ಅಮಿತ್ ಶಾ ವಿರುದ್ಧದ ಹೇಳಿಕೆ: ರಾಹುಲ್ ಗಾಂಧಿಗೆ ಹಕ್ಕುಚ್ಯುತಿ ನೋಟಿಸ್, ಆ.28ರೊಳಗೆ ಉತ್ತರಿಸಲು ಲೋಕಸಭೆ ಸಚಿವಾಲಯ ಸೂಚನೆ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಲೋಕಸಭೆಯಲ್ಲಿ ಮಾಡಿರುವ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿಪಕ್ಷ ನಾಯಕ (LoP) ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದರಾದ ಅನುರಾಗ ಠಾಕೂರ್ ಮತ್ತು ಸಂಜಯ ಜೈಸ್ವಾಲ್ ಸಲ್ಲಿಸಿರುವ ಪ್ರತ್ಯೇಕ ಹಕ್ಕುಚ್ಯುತಿ ದೂರುಗಳ ಕುರಿತು ಲೋಕಸಭೆ ಕಾರ್ಯಾಲಯ ಸ್ಪಷ್ಟನೆ ಕೇಳಿದ್ದು, ಆಗಸ್ಟ್ 28ರೊಳಗೆ ಉತ್ತರ … Continued

ದೇಶದೊಳಕ್ಕೆ ಅಕ್ರಮವಾಗಿ ಅಡಿಕೆ ಬರುವುದನ್ನು ತಡೆಯಲು ಕ್ರಮ ; ನಿಯೋಗಕ್ಕೆ ಕೇಂದ್ರ ಸಚಿವ ಅಮಿತ್‌ ಶಾ ಭರವಸೆ

ನವದೆಹಲಿ : ಅಡಿಕೆ ಬೆಳೆಗಾರರು ಹಾಗೂ ಸಹಕಾರ ಸಂಸ್ಥೆಗಳು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ರಾಜ್ಯದ ಸಂಸದರು, ಶಾಸಕರು, ಕ್ಯಾಂಪ್ಕೋ ಹಾಗೂ ಅಡಿಕೆ ಮಹಾಮಂಡಳದ ಪ್ರತಿನಿಧಿಗಳನ್ನು ಒಳಗೊಂಡ ನಿಯೋಗವು ಶನಿವಾರ ನವದೆಹಲಿಯಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತು. … Continued

ʼವಂದೇ ಮಾತರಂ’ಗೆ ಅವಮಾನಿಸಿದರೆ ಜೈಲು ಶಿಕ್ಷೆ: ಸಂಸತ್ತಿನಲ್ಲಿ ಮಸೂದೆ ಮಂಡಿಸಲಿರುವ ಅಮಿತ್ ಶಾ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನ ಮುಂಗಾರು ಅಧಿವೇಶನದ ಸೋಮವಾರದ ಕಲಾಪದಲ್ಲಿ ‘ಪ್ರಿವೆನ್ಷನ್ ಆಫ್ ಇನ್ಸಲ್ಟ್ಸ್ ಟು ನ್ಯಾಷನಲ್ ಹಾನರ್ (ತಿದ್ದುಪಡಿ) ಮಸೂದೆ, 2026’ ಅನ್ನು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಮಸೂದೆಯ ಕಾನೂನು ಮತ್ತು ನ್ಯಾಯಾಂಗ ರಕ್ಷಣೆಗಳನ್ನು ರಾಷ್ಟ್ರೀಯ ಗೀತೆ ವಂದೇ ಮಾತರಂಗೆ ನೀಡುವ ಉದ್ದೇಶ ಹೊಂದಿದೆ. ಕೇಂದ್ರ … Continued

ಪ್ರಧಾನಿ ಮೋದಿ-ಬಿಜೆಪಿ ಉನ್ನತ ನಾಯಕರ ಮಹತ್ವದ ಸಭೆ ; ಶೀಘ್ರವೇ ಕೇಂದ್ರ ಸಂಪುಟ-ಪಕ್ಷದ ಸಂಘಟನೆಯ ಪುನರ್ರಚನೆ ?

ನವದೆಹಲಿ: ಬಹುನಿರೀಕ್ಷಿತ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೇಂದ್ರ ಸಂಘಟನೆಯ ಪುನರ್ರಚನೆಗೆ ಶೀಘ್ರದಲ್ಲೇ ಅಂತಿಮ ರೂಪ ಸಿಗುವ ಸಾಧ್ಯತೆಗಳು ದಟ್ಟವಾಗಿವೆ. ಈ ಸಂಬಂಧ ಬುಧವಾರ ತಡರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್. … Continued

“ಎರಡು ದಿನ ಕಾಯಿರಿ…” : ದೆಹಲಿಗೆ ತೆರಳುವ ಮುನ್ನ ಹೊಸ ಪಕ್ಷ ಸ್ಥಾಪನೆ ವದಂತಿಗಳಿಗೆ ಉತ್ತರಿಸಿದ ಅಣ್ಣಾಮಲೈ

ಚೆನ್ನೈ: ಬಿಜೆಪಿಗೆ ರಾಜೀನಾಮೆ ನೀಡಿ ತಾವೇ ಸ್ವತಃ ಹೊಸ ಪಕ್ಷವನ್ನು ಸ್ಥಾಪಿಸಲಿದ್ದಾರೆ ಎಂಬ ಊಹಾಪೋಹಗಳಿಗೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಕೆ. ಅಣ್ಣಾಮಲೈ ಸೋಮವಾರ ಪ್ರತಿಕ್ರಿಯಿಸಿದ್ದಾರೆ. ನವದೆಹಲಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ತಮಿಳುನಾಡು ಘಟಕದ ಮಾಜಿ ಅಧ್ಯಕ್ಷ ಅಣ್ಣಾಮಲೈ, “ದಯವಿಟ್ಟು ಸ್ವಲ್ಪ ಕಾಯಿರಿ. ಇನ್ನು ಎರಡು ದಿನಗಳಲ್ಲಿ ನಾವೆಲ್ಲರೂ ಒಟ್ಟಿಗೆ ಕುಳಿತು … Continued

ಒಳನುಸುಳುವಿಕೆ, ಇತರ ಕಾರಣಗಳಿಂದಾಗಿ ‘ಅಸ್ವಾಭಾವಿಕ ಜನಸಂಖ್ಯಾ ಬದಲಾವಣೆ’ ಪರಿಶೀಲಿಸಲು ಉನ್ನತ ಮಟ್ಟದ ಸಮಿತಿ ರಚಿಸಿದ ಕೇಂದ್ರ

ನವದೆಹಲಿ: ಕೇಂದ್ರ ಸರ್ಕಾರವು ದೇಶದಲ್ಲಿನ ಅಕ್ರಮ ನುಸುಳುವಿಕೆ ಹಾಗೂ ಇತರ ಕಾರಣಗಳಿಂದ ಉಂಟಾಗುತ್ತಿರುವ “ಅಸ್ವಾಭಾವಿಕ ಜನಸಂಖ್ಯೆ ಬದಲಾವಣೆ”ಯನ್ನು (ಡೆಮೋಗ್ರಫಿಕ್ ಚೇಂಜ್) ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದೆ. 2025ರ ಆಗಸ್ಟ್ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದ ಈ ಪ್ರಮುಖ ನಿರ್ಧಾರದ ಅನುಷ್ಠಾನದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ … Continued

ಕ್ಷೇತ್ರ ಮರುವಿಂಗಡಣೆ | ದಕ್ಷಿಣದ ರಾಜ್ಯಗಳ ಲೋಕಸಭಾ ಸ್ಥಾನಗಳಲ್ಲಿ ಹೆಚ್ಚಳ: ಅಂಕಿ-ಅಂಶ ಹಂಚಿಕೊಂಡ ಅಮಿತ್ ಶಾ ; ಕರ್ನಾಟಕಕ್ಕೆ ಸಿಗುವ ಸ್ಥಾನಗಳೆಷ್ಟು..?

ನವದೆಹಲಿ: ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯ (Delimitation) ನಂತರ ದಕ್ಷಿಣ ಭಾರತದ ರಾಜ್ಯಗಳ ಪ್ರಾತಿನಿಧ್ಯ ಕಡಿಮೆಯಾಗುತ್ತದೆ ಎಂಬ ಆರೋಪಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ತಳ್ಳಿಹಾಕಿದ್ದಾರೆ. ಗುರುವಾರ (ಏಪ್ರಿಲ್ 16) ಲೋಕಸಭೆಯಲ್ಲಿ ಮಾತನಾಡಿದ ಅವರು, ಮರುವಿಂಗಡಣೆಯ ನಂತರ ದಕ್ಷಿಣದ ರಾಜ್ಯಗಳ ಸಂಸದರ ಸಂಖ್ಯೆ ಕುಸಿಯುವ ಬದಲಿಗೆ 195ಕ್ಕೆ ಏರಿಕೆಯಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸಂಸತ್ತಿನ ವಿಶೇಷ ಅಧಿವೇಶನದಲ್ಲಿ … Continued

ದೆಹಲಿಗೆ ‘ಇಂದ್ರಪ್ರಸ್ಥ’ ಎಂದು ಮರುನಾಮಕರಣ ಮಾಡಿ : ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದ ಬಿಜೆಪಿ ಸಂಸದ

ನವದೆಹಲಿ : ದೆಹಲಿಯ ಬಿಜೆಪಿ ಸಂಸದರಾದ ಪ್ರವೀಣ್ ಖಂಡೇಲವಾಲ್ ಅವರು ರಾಷ್ಟ್ರ ರಾಜಧಾನಿ ದೆಹಲಿಗೆ ‘ಇಂದ್ರಪ್ರಸ್ಥ’ ಎಂದು ಮರುನಾಮಕರಣ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಶನಿವಾರ ಮನವಿ ಮಾಡಿದ್ದಾರೆ. ದೆಹಲಿಯು ತನ್ನ “ಪ್ರಾಚೀನ ಬೇರುಗಳನ್ನು” ಹೊಂದಿದೆ ಎಂದು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ. ಖಂಡೇಲವಾಲ್ ಅವರ ಪ್ರಕಾರ, ಹಳೆಯ ದೆಹಲಿ ರೈಲು … Continued

ಮೂಡ್ ಆಫ್ ದಿ ನೇಷನ್ ಸರ್ವೆ | ಮೋದಿ ಜನಪ್ರಿಯತೆ ಸ್ಥಿರ-ನಂಬರ್‌ 1 ; ರಾಹುಲ್‌ ಗಾಂಧಿ 2ನೇ ಸ್ಥಾನದಲ್ಲಿ ; ಇಬ್ಬರ ನಡುವಿನ ಅಂತರ…?

ನರೇಂದ್ರ ಮೋದಿ ಅವರು ಭಾರತದ ಚುಕ್ಕಾಣಿ ಹಿಡಿದ 11 ವರ್ಷಗಳಲ್ಲಿ ಪ್ರತಿಕೂಲ ಪರಿಸ್ಥಿತಿಗಳಿದ್ದರೂ ಜನಪ್ರಿಯತೆಯಲ್ಲಿ ಯಾವಾಗಲೂ ಉತ್ತಮ ನಾಯಕರಾಗಿ ಹೊರಹೊಮ್ಮಿದ್ದಾರೆ. ಈಗ ಅವರ ಮೂರನೇ ಅವಧಿಯ ಎರಡನೇ ವರ್ಷದಲ್ಲಿ ಕಠಿಣ ಸವಾಲನ್ನು ಎದುರಿಸುತ್ತಿದ್ದಾರೆ. ಮುಖ್ಯವಾಗಿ ಅಮೆರಿಕ ವಿಧಿಸಿದ ಸುಂಕದಿಂದ ಈ ಸವಾಲು ಎದುರಾಗಿದೆ. ಟ್ರಂಪ್ ಭಾರತದ ರಫ್ತಿನ ಮೇಲೆ 50 ಪ್ರತಿಶತ ಸುಂಕವನ್ನು ವಿಧಿಸಿದ್ದು, ಇದು … Continued

ವೀಡಿಯೊ..| ಲೋಕಸಭೆಯಲ್ಲಿ ಮಂಡಿಸಿದ ಬಂಧಿತ ಸಚಿವರ ವಜಾಗೊಳಿಸುವ ಮಸೂದೆ ಪ್ರತಿಗಳನ್ನು ಹರಿದು ಅಮಿತ್ ಶಾ ಮೇಲೆ ಎಸೆದ ವಿಪಕ್ಷಗಳು

ನವದೆಹಲಿ: ಗೃಹ ಸಚಿವ ಅಮಿತ್ ಶಾ ಬುಧವಾರ ಲೋಕಸಭೆಯಲ್ಲಿ ಮೂರು ಮಸೂದೆಗಳನ್ನು ಮಂಡಿಸಿದ್ದಾರೆ. ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ಕ್ರಿಮಿನಲ್‌ ಪ್ರಕರಣದಲ್ಲಿ ಸತತ 30 ದಿನಗಳ ಕಾಲ ಬಂಧನದಲ್ಲಿದ್ದರೆ ಅವರನ್ನು ಪದಚ್ಯುತಗೊಳಿಸಬಹುದು ಎಂಬ ಮಸೂದೆಯನ್ನುಲೋಕಸಭೆಯಲ್ಲಿ ಮಂಡಿಸಿದ ನಂತರ ಪರಿಶೀಲನೆಗಾಗಿ ಸಂಸತ್ತಿನ ಜಂಟಿ ಸಮಿತಿಗೆ ಕಳುಹಿಸಲಾಯಿತು. ಸಂವಿಧಾನ (130 ನೇ ತಿದ್ದುಪಡಿ) ಮಸೂದೆ, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ (ತಿದ್ದುಪಡಿ) … Continued