ಪರೀಕ್ಷೆ ಮುಗಿದ ಒಂದು ಗಂಟೆಯಲ್ಲೇ 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ ; ವಿಟಿಯು ಹೊಸ ದಾಖಲೆ…!

ಬೆಳಗಾವಿ : ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಅಂತಿಮ ಸೆಮಿಸ್ಟರ್ ಬಿ.ಇ./ಬಿ.ಟೆಕ್/ಬಿ.ಪ್ಲಾನ್/ಬಿ.ಆರ್ಕ್/ಬಿ.ಎಸ್ಸಿ (ಆನರ್ಸ್) ಪರೀಕ್ಷೆಯ ಫಲಿತಾಂಶಗಳನ್ನು ಪರೀಕ್ಷೆ ಮುಗಿದ ಕೇವಲ ಒಂದು ಗಂಟೆಯೊಳಗೆ ಪ್ರಕಟಿಸಿ ಹೊಸ ದಾಖಲೆ ಸ್ಥಾಪಿಸಿದೆ…!
ಪರೀಕ್ಷೆ ಶುಕ್ರವಾರ (ಮೇ 30) ಸಂಜೆ 5:30ಕ್ಕೆ ಮುಗಿದ್ದು, ಸಂಜೆ 6:30 ಕ್ಕೆ ಪ್ರಕಟಿಸುವ ಮೂಲಕ ಹೊಸ ದಾಖಲೆ ಸ್ಥಾಪಿಸಿದೆ. ವಿಟಿಯು ಈ ಹಿಂದೆ ಮೂರು ಗಂಟೆಗಳಲ್ಲಿ ಫಲಿತಾಂಶವನ್ನು ಪ್ರಕಟಿಸಿ ದಾಖಲೆ ಸ್ಥಾಪಿಸಿತ್ತು. ಈಗ ಅದು ತನ್ನದೇ ದಾಖಲೆಯನ್ನು ಮುರಿದು ಮತ್ತೊಂದು ದಾಖಲೆಯನ್ನು ನಿರ್ಮಿಸಿದೆ.
50,321 ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳ ಪರೀಕ್ಷೆಗಳು ಮುಗಿದ ಕೇವಲ ಒಂದು ಗಂಟೆಯ ನಂತರ ಫಲಿತಾಂಶವನ್ನು ಬಿಡುಗಡೆ ಮಾಡುವ ಮೂಲಕ ಈ ಐತಿಹಾಸಿಕ ಸಾಧನೆಯನ್ನು ಮಾಡಲಾಗಿದೆ ಎಂದು ವಿ ಟಿ ಯು ಕುಲಪತಿ ಪ್ರೊ. ಎಸ್. ವಿದ್ಯಾಶಂಕರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಾಖಲೆಯ ಸಮಯದಲ್ಲಿ ಫಲಿತಾಂಶಗಳನ್ನು ಪ್ರಕಟಿಸುವ ಮೂಲಕ ವಿಟಿಯು ತನ್ನ ಐತಿಹಾಸಿಕ ಮೈಲಿಗಲ್ಲನ್ನು ಮುರಿಯುತ್ತಿರುವುದು ಇದು ಎರಡನೇ ಬಾರಿ ಆಗಿದ್ದು ಮೊದಲ ಬಾರಿಗೆ, 2019 ರ ಬ್ಯಾಚ್ ನ ಕೊನೆಯ ಸೆಮಿಸ್ಟರ್ ಫಲಿತಾಂಶವನ್ನು ಇದೆ ದಿನ ಅಂದರೆ ಮೇ 30 2023 ರಲ್ಲಿ ಅಂತಿಮ ಪರೀಕ್ಷೆಯ ಕೇವಲ 2 ದಿನಗಳ ನಂತರ 43,662 ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿತ್ತು, ಎರಡನೇ ಬಾರಿಗೆ, 2020 ರ ಬ್ಯಾಚ್ ಫಲಿತಾಂಶವನ್ನು 2024 ರ ಮೇ 30 (30.05.2024) ರಂದು ಕೊನೆಯ ಪರೀಕ್ಷೆ ಮುಗಿದ 3 ಗಂಟೆಗಳ ಒಳಗೆ 37,011 ವಿದ್ಯಾರ್ಥಿಗಳ ಪ್ರಕಟಿಸಿ ಇತಿಹಾಸ ರಚಿಸಿತ್ತು. ಶುಕ್ರವಾರ 2025 ರ ಮೇ 30 ರಂದು 2021 ರ ಬ್ಯಾಚ್ ನ ಕೊನೆಯ ಸೆಮಿಸ್ಟರ್ ನ 50,321 ವಿದ್ಯಾರ್ಥಿಗಳ ಪರೀಕ್ಷೆಯ ಫಲಿತಾಂಶವನ್ನು ಅಂತಿಮ ಪರೀಕ್ಷೆ ಮುಗಿದ ಕೇವಲ 1 ಗಂಟೆಯೊಳಗೆ ಪ್ರಕಟಿಸಿ ಮತ್ತೊಂದು ದಾಖಲೆ ಮಾಡಿದೆ. ಜೊತೆಗೆ ಈ ಫಲಿತಾಂಶವನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಅವರ ವಾಟ್ಸಾಪ್‌ನಲ್ಲಿ ಕಳುಹಿಸಲಾಗಿದೆ.
ಬಿಇ, ಬಿ.ಟೆಕ್., ಬಿ.ಆರ್ಕ್, ಬಿಪ್ಲಾನ್. ಬಿ.ಎಸ್ಸಿ. (ಆನರ್ಸ್) ಕಾರ್ಯಕ್ರಮಗಳ ಫಲಿತಾಂಶಗಳು ದಾಖಲೆ ಸಮಯದಲ್ಲಿ ಬಿಡುಗಡೆಯಾಗುವುದರಿಂದ ವಿದ್ಯಾರ್ಥಿಗಳಿಗೆ ಉದ್ಯೋಗ ಹುಡುಕಾಟ ಮತ್ತು ಮುಂದಿನ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರಯೋಜನವಾಗುತ್ತದೆ. ಮೇ 31 ಅಂದರೆ ಶನಿವಾರದ ತಮ್ಮ ಎಲ್ಲಾ ಸೆಮಿಸ್ಟರ್ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಉತ್ತೀರ್ಣಹೊಂದಿದ ವಿದ್ಯಾರ್ಥಿಗಳು ತಮ್ಮ ತಾತ್ಕಾಲಿಕ ಪದವಿ ಪ್ರಮಾಣಪತ್ರಗಳಿಗೆ (ಪಿಡಿಸಿ) ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಕುಲಪತಿ ಪ್ರೊ ಎಸ್‌. ವಿದ್ಯಾಶಂಕರ ತಿಳಿಸಿದ್ದಾರೆ. ಜೂನ್ 3 ರಿಂದ ತಾತ್ಕಾಲಿಕ ಪದವಿ ಪ್ರಮಾಣಪತ್ರಗಳಿಗೆ (ಪಿಡಿಸಿ) ವಿತರಿಸಲಾಗುವುದು. ಹಾಗೆಯೇ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವವರು ತಾತ್ಕಾಲಿಕ ಪದವಿ ಪ್ರಮಾಣಪತ್ರಗಳಿಗೆ (ಪಿಡಿಸಿ) ಅರ್ಜಿ ಸಲ್ಲಿಸಬಾರದು ಎಂದು ಕುಲಪತಿ ಪ್ರೊ ಎಸ್‌. ವಿದ್ಯಾಶಂಕರ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಸಕಾರಣವಿಲ್ಲದೆ ರಸ್ತೆಯಲ್ಲಿ ವಾಹನ ತಡೆಯುವಂತಿಲ್ಲ, ಕೀ ಕಸಿಯುವಂತಿಲ್ಲ : ಪೊಲೀಸರಿಗೆ ಡಿಜಿಪಿ ಖಡಕ್‌ ಸೂಚನೆ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement