೧೫೦೦ ಸಮಾವೇಶಗಳು, ೧೫,೦೦೦ ವಾಟ್ಸಾಪ್‌ ಗ್ರುಪ್‌ಗಳು: ಪಶ್ಚಿಮ ಬಂಗಾಳ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ…!

ನವ ದೆಹಲಿ: ಮುಂಬರುವ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ 1,500 ಕ್ಕೂ ಹೆಚ್ಚು ಬೃಹತ್‌ ಸಮಾವೇಶಗಳು, 15,000 ವಾಟ್ಸಾಪ್ ಗುಂಪುಗಳು ಮತ್ತು ಪಕ್ಷದ ಪ್ರಮುಖ ಮುಖಂಡರು ಶಿಬಿರ ನಡೆಸಲು ಬಿಜೆಪಿ ತಯಾರಿ ನಡೆಸುತ್ತಿದೆ.
ಪಶ್ಚಿಮ ಬಂಗಾಳದ ಪಕ್ಷದ ಹಿರಿಯ ಕಾರ್ಯಕರ್ತರೊಬ್ಬರ ಪ್ರಕಾರ, ಮತದಾರರನ್ನು ತಲುಪಲು ಕನಿಷ್ಠ 1,500 ದೊಡ್ಡ ಮತ್ತು ಸಣ್ಣ ಸಮಾವೇಶಗಳನ್ನು ನಡೆಸುವಂತೆ ಬಿಜೆಪಿ ಕೇಂದ್ರ ನಾಯಕತ್ವವು ರಾಜ್ಯ ಘಟಕವನ್ನು ಕೇಳಿದೆ. ಸಮಾವೇಶಗಳ ಹೊರತಾಗಿ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಬೂತ್ ಮಟ್ಟದಲ್ಲಿ ವಾಟ್ಸಾಪ್ ಗುಂಪುಗಳನ್ನು ರಚಿಸಲು ಪಕ್ಷದ ಕಾರ್ಯಕರ್ತರಿಗೆ ಸೂಚನೆಗಳನ್ನು ನೀಡಲಾಗಿದೆ.
ಚುನಾವಣೆಯಲ್ಲಿ ಬಿಜೆಪಿಯ ಮಂತ್ರ ಸೋನಾರ್ ಬಾಂಗ್ಲಾ ’ ಶಿಕ್ಷಣ, ಸಂಸ್ಕೃತಿ, ಮೂಲಸೌಕರ್ಯದ ಕೊರತೆಯಿಂದ ಪಶ್ಚಿಮ ಬಂಗಾಳವು ಹಿಂದಕ್ಕೆ ಹೋಗುತ್ತಿದ್ದು, ಎಂದು ಬಿಜೆಪಿಯ ಹಿರಿಯ ಮುಖಂಡ ಮತ್ತು ಪಕ್ಷದ ಪಶ್ಚಿಮ ಬಂಗಾಳ ಘಟಕದ ಮಾಜಿ ಅಧ್ಯಕ್ಷ ರಾಹುಲ್ ಸಿನ್ಹಾ ಹೇಳಿದ್ದಾರೆ. ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಎತ್ತಿ ತೋರಿಸುವುದು ಚುನಾವಣೆಯ ಪ್ರಮುಖ ಪ್ರಚಾರ ಅಭಿಯಾನವಾಗಿದೆ ಎಂದು ಅಲ್ಲಿನ ಬಿಜೆಪಿಯ ಪ್ರಮುಖರು ಹಾಗೂ ಉಸ್ತುವಾರಿಗಳು ಹೇಳಿದ್ದಾರೆ.”
ಬೂತ್ ಸಮಿತಿಗಳನ್ನು ಬಲಪಡಿಸುವ ಮೂಲಕ ಕರಪತ್ರಗಳು, ಪ್ರಧಾನ ಮಂತ್ರಿಯ ಪತ್ರ ಅಥವಾ ಇತರ ಪ್ರಚಾರ ಸಾಮಗ್ರಿಗಳನ್ನು ಮನೆಮನೆಗೆ ತಲುಪಿಸುವ ಗುರಿಯನ್ನೂ ಹೊಂದಲಾಗಿದೆ. ಜೊತೆಗೆ ಮತದಾರರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಮಾಹಿತಿ ಹಂಚಿಕೊಳ್ಳಲು ಈಗಾಗಲೇ 15,000 ವಾಟ್ಸಾಪ್ ಗುಂಪುಗಳನ್ನು ರಚಿಸಲಾಗಿದೆ.
ಮಮತಾ ಬ್ಯಾನರ್ಜಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವುದರ ಹೊರತಾಗಿ, ಬೃಹತ್‌ ಸಮಾವೇಶಗಳು ಮತ್ತು ಪರಿವರ್ತನ ಯಾತ್ರೆಯಲ್ಲಿ, ಪಕ್ಷವು ಒತ್ತು ನೀಡುತ್ತಿದೆ. ಸಂಘಟನೆಯಲ್ಲಿ ನುರಿತ ಹಿರಿಯ ನಾಯಕರು ರಾಜ್ಯದಲ್ಲಿ ಶಿಬಿರ ನಡೆಸಲಿದ್ದಾರೆ ಪಕ್ಷವು ಪ್ರಮುಖ ನಾಯಕರನ್ನು ಪಶ್ಚಿಮ ಬಂಗಾಳಕ್ಕೆ ಕಳುಹಿಸಲು ಸಜ್ಜಾಗಿದ್ದು, ಅವರಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಫೆಬ್ರವರಿ 26 ರಂದು ರಾಜ್ಯ ಪ್ರವಾಸ ಮಾಡಲಿದ್ದಾರೆ.
ಚುನಾವಣಾ ದಿನಾಂಕ ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆ ಇರುವುದರಿಂದ ಪ್ರಚಾರವು ಈಗಾಗಲೇ ಕಾವು ಪಡೆದುಕೊಲ್ಳುವಂತೆ ನೋಡಿಕೊಳ್ಳಲಾಗಿದೆ. ಮತ್ತು ಪಕ್ಷವು ಪರಿಣಾಮಕಾರಿ ಚುನಾವಣೆ ಎದುರಿಸುವ ಎಲ್ಲ ಅವಕಾಶವನ್ನೂ ಬಳಸಿಕೊಳ್ಳಲು ಸಿದ್ಧತೆ ಮಾಡಿಕೊಂಡಿದೆ. “ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಲ್ಲದೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಸಚಿವ ಸ್ಮೃತಿ ಇರಾನಿ ಸೇರಿದಂತೆ ಹಲವಾರು ಹಿರಿಯ ನಾಯಕರು ಮತ್ತು ಮಂತ್ರಿಗಳು ಪ್ರಚಾರ ನಡೆಸಲಿದ್ದಾರೆ
ತನ್ನ ವಿಜಯದಲ್ಲಿ ಮಹತ್ವದ ಪಾತ್ರ ವಹಿಸಬಲ್ಲ 100 ಬೆಸ ವಿಧಾನಸಭಾ ಕ್ಷೇತ್ರಗಳ ಮೇಲ್ವಿಚಾರಣೆಗೆ 22 ಹಿರಿಯ ನಾಯಕ ಮುಖಂಡರನ್ನು ನಿಯೋಜಿಸಲು ಪಕ್ಷ ನಿರ್ಧರಿಸಿದೆ. ಈ ನಾಯಕರಲ್ಲಿ ದೆಹಲಿ ಸಂಸದ ರಮೇಶ್ ಬಿಧುರಿ, ದೆಹಲಿ ಬಿಜೆಪಿ ಮುಖಂಡ ಸತೀಶ್ ಉಪಾಧ್ಯಾಯ, ಬಿಹಾರ ಸಚಿವ ನಿತಿನ್ ನಾಬಿನ್ ಮತ್ತು ಮಾಜಿ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಮೊದಲಾದವರು ಇದ್ದಾರೆ.
ಪಶ್ಚಿಮ ಬಂಗಾಳದ ಜನರಲ್ಲಿ ಬಿಜೆಪಿ ಬಗ್ಗೆ ಸಕಾರಾತ್ಮಕ “ಮನೋಭಾವ ಸೃಷ್ಟಿಸುವುದು ಬಿಜೆಪಿಯ ಪ್ರಥಮಾಧ್ಯತೆ. ಇದೇ ಮುಂದೆ ಮತವಾಗಿ ಪರಿವರ್ತನೆಯಾಗಲಿದೆ ಬಿಜೆಪಿಗೆ ಗೊತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಬಜೆಟ್‌ ಬಂಗಾಳಕ್ಕೆ ಘೋಷಿಸಿರುವ ನಿರ್ದಿಷ್ಟ ಕಾರ್ಯಕ್ರಮಗಳ ಬಗ್ಗೆಯೂ ಚರ್ಚಿಸುವುದು ಅವರ ಚುನಾವಣಾ ರಣತಂತ್ರದ ಒಂದು ಭಾಗವಾಗಿದೆ.
ಪಶ್ಚಿಮ ಬಂಗಾಳದಲ್ಲಿ ಪಕ್ಷದ ಪರಿವರ್ತನ ಯಾತ್ರೆಯ ಸಮಾರೋಪ ಸಮಾರಂಭದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 7 ರಂದು ಕೋಲ್ಕತ್ತಾದಲ್ಲಿ ಸಾರ್ವಜನಿಕ ಸಭೆ ನಡೆಸುವ ಸಾಧ್ಯತೆಯಿದ್ದು, ಇದು ಫೋರ್ಟ್ ವಿಲಿಯಂನ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆಯಲಿದೆ.
ಲೋಕಸಭೆಯ ಅದ್ಭುತ ಪ್ರದರ್ಶನದ ನಂತರ ಬಿಜೆಪಿಯು ಈಗ ನೆಲೆಯಿಲ್ಲದ ರಾಜ್ಯಗಳಿಗೂ ನುಗ್ಗುತ್ತಿದ್ದು, ಬಿಹಾರದ ಚುನಾವಣೆಯ ನಂತರ ಅದು ಮತ್ತಷ್ಟು ಆಕ್ರಮಣಕಾರಿಯಾಗಿದ್ದು ಅದರ ಬಿಸಿ ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ತಟ್ಟಿದೆ. ಹೀಗಾಗಿ ಮಮತಾ ಕಾಂಗ್ರೆಸ್‌ ಹಾಗೂ ಎಡ ಪಕ್ಷಗಳ ಮೈತ್ರಿಗೆ ಮತ ನೀಡಿದರೆ ಕೋಮುವಾದಿ ಪಕ್ಷಕ್ಕೆ ಲಾಭವಾಗುತ್ತಿದೆ ಎಂದು ಮತದಾರರಿಗೆ ಹೇಳಲು ಆರಂಭಿಸಿದ್ದಾರೆ.ಅಸ್ಸಾಂ ನಂತರ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೇರುವ ಗುರಿ ಇಟ್ಟಿರುವ ಬಿಜೆಪಿ ಇದರಲ್ಲಿ ಯಶಸ್ಸು ಪಡೆಯುವುದೇ ಎಂದು ಮುಂದಿನ ದಿನಗಳಲ್ಲಿ ನೋಡಬೇಕು.

ಪ್ರಮುಖ ಸುದ್ದಿ :-   ವ್ಲಾಗರ್, ವಿದ್ಯಾರ್ಥಿ, ಉದ್ಯಮಿ, ಗಾರ್ಡ್....: 9 ಮಂದಿ 'ಪಾಕಿಸ್ತಾನ ಗೂಢಚಾರರ' ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement