ಹೆಂಡ..ವಿಷ..ಬೃಹನ್ನಾಟಕ : ಸದ್ದಿಲ್ಲದೆ 8 ಜನರ ಕೊಂದು ಶವಯಾತ್ರೆಗೆ ಹೋಗಿ ಕಣ್ಣೀರಿಡುತ್ತಿದ್ದ ; ಈತನ ರಕ್ತಚರಿತ್ರೆಗೆ ಪೊಲೀಸರೇ ದಂಗು…!

ಬಲೋದಾಬಜಾರ್ (ಛತ್ತೀಸಗಢ್): ಗುಂಡಿನ ಸದ್ದುಗಳಿಲ್ಲ, ಆಕ್ರಂದನವಿಲ್ಲ, ರಕ್ತಪಾತವೂ ಇಲ್ಲ… ಆದರೆ ಸಾವು ಮಾತ್ರ ಆ ಇಡೀ ಹಳ್ಳಿಯನ್ನೇ ನಡುಗಿಸಿಬಿಟ್ಟಿದೆ ! ಛತ್ತೀಸಗಢದ ಬಲೋದಾಬಜಾರ್ ಜಿಲ್ಲೆಯ ಖಾರ್ವೆ ಗ್ರಾಮದಲ್ಲಿ ಕಳೆದ ನಾಲ್ಕು ತಿಂಗಳಿಂದ ಸದ್ದಿಲ್ಲದೆ ನಡೆದ ಸರಣಿ ನಿಗೂಢ ಸಾವುಗಳ ಬೆನ್ನತ್ತಿದ ಪೊಲೀಸರಿಗೆ ಎದೆ ನಡುಗಿಸುವ ಸತ್ಯವೊಂದು ಬಯಲಾಗಿದೆ. ಕೇವಲ ಕ್ಷುಲ್ಲಕ ಕಾರಣಗಳಿಗಾಗಿ ಗ್ರಾಮದ ಎಂಟು ಜನರನ್ನು … Continued

ಕೇವಲ 23ನೇ ವಯಸ್ಸಿಗೆ 19 ಸರ್ಕಾರಿ ಪರೀಕ್ಷೆ ಪಾಸ್ ! ರಾಷ್ಟ್ರಪತಿಯಿಂದ ‘ಅಟ್-ಹೋಮ್’ ಗೌರವಕ್ಕೆ ಆಯ್ಕೆಯಾದ ಯುವತಿ

ನವದೆಹಲಿ: ಭಾರತದಲ್ಲಿ ಪ್ರತಿವರ್ಷ ಲಕ್ಷಾಂತರ ಯುವಕ-ಯುವತಿಯರು ಸರ್ಕಾರಿ ಉದ್ಯೋಗಗಳಿಗಾಗಿ ಪರೀಕ್ಷೆ ಬರೆಯುತ್ತಾರೆ. ಆದರೆ ಅತ್ಯಂತ ಕಠಿಣವಾದ ಈ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುವವರ ಪ್ರಮಾಣ ಶೇಕಡಾ 0.5 ಕ್ಕಿಂತಲೂ ಕಡಿಮೆ. ಇಂತಹ ತೀವ್ರ ಪೈಪೋಟಿಯ ನಡುವೆ, ಛತ್ತೀಸ್‌ಗಢದ ರಾಯ್ಪುರದ 23 ವರ್ಷದ ಯುವತಿ ಚಾರು ಪಾಂಡೆ ಬರೋಬ್ಬರಿ 19 ಸರ್ಕಾರಿ ಉದ್ಯೋಗದ ನೇಮಕಾತಿ ಪರೀಕ್ಷೆಗಳನ್ನು ಪಾಸ್ … Continued

ವೀಡಿಯೊ..| ಪೆಟ್ರೋಲ್ ಪಂಪ್‌ನಲ್ಲಿ ಸಿಗರೇಟ್‌ ಹಚ್ಚಬೇಡಿ ಎಂದಿದ್ದಕ್ಕೆ ಬೈಕಿನ ಇಂಧನ ಟ್ಯಾಂಕಿಗೆ ಲೈಟರ್ ಎಸೆದ ವ್ಯಕ್ತಿ..! ಉರಿದ ಬೆಂಕಿ

ರಾಯ್ಪುರ: ಪೆಟ್ರೋಲ್ ಬಂಕ್‌ನಲ್ಲಿ ಸಿಗರೇಟ್ ಲೈಟರ್ ಮೂಲಕ ಮೋಟಾರ್ ಸೈಕಲ್‌ಗೆ ಬೆಂಕಿ ಹಚ್ಚಲು ಯತ್ನಿಸಿದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಸಮಯಪ್ರಜ್ಞೆ ಮೆರೆದ ಬಂಕ್ ಉದ್ಯೋಗಿಯೊಬ್ಬರು ತಕ್ಷಣವೇ ಬೆಂಕಿಯನ್ನು ನಂದಿಸುವ ಮೂಲಕ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ. ರಾಯ್‌ಪುರದ ಉರ್ಲಾ ಪ್ರದೇಶದ ಕರ್ಮ ಚೌಕ್ ಬಳಿಯ ‘ಸಂಗೀತ ಫ್ಯುಯೆಲ್ಸ್’ ಪೆಟ್ರೋಲ್ ಬಂಕ್‌ನಲ್ಲಿ ಫೆಬ್ರವರಿ 18 ರ ರಾತ್ರಿ … Continued

“ನಾವು ಜೀವಂತವಾಗಿದ್ದೆವು, ಆದರೆ ಬದುಕಿರಲಿಲ್ಲ..”: ಅಪಘಾತದಲ್ಲಿ ಮಗನ ಸಾವಿನ ನಂತರ ಒಂದೇ ಸೀರೆ ಕುಣಿಕೆಗೆ ಕೊರಳೊಡ್ಡಿದ ದಂಪತಿ

ಜಾಂಜ್‌ಗೀರ್-ಚಾಂಪಾ (ಛತ್ತೀಸ್‌ಗಢ): ಆ ಮನೆಯ ಅಂಗಳದಲ್ಲಿದ್ದ ಬೇವು ಕೇವಲ ನೆರಳನ್ನಷ್ಟೇ ನೀಡುತ್ತಿರಲಿಲ್ಲ, ಆ ಕುಟುಂಬದ ನಗು-ಅಳುವಿಗೆ ಸಾಕ್ಷಿಯಾಗಿತ್ತು. ಆದರೆ ಸೋಮವಾರ ಬೆಳಿಗ್ಗೆ ಅದೇ ಬೇವಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಕೃಷ್ಣ ಪಟೇಲ್ ಮತ್ತು ರಮಾ ಬಾಯಿ ಅವರ ಮೃತದೇಹಗಳು ಇಡೀ ಗ್ರಾಮವನ್ನೇ ಮೌನಕ್ಕೆ ಶರಣಾಗುವಂತೆ ಮಾಡಿವೆ. ಛತ್ತೀಸ್‌ಗಢದ ಜಾಂಜ್‌ಗೀರ್-ಚಾಂಪಾ ಜಿಲ್ಲೆಯ ಧರ್ದೇಯಿ ಗ್ರಾಮದಲ್ಲಿ ನಡೆದ … Continued

ಛತ್ತೀಸಗಢ: ರಾತ್ರೋರಾತ್ರಿ 60 ಅಡಿ ಉದ್ದ, 30 ಟನ್ ತೂಕದ ಕಬ್ಬಿಣದ ಸೇತುವೆಯನ್ನೇ ಕದ್ದೊಯ್ದ ಕಳ್ಳರು…!

ರಾಯ್ಪುರ: ಚೋರರ ತಂಡವೊಂದು ಬರೋಬ್ಬರಿ 60 ಅಡಿ ಉದ್ದದ ಕಬ್ಬಿಣದ ಸೇತುವೆಯನ್ನೇ ತುಂಡು ತುಂಡಾಗಿ ಕತ್ತರಿಸಿ ಕದ್ದೊಯ್ದಿರುವ ವಿಲಕ್ಷಣ ಘಟನೆ ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ನಡೆದಿದೆ. ಕೊರ್ಬಾ ಜಿಲ್ಲಾ ಕೇಂದ್ರದ ದೋಧಿಪಾರಾ ಪ್ರದೇಶದಲ್ಲಿ ಹಸ್ದಿಯೋ ಕಾಲುವೆಯ ಮೇಲೆ ಈ ಬೃಹತ್ ಕಬ್ಬಿಣದ ಸೇತುವೆಯನ್ನು ನಿರ್ಮಿಸಲಾಗಿತ್ತು. ಸುಮಾರು 30 ಟನ್ ತೂಕದ ಈ ಸೇತುವೆಯನ್ನು ಸ್ಕ್ರ್ಯಾಪ್ ಮಾಫಿಯಾ … Continued

ತಾಯಿಯ ಕೈಯಲ್ಲಿದ್ದ 20 ದಿನದ ಶಿಶುವನ್ನು ಹೊತ್ತೊಯ್ದು ಬಾವಿಗೆ ಎಸೆದ ಮಂಗ ; ಮಗುವನ್ನು ಕಾಪಾಡಿದ ಡೈಪರ್‌…!

ರಾಯ್ಪುರ: ಛತ್ತೀಸ್‌ಗಢದ ಜಾಂಜ್‌ಗೀರ್-ಚಂಪಾ ಜಿಲ್ಲೆಯ ಸೆವ್ನಿ ಗ್ರಾಮದಲ್ಲಿ ಮೈಮನ ಜುಂ ಎನಿಸುವ ಘಟನೆಯೊಂದು ನಡೆದಿದೆ. ಮಂಗವೊಂದು ತಾಯಿಯ ಮಡಿಲಲ್ಲಿದ್ದ 20 ದಿನದ ಹಸುಗೂಸನ್ನು ಹೊತ್ತೊಯ್ದು ಬಾವಿಗೆ ಎಸೆದಿತ್ತು,  ಗ್ರಾಮಸ್ಥರ ಸಮಯಪ್ರಜ್ಞೆ ಮತ್ತು ನರ್ಸ್ ಒಬ್ಬರ ಸಮಯೋಚಿತ ಚಿಕಿತ್ಸೆಯಿಂದ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದೆ.  ಬುಧವಾರ ಸುನೀತಾ ರಾಥೋಡ ಎಂಬ ಮಹಿಳೆ ತಮ್ಮ 20 ದಿನದ ಹೆಣ್ಣು … Continued

ಹಿರಿಯ ಹಿಂದಿ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿನೋದಕುಮಾರ ಶುಕ್ಲಾ ನಿಧನ

ನವದೆಹಲಿ: ಹಿಂದಿ ಸಾಹಿತ್ಯ ಲೋಕದ ದಿಗ್ಗಜ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ವಿನೋದಕುಮಾರ ಶುಕ್ಲಾ (89) ಅವರು ವಯೋಸಹಜ ಕಾಯಿಲೆಯಿಂದಾಗಿ ಮಂಗಳವಾರ ಸಂಜೆ ರಾಯ್ಪುರದಲ್ಲಿ ನಿಧನರಾದರು. ಛತ್ತೀಸ್‌ಗಢ ಮೂಲದವರಾದ ಶುಕ್ಲಾ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಡಿಸೆಂಬರ್ 2 ರಂದು ಅವರನ್ನು ರಾಯ್‌ಪುರದ ಏಮ್ಸ್ (AIIMS) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಂಜೆ 4:48ಕ್ಕೆ … Continued

ಸತ್ತು ಅಂತ್ಯಸಂಸ್ಕಾರವಾದ ವ್ಯಕ್ತಿ ವಾರದ ನಂತರ ಬದುಕಿ ‘ಮನೆಗೆ’ ಬಂದ…! ಗ್ರಾಮದಲ್ಲಿ ಆಶ್ಚರ್ಯ…ಗೊಂದಲ….ಆನಂದ

ಸೂರಜಪುರ: ಛತ್ತೀಸ್‌ಗಢದ ಒಂದು ಗ್ರಾಮದಲ್ಲಿ ಕೇವಲ ಒಂದು ವಾರದ ಅವಧಿಯಲ್ಲಿ, 25 ವರ್ಷದ ಯುವಕನೊಬ್ಬ ದುಃಖ, ಆಘಾತ ಮತ್ತು ಕೊನೆಯಲ್ಲಿ ಸಂತೋಷಕ್ಕೆ ಕಾರಣವಾದ ಘಟನೆಯ ಕೇಂದ್ರಬಿಂದುವಾಗಿದ್ದಾನೆ. ಯುವಕ ಪುರುಷೋತ್ತಮ (Purushottam) ಮೃತಪಟ್ಟಿದ್ದಾನೆಂದು ನಂಬಿ ಶವವೊಂದನ್ನು ಅಂತ್ಯ ಸಂಸ್ಕಾರ ಮಾಡಿದ ಆತನ ಕುಟುಂಬ ಶೋಕದಲ್ಲಿ ಮುಳುಗಿತ್ತು. ಆದರೆ, ನಂತರ ಪುರುಷೋತ್ತಮ ಬೇರೆಡೆ ಕಾಣಿಸಿಕೊಂಡಿದ್ದಾನೆ ಎಂಬ ಸುದ್ದಿ ಸಂಬಂಧಿಕರಿಂದ … Continued

ಪ್ರಯಾಣಿಕರ ರೈಲು-ಸರಕು ರೈಲು ಡಿಕ್ಕಿ ; 8 ಮಂದಿ ಸಾವು

ಬಿಲಾಸಪುರ: ಛತ್ತೀಸ್‌ಗಢದ ಬಿಲಾಸಪುರ ಜಿಲ್ಲೆಯ ಲಾಲ್‌ಖಡನ್ ಬಳಿ ಮಂಗಳವಾರ ಪ್ರಯಾಣಿಕರ ರೈಲು (68733) ಮತ್ತು ಗೂಡ್ಸ್ ರೈಲು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಎಂಟು ಜನರು ಸಾವಿಗೀಡಾಗಿದ್ದಾರೆ. ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ, ಪ್ರಯಾಣಿಕ ರೈಲಿನ ಹಲವಾರು ಬೋಗಿಗಳು ಒಂದರ ಮೇಲೊಂದು ಹತ್ತಿ ಭೀಕರ ದೃಶ್ಯ ಸೃಷ್ಟಿಸಿದವು. ಘಟನೆ ನಡೆದ ತಕ್ಷಣ, ರೈಲ್ವೆ ಆಡಳಿತ ಮತ್ತು … Continued

20 ವರ್ಷದಿಂದ ಮಗುವಿನಂತೆ ಸಲಹಿದ್ದ ಅಶ್ವತ್ಥ ಮರ ಕಡಿದ ದುಷ್ಕರ್ಮಿಗಳು ; ಕಣ್ಣೀರು ಹಾಕಿದ 85ರ ವೃದ್ಧೆಯ ಹೃದಯವಿದ್ರಾವಕ ವೀಡಿಯೊ ವೈರಲ್‌

 ಛತ್ತೀಸ್‌ಗಢ: ಛತ್ತೀಸ್‌ಗಢದ ಖೈರಾಗಢ ಜಿಲ್ಲೆಯ ಸಾರಾ ಗೋಂಡಿ ಗ್ರಾಮದಲ್ಲಿ, ಕಳೆದ ಎರಡು ದಶಕಗಳಿಂದ ತಾನು ಪೋಷಿಸಿದ ಅಶ್ವತ್ಥ ಮರ ಮರವನ್ನು ಅಕ್ರಮವಾಗಿ ಕಡಿದುಹಾಕಿದ ಕಾರಣ 85 ವರ್ಷದ ವೃದ್ಧೆಯೊಬ್ಬರು ಕಣ್ಣೀರು ಹಾಕಿದ ಹೃದಯವಿದ್ರಾವಕ ಘಟನೆಯ ವೀಡಿಯೊ ವೈರಲ್‌ ಆಗಿದೆ. ದಿಯೋಲಾ ಬಾಯಿ ಎಂಬ ಈ ವೃದ್ಧೆ ಸುಮಾರು 20 ವರ್ಷಗಳ ಹಿಂದೆ ತಮ್ಮ ಮನೆಯ ಜಾಗದಲ್ಲಿ … Continued