ಹೈದರಾಬಾದ್ : ಹೈದರಾಬಾdin ಉಪ್ಪಲ್ನಲ್ಲಿರುವ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿರುವ ಸ್ಟ್ಯಾಂಡ್ನಿಂದ ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರ ಹೆಸರನ್ನು ತೆಗೆದುಹಾಕಲು ಆದೇಶಿಸಲಾಗಿದೆ.
ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದ ಉತ್ತರ ಪೆವಿಲಿಯನ್ ಸ್ಟ್ಯಾಂಡ್ನಿಂದ ಅಜರುದ್ದೀನ್ ಅವರ ಹೆಸರನ್ನು ತೆಗೆದುಹಾಕುವ ಆದೇಶವನ್ನು ಸ್ವೀಕರಿಸಿದೆ. ಇದಲ್ಲದೆ, ಅಜರುದ್ದೀನ್ ಹೆಸರಿನೊಂದಿಗೆ ಇನ್ನು ಮುಂದೆ ಟಿಕೆಟ್ಗಳನ್ನು ನೀಡದಂತೆ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (HCA)ಗೆ ಆದೇಶಿಸಲಾಗಿದೆ. ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ನ ಎಥಿಕ್ಸ್ ಅಧಿಕಾರಿ ಮತ್ತು ಒಂಬುಡ್ಸ್ಮನ್ ನ್ಯಾಯಮೂರ್ತಿ ವಿ. ಈಶ್ವರಯ್ಯ ಅವರು ಶನಿವಾರ ಈ ಆದೇಶ ಮಾಡಿದ್ದಾರೆ.
ಕ್ರಿಕ್ಬಜ್ ವರದಿಯ ಪ್ರಕಾರ, ಹಿತಾಸಕ್ತಿ ಸಂಘರ್ಷದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಅಜರುದ್ದೀನ್ 2019 ರಲ್ಲಿ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (HCA) ಅಧ್ಯಕ್ಷರಾಗಿದ್ದರು ಮತ್ತು ಅದೇ ವರ್ಷದಲ್ಲಿ ನಡೆದ ಉನ್ನತ ಸಭೆಯಲ್ಲಿ, ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿರುವ ಉತ್ತರ ಪೆವಿಲಿಯನ್ ಸ್ಟ್ಯಾಂಡ್ ಅನ್ನು “ಡಬ್ಲ್ಯು.ಎಸ್. ಲಕ್ಷ್ಮಣ ಪೆವಿಲಿಯನ್” ಇದ್ದಿದ್ದನ್ನು ಅಜರುದ್ದೀನ್ ಹೆಸರಿಗೆ ಮರುನಾಮಕರಣ ಮಾಡಲು ನಿರ್ಧರಿಸಲಾಯಿತು.
ಈ ವರ್ಷ ಫೆಬ್ರವರಿ 28 ರಂದು, ಹೈದರಾಬಾದ್ನ ಲಾರ್ಡ್ಸ್ ಕ್ರಿಕೆಟ್ ಕ್ಲಬ್ (ಎಲ್ಸಿಸಿ) ದೂರು ದಾಖಲಿಸಿ, ಅಜರುದ್ದೀನ್ ಅವರ ಹೆಸರನ್ನು ಸ್ಟ್ಯಾಂಡ್ನಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿತು. ನಿಯಮ 38 ರ ಪ್ರಕಾರ, ಅಪೆಕ್ಸ್ ಕೌನ್ಸಿಲ್ ಸದಸ್ಯರು ತಮ್ಮ ಪರವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲದ ಕಾರಣ ಇದು ಹಿತಾಸಕ್ತಿ ಸಂಘರ್ಷ ಎಂದು ಅದು ಉಲ್ಲೇಖಿಸಿತು.
ಇದಲ್ಲದೆ, ಎಲ್ಎಲ್ಸಿಯು ಓಂಬುಡ್ಸ್ಮನ್ಗೆ ಉತ್ತರ ಸ್ಟ್ಯಾಂಡ್ ಅನ್ನು ಮೊಹಮ್ಮದ್ ಅಜರುದ್ದೀನ್ ಸ್ಟ್ಯಾಂಡ್ ಎಂದು ಹೆಸರಿಸುವಲ್ಲಿ ಅಜರುದ್ದೀನ್ ಅವರ ಕ್ರಮವನ್ನು ಬದಿಗಿಟ್ಟು ಅದನ್ನು ಡಬ್ಲ್ಯೂಎಸ್ ಲಕ್ಷ್ಮಣ ಸ್ಟ್ಯಾಂಡ್ ೆಂದು “ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗಾಗಿ” ಮುಂದುವರಿಸಬೇಕೆಂದು ಮನವಿ ಮಾಡಿತು.
ತಮ್ಮ 25 ಪುಟಗಳ ತೀರ್ಪಿನಲ್ಲಿ, ಈಶ್ವರಯ್ಯ ಅವರು, “ಸಾಮಾನ್ಯ ಸಭೆಯಿಂದ ನಿರ್ಧಾರಕ್ಕೆ ಯಾವುದೇ ಅನುಮೋದನೆ/ಮಾರ್ಪಾಡು ಮಾಡಲಾಗಿಲ್ಲ ಎಂಬ ಅಂಶವು ಪ್ರತಿವಾದಿ ನಂ. 1 (ಅಜರುದ್ದೀನ್) ವಿರುದ್ಧದ ಪ್ರಕರಣವನ್ನು ಮತ್ತಷ್ಟು ಬಲಪಡಿಸುತ್ತದೆ, ಏಕೆಂದರೆ ಪ್ರತಿವಾದಿ ನಂ. 1 ಸ್ವತಃ ಲಾಭ ಪಡೆದುಕೊಳ್ಳಲು ತಮ್ಮ ಅಧಿಕಾರವನ್ನು ಮೀರಿದ್ದಾರೆ ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ