ಬೆಂಗಳೂರಲ್ಲಿ ಭಾರಿ ವಂಚನೆ: 3 ಕೋಟಿ ರೂ. ಮೌಲ್ಯದ ಚಿನ್ನದೊಂದಿಗೆ ಖದೀಮರು ಎಸ್ಕೇಪ್

ಬೆಂಗಳೂರು : ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿನಡೆದ  ಸಿನಿಮೀಯ ಶೈಲಿಯ ಹೈ-ಪ್ರೊಫೈಲ್ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಖದೀಮರು ಪಕ್ಕಾ ಪ್ಲಾನ್ ಮಾಡಿ ಬರೋಬ್ಬರಿ 1.85 ಕೆಜಿ ಚಿನ್ನದ ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ನಗರದ ಪ್ರಸಿದ್ಧ ನಾಗರತ್‌ ಪೇಟೆಯ “ಮೆಹ್ತಾ ಜ್ಯುವೆಲ್ಲರಿ” (Mehta Jewellery) ಮಾಲೀಕರು ಈ ಬೃಹತ್ ವಂಚನೆಗೆ ಒಳಗಾದವರು ಎನ್ನಲಾಗಿದೆ.
ಉದ್ಯಮಿ ನೀಡಿರುವ ದೂರಿನ ಪ್ರಕಾರ, ಪರೇಶ ಸೋನಿ ಎಂಬಾತ ಈ ಇಡೀ ವಂಚನೆಯ ಜಾಲವನ್ನು ಹೆಣೆದಿದ್ದ ಎನ್ನಲಾಗಿದೆ. ಈತ ಮೆಹ್ತಾ ಜ್ಯುವೆಲ್ಲರಿ ಅಂಗಡಿಯನ್ನು ಸಂಪರ್ಕಿಸಿ, ತಾನು “ಮಾಹಿ ಎಂಟರ್‌ಪ್ರೈಸಸ್” (Mahi Enterprises) ಎಂಬ ಕಂಪನಿಯ ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದ. ತಮ್ಮ ಸಂಸ್ಥೆಗೆ ಸಗಟು (Wholesale) ದರದಲ್ಲಿ ಭಾರಿ ಪ್ರಮಾಣದ ಚಿನ್ನದ ಆಭರಣಗಳ ಅಗತ್ಯವಿದೆ ಎಂದು ನಂಬಿಸಿ, ವ್ಯಾಪಾರದ ಮಾತುಕತೆಗಾಗಿ ಜ್ಯುವೆಲ್ಲರಿ ಮಾಲೀಕರನ್ನು ಆಹ್ವಾನಿಸಿದ್ದ. ವ್ಯಾಪಾರ ನಿಜವೆಂದೇ ನಂಬಿಸಲು ಆರೋಪಿಗಳು ಮಲ್ಲೇಶ್ವರಂನಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಕಲಿ ಕಚೇರಿಯೊಂದನ್ನು (Fake Office Setup) ಸೃಷ್ಟಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ವೇಳೆ, ಆ ಕಚೇರಿಗೂ“ಮಾಹಿ ಎಂಟರ್‌ಪ್ರೈಸಸ್” ಸಂಸ್ಥೆಗಳಿಗೂ ಯಾವುದೇ ನಿಜವಾದ ಸಂಬಂಧವಿರಲಿಲ್ಲ ಎಂಬುದು ಪತ್ತೆಯಾಗಿದೆ. ಇವರು ಜ್ಯುವೆಲ್ಲರಿ ಅಂಗಡಿ ಮಾಲೀಕರನ್ನು ನಂಬಿಸಲು ಕಚೇರಿಯ ಹೊರಗೆ ನಕಲಿ ನಾಮಫಲಕ ಅಳವಡಿಸಲಾಗಿತ್ತು.

ಪ್ರಮುಖ ಸುದ್ದಿ :-   ಕುಮಟಾ : ಶಾಲೆಯ ಪಕ್ಕವೇ ಭೂ ಕುಸಿತ ; ಕಟ್ಟಡಕ್ಕೆ ಬಂದು ಅಪ್ಪಳಿಸಿದ ಬೃಹತ್‌ ಬಂಡೆ

ಕೋಟ್ಯಂತರ ರೂಪಾಯಿ ವಂಚನೆ
ಈ ಆಫರ್ ದೊಡ್ಡ ಮಟ್ಟದ ಲಾಭ ತರಲಿದೆ ಎಂದು ನಂಬಿದ ಜ್ಯುವೆಲ್ಲರಿ ಮಾಲೀಕರು, ತಮ್ಮ ಅಂಗಡಿಯ ಮ್ಯಾನೇಜರ್‌ಗೆ ಚಿನ್ನದೊಂದಿಗೆ ಹೋಗಲು ಸೂಚಿಸಿದ್ದರು. ಮಾಲೀಕರ ಸೂಚನೆಯಂತೆ ಮ್ಯಾನೇಜರ್ ಬರೋಬ್ಬರಿ 3 ಕೆಜಿ ಚಿನ್ನದ ಆಭರಣಗಳನ್ನು ತೆಗೆದುಕೊಂಡು ಮಲ್ಲೇಶ್ವರಂನ ಆ ನಕಲಿ ಕಚೇರಿಗೆ ತಲುಪಿದ್ದರು.
ಮ್ಯಾನೇಜರ್ ಕಚೇರಿಗೆ ಬರುತ್ತಿದ್ದಂತೆ, ಆರೋಪಿ ಪರೇಶ್ ಸೋನಿ ಆಭರಣಗಳನ್ನು ಪರಿಶೀಲಿಸುವಂತೆ ನಟಿಸಿ, ಅವುಗಳ ವಿನ್ಯಾಸ ಹಾಗೂ ತೂಕವನ್ನು ಪರಿಶೀಲಿಸಿದ್ದಾನೆ. ಬಳಿಕ ಅಲ್ಲೇ ಪಕ್ಕದ ಕ್ಯಾಬಿನ್‌ನಲ್ಲಿ ಕುಳಿತಿದ್ದ ತನ್ನ ಸಹಚರ ಚಂದ್ರಶೇಖರ ಎಂಬಾತನಿಗೆ ಆಭರಣಗಳನ್ನು ನೀಡಿ, ಇವುಗಳ ಸಂಪೂರ್ಣ ದಾಸ್ತಾನು ಪಟ್ಟಿ (Inventory List) ಸಿದ್ಧಪಡಿಸುವಂತೆ ಸೂಚಿಸಿದ್ದಾನೆ.

ಫೋಟೋ ತೆಗೆಯುವ ನೆಪದಲ್ಲಿ ಎಸ್ಕೇಪ್!
ದಾಸ್ತಾನು ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿದ್ದಾಗ, ಆರೋಪಿಗಳು ಮ್ಯಾನೇಜರ್‌ಗೆ “ದಾಖಲಾತಿ ಉದ್ದೇಶಗಳಿಗಾಗಿ (Documentation) ಈ ಎಲ್ಲ ಆಭರಣಗಳ ಫೋಟೋಗಳನ್ನು ತೆಗೆದುಕೊಳ್ಳಬೇಕಾಗಿದೆ” ಎಂದು ನಂಬಿಸಿದ್ದಾರೆ. ಇದನ್ನು ನಂಬಿದ ಮ್ಯಾನೇಜರ್ ಎದುರೇ, ಚಂದ್ರಶೇಖರ ಹಾಗೂ ಮತ್ತೊಬ್ಬ ಸಹಚರ ಸೇರಿ ಫೋಟೋ ಕ್ಲಿಕ್ಕಿಸುವ ನೆಪದಲ್ಲಿ ಆಭರಣಗಳನ್ನು ಪಕ್ಕದ ಕೋಣೆಗೆ ಕೊಂಡೊಯ್ದಿದ್ದಾರೆ.
ಅಲ್ಲಿಂದಲೇ ಆರೋಪಿಗಳು ಸುಮಾರು 1.85 ಕೆಜಿ ಚಿನ್ನದೊಂದಿಗೆ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾರೆ. ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ತೀವ್ರ ಜಾಲ ಬೀಸಿದ್ದಾರೆ.

ಪ್ರಮುಖ ಸುದ್ದಿ :-   ಕುಮಟಾ: ಭಾರಿ ಮಳೆಗೆ ಗೋಕರ್ಣ–ತದಡಿ ರಸ್ತೆಯಲ್ಲಿ ಗುಡ್ಡ ಕುಸಿತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement