ತುಂಗಾ ನದಿ ಸೇತುವೆ ಮೇಲೆ ಕಳಚಿದ ರೈಲು ಬೋಗಿಗಳು

ಶಿವಮೊಗ್ಗ: ತುಂಗಾ ನದಿ ಸೇತುವೆಯ ಮೇಲೆ ತಾಳಗುಪ್ಪ-ಮೈಸೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ರೈಲಿನ ಆರು ಬೋಗಿಗಳು ಎಂಜಿನಿಂದ ಬೇರ್ಪಟ್ಟ ಘಟನೆ ಬುಧವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಹೀಗಾಗಿ ದೊಡ್ಡ ದುರಂತವೊಂದು ತಪ್ಪಿದೆ. 16 ಬೋಗಿಗಳನ್ನು ಒಳಗೊಂಡ ರೈಲು ತಾಳಗುಪ್ಪದಿಂದ ಮೈಸೂರಿಗೆ ಹೋಗುತ್ತಿದ್ದಾಗ ಬೋಗಿಗಳ ನಡುವಿನ ಸಂಪರ್ಕ ಕೊಂಡಿ ಕಳಚಿದ್ದರಿಂದ ಆರು ಬೋಗಿಗಳು ಬೇರ್ಪಟ್ಟಿವೆ.
ತಾಂತ್ರಿಕ ದೋಷದಿಂದಾಗಿ ಶಿವಮೊಗ್ಗ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿ ಆರು ಬೋಗಿಗಳು ರೈಲಿನ ಉಳಿದ ಭಾಗದಿಂದ ಬೇರ್ಪಟ್ಟವು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಭಾಗವು ಮುಂದೆ ಚಲಿಸುತ್ತಲೇ ಇದ್ದಾಗ, ಹಿಂಭಾಗದ ಬೋಗಿಗಳು ತುಂಗಾ ಸೇತುವೆಯ ಮೇಲೆ ನಿಂತಿದ್ದವು ಎಂದು ಹೇಳಲಾಗಿದೆ. ರೈಲ್ವೆ ಸಿಬ್ಬಂದಿ ಬೇರ್ಪಟ್ಟ ಬೋಗಿಗಳನ್ನು ಮತ್ತೆ ಜೋಡಿಸಿದರು ಮತ್ತು ರೈಲು ತನ್ನ ಪ್ರಯಾಣವನ್ನು ಪುನರಾರಂಭಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement