ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಹೆಸರುಗಳು

ನವದೆಹಲಿ: ಕಾಶ್ಮೀರದ ರಮಣೀಯ ಕಣಿವೆಗಳಿಗೆ ಶಾಂತಿಯುತ ಭೇಟಿಯಾಗಿ ಆರಂಭವಾದದ್ದು ಮಂಗಳವಾರ ದುರಂತವಾಗಿ ಮಾರ್ಪಟ್ಟಿತು, ಭಯೋತ್ಪಾದಕರು ಜನರ ಗುಂಪಿನ ಮೇಲೆ ಗುಂಡು ಹಾರಿಸಿದರು, 26 ಜನರು ಸಾವಿಗೀಡಾದರು ಮತ್ತು ಹಲವಾರು ಜನರು ಗಾಯಗೊಂಡರು. ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಹೇಯ ದಾಳಿಗಳಲ್ಲಿ ಇದು ಒಂದಾಗಿದೆ.
ಭಾರತದ ವಿವಿಧ ಭಾಗಗಳಿಂದ ಜನರು ರಜೆ ಪ್ರವಾಸಕ್ಕೆ ಪಹಲ್ಗಾಮ್‌ನ ಹುಲ್ಲುಗಾವಲುಗಳಲ್ಲಿ ಸೇರಿದ್ದಾಗ ಈ ದಾಳಿ ನಡೆದಿದೆ. ಮೃತರಲ್ಲಿ
ಸುಮಾರು ಒಂದು ವಾರದ ಮೊದಲು ವಿವಾಹವಾದ ಹರಿಯಾಣದ 26 ವರ್ಷದ ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ವಿನಯ ನರ್ವಾಲ್‌ ಈ ದಾಳಿಯಲ್ಲಿ ಕೊಲ್ಲಲ್ಪಟ್ಟರು. ಮಹಾರಾಷ್ಟ್ರದ ಆರು. ಕರ್ನಾಟಕದ ಇಬ್ಬರು, ಕೋಲ್ಕತ್ತಾದ ಇಬ್ಬರು, ಪಹಲ್ಗಾಮ್‌ನ ಸ್ಥಳೀಯರು ಸಹ ಈ ಘಟನೆಯಲ್ಲಿ ಸಾವಿಗೀಡಾದರು.
ಘಟನೆಯ ನಂತರ ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾ ಭೇಟಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಬುಧವಾರ ಬೆಳಿಗ್ಗೆ ಭಾರತಕ್ಕೆ ಮರಳಿದರು.
ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಶವಪೆಟ್ಟಿಗೆಯನ್ನು ಶ್ರೀನಗರ ವಿಮಾನ ನಿಲ್ದಾಣಕ್ಕೆ ತರಲಾಗಿದ್ದು, ಹಲವಾರು ರಾಜ್ಯ ಸರ್ಕಾರಿ ಪ್ರತಿನಿಧಿಗಳು ಸಂತ್ರಸ್ತರನ್ನು ಮತ್ತು ಪ್ರವಾಸಿಗರನ್ನು ಆಯಾ ರಾಜ್ಯಗಳಿಗೆ ವಾಪಸ್ ಕಳುಹಿಸಲು ಸಹಾಯ ಮಾಡಲು ಆಗಮಿಸಿದ್ದಾರೆ.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಹೆಸರುಗಳು:
ಸುಶೀಲ ನಥಾಯಲ್, ಇಂದೋರ್
ಸೈಯದ್ ಆದಿಲ್ ಹುಸೇನ್ ಶಾ, ಪಹಲ್ಗಾಮ್
ಹೇಮಂತ್ ಸುಹಾಸ ಜೋಶಿ, ಮುಂಬೈ
ವಿನಯ್ ನರ್ವಾಲ್, ಹರಿಯಾಣ
ಅತುಲ್ ಶ್ರೀಕಾಂತ ಮೋನಿ, ಮಹಾರಾಷ್ಟ್ರ
ನೀರಜ್ ಉಧವಾನಿ, ಉತ್ತರಾಖಂಡ
ಬಿಟನ್ ಅಧಿಕಾರಿ, ಕೋಲ್ಕತ್ತಾ
ಸುದೀಪ ನ್ಯೂಪಾನೆ, ನೇಪಾಳ
ಶುಭಂ ದ್ವಿವೇದಿ, ಕಾನ್ಪುರ
ಪ್ರಶಾಂತಕುಮಾರ ಸತ್ಪತಿ, ಬಾಲಸೋರ್, ಒಡಿಶಾ.
ಮನೀಶ ರಂಜನ್, ಪಶ್ಚಿಮ ಬಂಗಾಳ
ಎನ್ ರಾಮಚಂದ್ರ, ಕೇರಳ
ಸಂಜಯ ಲಕ್ಷ್ಮಣ ಲಾಲಿ, ಥಾಣೆ
ದಿನೇಶ ಅಗರ್ವಾಲ್, ಚಂಡೀಗಢ
ಸಮೀರ್ ಗುಹಾ, ಕೋಲ್ಕತ್ತಾ
ದಿಲೀಪ ದಾಸಲಿ, ಮುಂಬೈ
ಜೆ ಸಚಂದ್ರ ಮೋಲಿ, ವಿಶಾಖಪಟ್ಟಣ
ಮಧುಸೂದನ ಸೋಮಿಶೆಟ್ಟಿ, ಬೆಂಗಳೂರು
ಸಂತೋಷ ಜಗ್ದಾ, ಪುಣೆ
ಮಂಜುನಾಥ ರಾವ್, ಶಿವಮೊಗ್ಗ
ಕಸ್ತೂಬಾ ಗನ್ವೋಟೇ, ಪುಣೆ
ಭರತ ಭೂಷಣ, ಬೆಂಗಳೂರು
ಸುಮಿತ್ ಪರ್ಮಾರ್, ಗುಜರಾತ್
ಯತೇಶ ಪರ್ಮಾರ್, ಗುಜರಾತ್
ತೇಜ್ ಹೈಲ್ಯಾಂಗ್, ಅರುಣಾಚಲ ಪ್ರದೇಶ
ಶೈಲೇಶಭಾಯ್ ಹೆಚ್ ಹಿಮ್ಮತ್‌ ಭಾಯ್ ಕಲಾಥಿಯಾ, ಗುಜರಾತ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement