ಕನ್ನಡದ ಲೇಖಕಿ ಬಾನು ಮುಷ್ತಾಕ್‌ಗೆ ಪ್ರತಿಷ್ಠಿತ ಬೂಕರ್‌ ಪ್ರಶಸ್ತಿ ಘೋಷಣೆ

ಬೆಂಗಳೂರು : ಕನ್ನಡದ ಸಾಹಿತಿ ಬಾನು ಮುಷ್ತಾಕ್ (Banu mushtaq) ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ (booker prize 2025)ಗೆ ಭಾಜನರಾಗಿದ್ದಾರೆ.
ಬಾನು ಮುಷ್ತಾಕ್ ಅವರ ಕನ್ನಡದ ಕತೆಗಳ ಅನುವಾದ ʼಹಾರ್ಟ್ ಲ್ಯಾಂಪ್ʼ ಕೃತಿಗೆ ಬೂಕರ್ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯು 57.34 ಲಕ್ಷ ನಗದನ್ನು ಒಳಗೊಂಡಿದೆ.
ಮೇ 21ರಂದು ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಈ ಕುರಿತ ಅಧಿಕೃತ ಘೋಷಣೆ ಹೊರಬಿದ್ದಿದೆ. ವಿಜೇತರಿಗೆ 50,000 ಪೌಂಡ್‌ ಬಹುಮಾನ ಅಂದರೆ, 57.28 ಲಕ್ಷ ರೂ. ಸಿಗಲಿದೆ. ಇದನ್ನು ಲೇಖಕರು ಹಾಗೂ ಅನುವಾದಕರ ನಡುವೆ ಹಂಚಲಾಗುತ್ತದೆ. ಶಾರ್ಟ್ ಲಿಸ್ಟ್‌ನಲ್ಲಿ ಆಯ್ಕೆಯಾಗಿದ್ದ ಎಲ್ಲರನ್ನೂ ಲಂಡನ್‌ ನಲ್ಲಿ ನಡೆದ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಮೇ 2024 ಮತ್ತು ಏಪ್ರಿಲ್ 2025 ರ ನಡುವೆ ಯುನೈಟೆಡ್‌ ಕಿಂಗ್ಡಂ (UK) ಮತ್ತು ಐರ್ಲೆಂಡ್‌ನಲ್ಲಿ ಪ್ರಕಟವಾದ ಇಂಗ್ಲಿಷ್‌ಗೆ ಅನುವಾದಿಸಲಾದ ಅತ್ಯುತ್ತಮ ಕಾದಂಬರಿ ಅಥವಾ ಸಣ್ಣ ಕಥೆಗಳ ಸಂಗ್ರಹಕ್ಕೆ ಈ ವಾರ್ಷಿಕ ಪ್ರಶಸ್ತಿಯನ್ನು ನೀಡಲಾಗುತ್ತದೆ. ಬಾನು ಮುಷ್ತಾಕ್ ಅವರು ತಮ್ಮ ಅನುವಾದಕಿ ದೀಪಾ ಭಸ್ತಿ ಅವರೊಂದಿಗೆ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಬೂಕರ್‌ ಪ್ರಶಸ್ತಿ ಪಡೆದ ಬಾನು ಮುಷ್ತಾಕ್‌ ಎರಡನೇ ಕನ್ನಡಿಗರು. ಅರವಿಂದ ಅಡಿಗ ಅವರಿಗೆ 2008ರಲ್ಲಿ “ದ ವೈಟ್ ಟೈಗರ್” ಎಂಬ ಕೃತಿಗೆ ಬೂಕರ್‌ ಪ್ರಶಸ್ತಿ ಬಂದಿದೆ.

ಪ್ರಮುಖ ಸುದ್ದಿ :-   ಗೃಹ ಸಚಿವ ಜಿ.ಪರಮೇಶ್ವರ ಒಡೆತನದ ‘ಸಿದ್ದಾರ್ಥ ಶಿಕ್ಷಣ ಸಂಸ್ಥೆ’ ಮೇಲೆ ಇಡಿ ದಾಳಿ

ಕನ್ನಡದ ಲೇಖಕಿ ಬಾನು ಮುಷ್ತಾಕ್ 30 ವರ್ಷಗಳಿಗೂ ಹೆಚ್ಚು ಕಾಲ ಬರೆದ 12 ಸಣ್ಣ ಕಥೆಗಳ ಸಂಗ್ರಹವಾಗಿದ್ದು, ದಕ್ಷಿಣ ಭಾರತದ ಮಹಿಳೆಯರ ದೈನಂದಿನ ಜೀವನ ಮತ್ತು ಹೋರಾಟಗಳನ್ನು ವಿವರಿಸುತ್ತದೆ.
ಲಂಡನ್‌ನ ಟೇಟ್ ಮಾಡರ್ನ್‌ನಲ್ಲಿ ನಡೆದ ಸಮಾರಂಭದಲ್ಲಿ ಐವರು ಸದಸ್ಯರ ಮತದಾನ ಸಮಿತಿಯ ಅಧ್ಯಕ್ಷ ಹಾಗೂ ಲೇಖಕ ಮ್ಯಾಕ್ಸ್ ಪೋರ್ಟರ್ ಅವರು ಈ ಪ್ರಶಸ್ತಿಯನ್ನು ಘೋಷಿಸಿದರು.
ಸಣ್ಣ ಕಥೆಗಳ ಸಂಗ್ರಹಕ್ಕೆ ಈ ಪ್ರಶಸ್ತಿಯನ್ನು ನೀಡುತ್ತಿರುವುದು ಇದೇ ಮೊದಲು. 2016 ರಲ್ಲಿ ಪ್ರಶಸ್ತಿಯು ಪ್ರಸ್ತುತ ರೂಪ ಪಡೆದ ನಂತರ ದೀಪಾ ಭಸ್ತಿ ಭಸ್ತಿ ಈ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಅನುವಾದಕಿ – ಮತ್ತು ಒಂಬತ್ತನೇ ಮಹಿಳಾ ಅನುವಾದಕಿಯಾಗಿದ್ದಾರೆ. ಅಂದಿನಿಂದ ಈ ಪ್ರಶಸ್ತಿಯನ್ನು ಪಡೆದ ಆರನೇ ಮಹಿಳಾ ಲೇಖಕಿ ಬಾನು ಮುಷ್ತಾಕ್. ಅವರ ಈ ಪುಸ್ತಕವು 1990 ರಿಂದ 2023 ರವರೆಗೆ ಬರೆದ ಕಥೆಗಳನ್ನು ಒಳಗೊಂಡಿದೆ.
ವಕೀಲೆ, ಕಾರ್ಯಕರ್ತೆ ಹಾಗೂ ಬರಹಗಾರರೂ ಆಗಿರುವ ಮುಷ್ತಾಕ್ ಭಾನುವಾರ ನಡೆದ ಕಿರು-ಪಟ್ಟಿ ಓದುವ ಕಾರ್ಯಕ್ರಮದಲ್ಲಿ, ಈ ಕಥೆಗಳು “ಮಹಿಳೆಯರ ಬಗ್ಗೆ ಇದ್ದು- ಧರ್ಮ, ಸಮಾಜ ಮತ್ತು ರಾಜಕೀಯವು ಅವರಿಂದ ಪ್ರಶ್ನಾತೀತ ವಿಧೇಯತೆಯನ್ನು ಹೇಗೆ ಬಯಸುತ್ತದೆ ಮತ್ತು ಹಾಗೆ ಮಾಡುವುದರಿಂದ, ಅವರ ಮೇಲೆ ಅಮಾನವೀಯ ಕ್ರೌರ್ಯವನ್ನು ಹೇಗೆ ಹೇರುತ್ತದೆ, ಅವರನ್ನು ಕೇವಲ ಅಧೀನರನ್ನಾಗಿ ಮಾಡುತ್ತದೆ ಎಂಬ ಬಗ್ಗೆ ಇದೆ” ಎಂದು ಹೇಳಿದರು.

ಪ್ರಮುಖ ಸುದ್ದಿ :-   ರಾಜ್ಯದ ಪ್ರಭಾರ ಡಿಜಿ-ಐಜಿಪಿಯಾಗಿ ಡಾ.ಎಂ.ಎ. ಸಲೀಂ ನೇಮಕ

ಹಾಸನ ಪಟ್ಟಣದಲ್ಲಿ 1948ರಲ್ಲಿ ಜನಿಸಿದ ಮುಷ್ತಾಕ್, ಅವಿಭಕ್ತ ಮುಸ್ಲಿಂ ಕುಟುಂಬದಲ್ಲಿ ಬೆಳೆದವರು. ಆರಂಭದಲ್ಲಿ ಉರ್ದು ಮಾಧ್ಯಮ ಶಾಲೆ ನಂತರ ಎಂಟನೇ ವಯಸ್ಸಿನಲ್ಲಿ ಕನ್ನಡ ಶಾಲೆಯಲ್ಲಿ ಕಲಿತವರು. ಹಿಂದಿನ ಮೈಸೂರು ರಾಜ್ಯದಲ್ಲಿ ಸರ್ಕಾರಿ ಆರೋಗ್ಯ ನಿರೀಕ್ಷಕರಾಗಿದ್ದ ಅವರ ತಂದೆ, ಅವರ ಸೂಕ್ಷ್ಮ ಆರ್ಥಿಕ ಪರಿಸ್ಥಿತಿಯ ಹೊರತಾಗಿಯೂ, ಬಾನು ಅವರ ಬರವಣಿಗೆಯನ್ನು ಪ್ರೋತ್ಸಾಹಿಸಿದರು. ಅವರಿಗಾಗಿ ಕನ್ನಡ ಪುಸ್ತಕಗಳನ್ನು ಖರೀದಿಸಿದರು. ಶಾಲೆಯಲ್ಲಿದ್ದಾಗ ಅವರ ಬರವಣಿಗೆ ಪ್ರಾರಂಭವಾಯಿತು. ಅವರು 26 ನೇ ವಯಸ್ಸಿನಲ್ಲಿ ಮದುವೆಯಾದ ನಂತರ, ಅವರ ಮೊದಲ ಸಣ್ಣ ಕಥೆ ಜನಪ್ರಿಯ ಕನ್ನಡ ನಿಯತಕಾಲಿಕೆ ಪ್ರಜಾಮತದಲ್ಲಿ ಪ್ರಕಟವಾಯಿತು. ಸಂದರ್ಶನಗಳಲ್ಲಿ ಬಾನು ತಮ್ಮ ತಂದೆಯ ಅಳಿಸಲಾಗದ ಪ್ರಭಾವ ಹಾಗೂ ಅವರ ನಿರಂತರ ಬೆಂಬಲದ ಬಗ್ಗೆ ಮಾತನಾಡಿದ್ದಾರೆ.

2 / 5. 1

ಶೇರ್ ಮಾಡಿ :

  1. SSP

    ಶ್ರೀಮತಿ. ಬಾನು ಮುಸ್ತಾಕ್ ಮುಂಚೆ ಇನ್ನೋರ್ವ ಕನ್ನಡಿಗ ಮತ್ತು ಕರ್ಣಾಟಕ ಬ್ಯಾಂಕಿನ ಸಂಸ್ಥಾಪಕರಲ್ಲೊಬ್ಬರಾದ ಶ್ರೀ. ಸೂರ್ಯನಾರಾಯಣ ಅಡಿಗರ ಮೊಮ್ಮಗ ಶ್ರೀ. ಅರವಿಂದ ಅಡಿಗ ಅವರಿಗೆ 2008ರಲ್ಲಿ “ದ ವೈಟ್ ಟೈಗರ್” ಎಂಬ ಕೃತಿಗೆ ಬಂದಿರುತ್ತದೆ. ಹಾಗಾಗಿ ಶ್ರೀಮತಿ. ಮುಸ್ತಾಕ್ ಅವರು ಎರಡನೇಯ ಕನ್ನಡಿಗರಾಗಿರುತ್ತಾರೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement