ಕೋಲಾರ | ಬೆಟ್ಟಿಂಗ್‌ ಕಟ್ಟಿ ನೀರು ಬೆರೆಸದೆ 5 ಬಾಟಲಿ ಮದ್ಯ ಕುಡಿದ ಯುವಕ ಸಾವು

 ಬೆಂಗಳೂರು:  21 ವರ್ಷದ ಯುವಕನೊಬ್ಬ ತನ್ನ ಸ್ನೇಹಿತರೊಂದಿಗೆ 10,000 ರೂ. ಬೆಟ್ಟಿಂಗ್‌ ಕಟ್ಟಿದ ನಂತರ ಐದು ಬಾಟಲಿ ಮದ್ಯ ಕುಡಿದು ಸಾವಿಗೀಡಾದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕು ಪೂಜಾರಹಳ್ಳಿ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಸಂಭವಿಸಿದೆ ಎಂದು ವರದಿಯಾಗಿದೆ.
ಕಾರ್ತಿಕ ಎಂಬ ವ್ಯಕ್ತಿ ತನ್ನ ಸ್ನೇಹಿತರಾದ ವೆಂಕಟ ರೆಡ್ಡಿ, ಸುಬ್ರಮಣಿ ಮತ್ತು ಇತರ ಮೂವರಿಗೆ ಮದ್ಯಕ್ಕೆ ನೀರು ಹಾಕದೆ ಐದು ಪೂರ್ಣ ಬಾಟಲಿ ಮದ್ಯವನ್ನು ಕುಡಿಯಬಹುದು ಎಂದು ಹೇಳಿದ್ದರು. ಹಾಗಾದ್ರೆ ನೀನು ಐದು ಬಾಟಲಿ ಪೂರ್ತಿ ಮದ್ಯ ಕುಡಿದರೆ 10,000 ರೂ. ನೀಡುವುದಾಗಿ ಅವರು ಕಾರ್ತಿಕ್‌ ಅವರಿಗೆ ಹೇಳಿದ್ದರು. ಪಂಥ ಸ್ವೀಕರಿಸಿದ ಕಾರ್ತಿಕ್ ನನೀರು ಬೆರೆಸದೆ ಐದು ಬಾಟಲಿ ಮದ್ಯ ಕುಡಿದಿದ್ದಾರೆ. ಆದರೆ ಶೀಘ್ರದಲ್ಲೇ ತೀವ್ರವಾಗಿ ಅಸ್ವಸ್ಥಗೊಂಡರು.

ತಕ್ಷಣವೇ ಅವರನ್ನು ಕೋಲಾರ ಜಿಲ್ಲೆಯ ಮುಳಬಾಗಿಲಿನ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಯ ಸಮಯದಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಕಾರ್ತಿಕ್ ಮದುವೆಯಾಗಿ ಒಂದು ವರ್ಷ ಕಳೆದಿದ್ದು, ಎಂಟು ದಿನಗಳ ಹಿಂದೆಯಷ್ಟೇ ಆತನ ಪತ್ನಿ ಮಗುವಿಗೆ ಜನ್ಮ ನೀಡಿದ್ದರು.
ವೆಂಕಟ ರೆಡ್ಡಿ ಮತ್ತು ಸುಬ್ರಮಣಿ ಸೇರಿದಂತೆ ಆರು ವ್ಯಕ್ತಿಗಳ ವಿರುದ್ಧ ನಂಗಲಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪ್ರಕರಣ ದಾಖಲಾಗಿದೆ. ಇಬ್ಬರನ್ನು ಬಂಧಿಸಲಾಗಿದ್ದು, ಪೊಲೀಸರು ಇತರ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ ವರ್ಷ ಸುಮಾರು 26 ಲಕ್ಷ ಜನರು ಮದ್ಯ ಸೇವನೆಯಿಂದ ಸಾಯುತ್ತಾರೆ, ಇದು ಜಾಗತಿಕ ಸಾವುಗಳಲ್ಲಿ ಶೇ 4.7 ರಷ್ಟಿದೆ.

ಪ್ರಮುಖ ಸುದ್ದಿ :-   ಸಾಹಿತಿ ದೊಡ್ಡರಂಗೇಗೌಡರ ಆರೋಗ್ಯದಲ್ಲಿ ಏರುಪೇರು ; ಆಸ್ಪತ್ರೆಗೆ ದಾಖಲು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement