ ತನಿಖಾ ಸಂಸ್ಥೆ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ.
ಸೋಮವಾರ ಮುಂಜಾನೆ, ಛತ್ತೀಸಗಢದಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ಮದ್ಯದ ಹಗರಣಕ್ಕೆ ಸಂಬಂಧಿಸಿದಂತೆ ಚೈತನ್ಯ ಬಾಘೇಲ್ ಅವರ ನಿವಾಸದಲ್ಲಿ ತನಿಖಾ ಸಂಸ್ಥೆ ವ್ಯಾಪಕ ಶೋಧ ನಡೆಸಿತು.
ಅವರ ನಿವಾಸದ ಮೇಲೆ ಇಡಿ ದಾಳಿಗಳು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪ್ರತಿಪಕ್ಷಗಳಿಗೆ “ಕಿರುಕುಳ” ನೀಡುವ “ರಾಜಕೀಯ ಸೇಡು” ಎಂದು ಭೂಪೇಶ ಬಘೇಲ್ ಹೇಳಿದ್ದಾರೆ. ಇಡಿ ಅಧಿಕಾರಿಗಳು ಬೆಳಿಗ್ಗೆ 7:30 ಕ್ಕೆ ತಮ್ಮ ದುರ್ಗ್ ನಿವಾಸಕ್ಕೆ ಚಹಾ ಹೀರುತ್ತಿದ್ದಾಗ ಬಂದರು. ಎಫ್ಐಆರ್ನಂತೆಯೇ ಇರುವ ಇಸಿಐಆರ್ ಸಂಖ್ಯೆಯನ್ನು ನಾನು ಕೇಳಿದಾಗ ನೀಡಿಲ್ಲ ಎಂದು ಆರೋಪಿಸಿದರು. ಛತ್ತೀಸಗಢ ವಿಧಾನಸಭೆಗೆ ಹಾಜರಾಗಲು ಹಾಗೂ ತಮ್ಮ ಫೋನ್ ಬಳಸಲು ಅನುಮತಿ ನೀಡಿಲ್ಲ ಎಂದು ಅವರು ಪ್ರತಿಪಾದಿಸಿದರು.
“ಅವರು ನನ್ನನ್ನು ಇಂದು ವಿಧಾನಸೌಧಕ್ಕೆ ಹೋಗಲು ಬಿಡಲಿಲ್ಲ. ಅವರು ಫೋನ್ನಲ್ಲಿ ಮಾತನಾಡದಂತೆ ನನ್ನನ್ನು ತಡೆದರು. ನನ್ನ ಮಗಳು, ನನ್ನ ಮಗ, ಸೊಸೆ ಮತ್ತು ಮೊಮ್ಮಕ್ಕಳು ಇಲ್ಲೇ ಇದ್ದಾರೆ. ನಾವು ಪ್ರಾಥಮಿಕವಾಗಿ 140 ಎಕರೆ ಭೂಮಿಯಲ್ಲಿ ಕೃಷಿಯ ಮೂಲಕ ಸಂಪಾದಿಸುತ್ತೇವೆ” ಎಂದು ಅವರು ಹೇಳಿದರು.
ಇಡಿ ತನ್ನ ನಿವಾಸಕ್ಕೆ ನಗದು ಎಣಿಕೆ ಯಂತ್ರವನ್ನು ತರುವುದನ್ನು ಮಾಧ್ಯಮದ ಸ್ಟಂಟ್ ಎಂದು ಅವರು ತಳ್ಳಿಹಾಕಿದ್ದಾರೆ. “ನಮ್ಮಲ್ಲಿ ಸಾಕಷ್ಟು ಜಮೀನು ಮತ್ತು ಚಿನ್ನಾಭರಣಗಳಿರುವುದರಿಂದ ನಗದು ವಶಪಡಿಸಿಕೊಳ್ಳಲಾಗಿದೆ. ಮನೆಯಿಂದ 35 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ, ಇದಕ್ಕಾಗಿ ಮಾಧ್ಯಮದಲ್ಲಿ ಇದರ ಪ್ರಚಾರಕ್ಕಾಗಿ ಹಣ ಎಣಿಸುವ ಯಂತ್ರಗಳನ್ನು ಸಹ ತರಲಾಗಿದೆ. ಇದು ದೊಡ್ಡ ಮೊತ್ತ ಎಂದು ನಾನು ಭಾವಿಸುವುದಿಲ್ಲ,” ಎಂದು ಅವರು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ