69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ; ಪಟ್ಟಿ ಇಲ್ಲಿದೆ…

ಬೆಂಗಳೂರು: ರಾಜ್ಯ ಸರ್ಕಾರ ಬುಧವಾರ 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿವಿಧ ಕ್ಷೇತ್ರಗಳ ಒಟ್ಟು 69 ಗಣ್ಯರನ್ನು ಈ ವರ್ಷದ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಶಸ್ತಿಗೆ ಆಯ್ಕೆಯಾದವರ ವಿವರಗಳನ್ನು ನೀಡಿದ್ದಾರೆ. ಸಂಘ ಸಂಸ್ಥೆಗಳು ಹಾಗೂ ವೈಯಕ್ತಿಕ ಸೇರಿದಂತೆ ಒಟ್ಟು 69 ಜನರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದ್ದು, ನವೆಂಬರ್‌ 1ರಂದು ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. (2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರ ಸಂಪೂರ್ಣ ಪಟ್ಟಿಯ ಪಿಡಿಎಫ್‌ ಅನ್ನು Rajyotsava award 2024 list   ಇಲ್ಲಿ ಕ್ಲಿಕ್‌ ಮಾಡಿ ನೋಡಬಹುದು)

ರಾಜ್ಯ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ 

ಜಾನಪದ ಕ್ಷೇತ್ರ
ಇಮಾಮಸಾಬ ಎಂ. ವಲ್ಲೆಪನವರ
ಅಶ್ವ ರಾಮಣ್ಣ
ಕುಮಾರಯ್ಯ
ವೀರಭದ್ರಯ್ಯ
ನರಸಿಂಹಲು (ಅಂಧ ಕಲಾವಿದ)
ಬಸವರಾಜ ಸಂಗಪ್ಪ ಹಾರಿವಾಳ
ಎಸ್.ಜಿ. ಲಕ್ಷ್ಮೀದೇವಮ್ಮ
ಪಿಚ್ಚಳ್ಳಿ ಶ್ರೀನಿವಾಸ
ಲೋಕಯ್ಯ ಶೇರ (ಭೂತಾರಾಧನೆ)
ಚಲನಚಿತ್ರ-ಕಿರುತೆರೆ
ಹೇಮಾ ಚೌಧರಿ
ಎಂ.ಎಸ್. ನರಸಿಂಹಮೂರ್ತಿ
ಸಂಗೀತ ಕ್ಷೇತ್ರ
ಪಿ ರಾಜಗೋಪಾಲ
ಎ.ಎನ್.​ ಸದಾಶಿವಪ್ಪ
ನೃತ್ಯ:
ವಿದುಷಿ ಲಲಿತಾ ರಾವ್,
ಆಡಳಿ ಕ್ಷೇತ್ರ:
ಎಸ್​ವಿ ರಂಗನಾಥ (ಮಾಜಿ ಮುಖ್ಯ ಕಾರ್ಯದರ್ಶಿ)
ವೈದ್ಯಕೀಯ ಕ್ಷೇತ್ರ
ಡಾ. ಜೆ.ಬಿ. ಬಿಡನಹಾಳ,
ಡಾ. ಮೈಸೂರು ಸತ್ಯಾನಾರಾಯಣ.
ಡಾ ಲಕ್ಷ್ಮಣ ಹನುಮಂತಪ್ಪ ಬಿದರಿ
ಸಮಾಜ ಸೇವೆ
ವೀರಸಂಗಯ್ಯ,
ಹೀರಾಚಂದ ವಾಗ್ಮರೆ
ಮಲ್ಲಮ್ಮ ಸೂಲಗಿತ್ತಿ
ದಿಲೀಪಕುಮಾರ
ಸಂಕೀರ್ಣ ಕ್ಷೇತ್ರ
ಹುಲಿಕಲ್ ನಟರಾಜ
ಹೆಚ್​.ಆರ್​. ಸ್ವಾಮಿ
ಪ್ರಹ್ಲಾದ ರಾವ್
ಕ ಅಜಿತಕುಮಾರ ರೈ
ಇರ್ಫಾನ್ ರಜಾಕ್
ವಿರೂಪಾಕ್ಷಪ್ಪ ರಾಮಚಂದ್ರಪ್ಪ ಹಾವನೂರು
ಹೊರದೇಶ-ಹೊರನಾಡು
ಕನ್ನಯ್ಯ ನಾಯ್ಡು
ಡಾ. ತುಂಬೆ ಮೊಹಿಯುದ್ದೀನ್
ಚಂದ್ರಶೇಖರ್ ನಾಯಕ
ಪರಿಸರ
ಆಲ್ಮಿತ್ರಾ ಪಟೇಲ್
ಕೃಷಿ
ಶಿವನಾಪುರ ರಮೇಶ, ಪುಟ್ಟೀರಮ್ಮ
ಮಾಧ್ಯಮ
ಎನ್.ಎಸ್. ಶಂಕರ
ಸನತಕುಮಾರ ಬೆಳಗಲಿ
ಎ.ಜಿ. ಕಾರಟಗಿ
ರಾಮಕೃಷ್ಣ ಬಡಶೇಶಿ
ಶಿಲ್ಪಕಲೆ ಕ್ಷೇತ್ರ: ಶಿಲ್ಪಿ ಅರುಣ ಯೋಗಿರಾಜ (ಅಯೋಧ್ಯಾ ಬಾಲರಾಮನ ಶಿಲ್ಪಿ)
ವಿಜ್ಞಾನ-ತಂತ್ರಜ್ಞಾನ: ಪ್ರೊ. ಟಿ.ವಿ. ರಾಮಚಂದ್ರ, ಸುಬ್ಬಯ್ಯ ಅರುಣನ್
ಸಹಕಾರ
ವಿರೂಪಾಕ್ಷಪ್ಪ ನೇಕಾರ
ಬಯಲಾಟ
ಸಿದ್ಧಪ್ಪ ಕರಿಯಪ್ಪ(ಅಂಧ ಕಲಾವಿದ), ನಾರಾಯಣಪ್ಪ ಶಿಳ್ಳೇಕ್ಯಾತ
ಯಕ್ಷಗಾನ
ಕೇಶವ ಹೆಗಡೆ
ಸೀತಾರಾಮ ತೋಳ್ಪಾಡಿ
ರಂಗಭೂಮಿ
ಸರಸ್ವತಿ ಜುಲೈಕ ಬೇಗಂ
ಓಬಳೇಶ್ ಹೆಚ್.ಬಿ.
ಭಾಗ್ಯಶ್ರೀ ರವಿ
ಡಿ. ರಾಮು
ಜನಾರ್ಧನ ಹೆಚ್‌.
ಹನುಮಾನದಾಸ ವ. ಪವಾರ
ಸಾಹಿತ್ಯ ಕ್ಷೇತ್ರ
ಬಿ.ಟಿ. ಲಿಲಿತಾ ನಾಯಕ್
ಅಲ್ಲಮಪ್ರಭು ಬೆಟ್ಟದೂರು
ಡಾ. ಎಂ. ವೀರಪ್ಪ ಮೊಯಿಲಿ
ಹನುಮಂತರಾವ್ ದೊಡ್ಡಮನಿ
ಡಾ. ಬಾಳಾಸಾಹೇಬ್ ಲೋಕಾಪುರ
ಬೈರಮಂಗಲ ರಾಮೇಗೌಡ
ಡಾ. ಪ್ರಶಾಂತ ಮಾಡ್ತಾ
ಶಿಕ್ಷಣ
ಡಾ. ವಿ. ಕಮಲಮ್ಮ
ಡಾ. ರಾಜೇಂದ್ರ ಶೆಟ್ಟಿ
ಡಾ. ಪದ್ಮಾ ಶೇಖರ
ಕ್ರೀಡೆ
ಜೂಡ್ ಫೆಲಿಕ್ಸ್ ಸೆಬಾಸ್ಟಿಯನ್
ಗೌತಮ ವರ್ಮ
ಆರ್‌. ಉಮಾದೇವಿ
ನ್ಯಾಯಾಂಗ
ಬಾಲನ್
ಚಿತ್ರಕಲೆ
ಪ್ರಭು ಹರಸೂರು
ಕರಕುಶಲ
ಚಂದ್ರಶೇಖರ ಸಿರಿವಂತೆ

ಪ್ರಮುಖ ಸುದ್ದಿ :-   ಏರ್ ಇಂಡಿಯಾ ವಿಮಾನದಲ್ಲಿ 7 ಮಂದಿ ಅಸ್ವಸ್ಥ

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement