ವೀಡಿಯೊ..| ಬೆಂಗಳೂರಲ್ಲಿ ಬಸ್ ಓಡಿಸುವಾಗಲೇ ಚಾಲಕನಿಗೆ ಮೂರ್ಛೆ ; 9 ವಾಹನಗಳಿಗೆ ಬಸ್‌ ಡಿಕ್ಕಿ

ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್ ಚಾಲಕನಿಗೆ ಚಾಲನೆ ಮಾಡುವಾಗ ತೀವ್ರವಾದ  ಮೂರ್ಛೆ ರೋಗ (seizure) ಕಾಣಿಸಿಕೊಂಡ ಪರಿಣಾಮವಾಗಿ, ನಿಯಂತ್ರಣ ಕಳೆದುಕೊಂಡ ಬಸ್ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಒಂಬತ್ತು ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಈ ಭೀಕರ ಅಪಘಾತವು ಶನಿವಾರ ಸಂಭವಿಸಿದ್ದು, ಈ ಘಟನೆಯಲ್ಲಿ ಮೂರು ಆಟೋರಿಕ್ಷಾಗಳು, ಮೂರು ಕಾರುಗಳು ಮತ್ತು ಹಲವು ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಚಾಲಕನಿಗೆ ಮಿದುಳಿನ ಸೆಳೆತವಾದ ಕಾರಣ ಆಕಸ್ಮಿಕವಾಗಿ ಆಕ್ಸಿಲರೇಟರ್ ಒತ್ತಿದ್ದರಿಂದ ಬಸ್ ವೇಗವಾಗಿ ಮತ್ತು ನಿಯಂತ್ರಣವಿಲ್ಲದೆ ಮುನ್ನುಗ್ಗಿ ಈ ದುರಂತ ಸಂಭವಿಸಿದೆ.

ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಅಪಘಾತಕ್ಕೆ ಕೆಲವೇ ಕ್ಷಣಗಳ ಮೊದಲು ಚಾಲಕನು ಸೆಳೆತದಿಂದ ನರಳುತ್ತಿರುವುದು ಮತ್ತು ಬಸ್‌ನ ನಿಯಂತ್ರಣ ಕಳೆದುಕೊಳ್ಳುತ್ತಿರುವುದು ಕಂಡುಬಂದಿದೆ. ಕಂಡಕ್ಟರ್ ವಾಹನದ ನಿಯಂತ್ರಣ ತೆಗೆದುಕೊಳ್ಳಲು ಪ್ರಯತ್ನಿಸಿದರೂ, ಆದರೂ ಬಸ್‌ ಕೆಲವು ವಾಹನಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.  ಬಸ್ ಒಳಗೆ ನಿರ್ವಾಹಕ ಬಸ್ ನಿಯಂತ್ರಿಸಲು ಪ್ರಯತ್ನಿಸಿದರೂ ಸಾಧ್ಯವಾಗದೇ 4 ಆಟೋ, 4 ಕಾರು 1 ಬೈಕ್ ಘಟನೆಯಲ್ಲಿ ನಜ್ಜುಗುಜ್ಜು ಆಗಿದ್ದು, ಸಂಪೂರ್ಣ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

35 ವರ್ಷದ ಲೋಕೇಶಕುಮಾರ ಎಂಬವರು ಬಸ್‌ ಚಾಲನೆ ಮಾಡುತ್ತಿದ್ದ ಈ ಬಸ್, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬನಶಂಕರಿಗೆ ಹೋಗುತ್ತಿತ್ತು. ಅಪಘಾತ ಸಂಭವಿಸಿದ ಸಮಯದಲ್ಲಿ ಬಸ್‌ನಲ್ಲಿ ಸುಮಾರು 15 ಪ್ರಯಾಣಿಕರಿದ್ದರು.
ಘಟನೆಯಲ್ಲಿ ಓರ್ವ ಆಟೋರಿಕ್ಷಾ ಚಾಲಕ ಮತ್ತು ಎಸ್‌ಯುವಿ ಕಾರಿನಲ್ಲಿದ್ದ ಒಬ್ಬ ಮಹಿಳಾ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಮಾಹಿತಿಯ ಪ್ರಕಾರ, ಬಸ್ ಚಾಲಕ ಲೋಕೇಶಕುಮಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement