ಬಾಗಲಕೋಟೆ ಯೋಧ ಶ್ರೀನಗರದಲ್ಲಿ ಸಾವು

posted in: ರಾಜ್ಯ | 0

ಬಾಗಲಕೋಟೆ: ಜಮ್ಮು ಕಾಶ್ಮೀರದ ಶ್ರೀನಗರದ ಕುಪ್ಪಾಡನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಾಗಲಕೋಟೆ ಯೋಧ ಮಹಾಂತೇಶ್ ದಾಸಪ್ಪನವರ(೪೧) ಅನಾರೋಗ್ಯದ ಹಿನ್ನೆಲೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮಹಾಂತೇಶ್ ಬಾಗಲಕೋಟೆ ತಾಲೂಕಿನ ಬೆನಕಟ್ಟಿ ಗ್ರಾಮದವರು. ಯೋಧ ಎಮ್‌ಇಜಿ ೨ ಇಂಜಿನಿಯರ್ ಬಟಾಲಿಯನ್ ರೆಜಿಮೆಂಟ್ ನಲ್ಲಿದ್ದರು. ಮಹಾಂತೇಶ್ ೨೦೦೦ರಲ್ಲಿ ಭಾರತೀಯ ಸೇನೆಗೆ ಸೇರಿದ್ದರು.

ಭಾರತೀಯ ಸೇನೆಯಲ್ಲಿ ೨೨ ವರ್ಷ ಸೇವೆ ಸಲ್ಲಿಸಿದ ಯೋಧ, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಯೋಧನಿಗೆ ಇನ್ನೇನು ನಾಯಕ್ ಸುಬೇದಾರ್ ಪ್ರಮೋಷನ್ ಆಗುವುದಿತ್ತು. ಆದರೆ ಅದಕ್ಕೂ ಮುನ್ನ ಇಹಲೋಕ ತ್ಯಜಿಸಿದ್ದಾರೆ.

ಜುಲೈ ೨೪ಕ್ಕೆ ನಡೆದ ಎನ್ಕೌಂಟರ್ ನಲ್ಲಿ ಇಬ್ಬರು ಉಗ್ರರ ಹತ್ಯೆ:

ಉತ್ತರ ಕಾಶ್ಮೀರದ ಬಂಡಿಪೋರಾದಲ್ಲಿ ಜುಲೈ ೨೪ಕ್ಕೆ ಮುಂಜಾನೆ ನಡೆದ ಎನ್ಕೌಂಟರ್ ನಲ್ಲಿ ಇಬ್ಬರು ಉಗ್ರರ ಹತ್ಯೆಯಾಗಿದ್ದು, ಮೂವರು ಯೋಧರು ಗಾಯಗೊಂಡಿದ್ದರು. ಅದರಲ್ಲಿ ಬಾಗಲಕೋಟೆ ಯೋಧನೂ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ. ಬಂಡಿಪೋರಾ ಜಿಲ್ಲೆಯ ಸುಮ್ಲಾರ್ನ ಶೊಕ್ಬಾಬಾ ಎಂಬ ಪ್ರದೇಶದಲ್ಲಿ ರಕ್ಷಣಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಇದರಲ್ಲಿ ಇಬ್ಬರು ಉಗ್ರರನ್ನು ಕೊಲ್ಲಲಾಗಿತ್ತು.

 

 

ಪ್ರಮುಖ ಸುದ್ದಿ :-   ಜೈ ಶ್ರೀರಾಮ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಪ್ರಕರಣ : ನಾಲ್ವರು ಆರೋಪಿಗಳ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement