ಬಿಹಾರ: ಬೆಗುಸರೈನಲ್ಲಿ ಮಡಕೆಯ ನೀರು ಕುಡಿದದ್ದಕ್ಕೆ ವಿಕಲಾಂಗ ವ್ಯಕ್ತಿಯ ಹೊಡೆದು ಕೊಂದ ಅಪ್ಪ-ಮಗ..!

ಬಿಹಾರದ ಬೆಗುಸರೈ ಜಿಲ್ಲೆಯ ಬಡೆಪುರ ಗ್ರಾಮದಲ್ಲಿ ವಿಕಲಾಂಗ ವ್ಯಕ್ತಿಯೊಬ್ಬರು ಶುಕ್ರವಾರ ಲೋಟದಲ್ಲಿದ್ದ ಮಡಕೆ ಕುಡಿದಿದ್ದಕ್ಕಾಗಿ ಥಳಿಸಿದ್ದರಿಂದ ಮೃತಪಟ್ಟಿದ್ದಾರೆ.
ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಚೋಟೆ ಲಾಲ್ ಸಹಾನಿ ಎಂಬ ವ್ಯಕ್ತಿ ಕೊನೆಯುಸಿರೆಳೆದಿದ್ದಾರೆ.
50ರ ಹರೆಯದ ಚೋಟೆ ಲಾಲ್ ಮೀನುಗಾರಿಕೆಗಾಗಿ ತನ್ನ ಹಳ್ಳಿಯ ಹತ್ತಿರದ ಕೊಳಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಹಿಂದಿರುಗುವಾಗ ಬಾಯಾರಿಕೆಯಿಂದಾಗಿ ದಿನೇಶ್ ಸಹಾನಿ ಎಂಬ ವ್ಯಕ್ತಿಯ ಒಡೆತನದ ಮಡಕೆಯಿಂದ ಒಂದು ಲೋಟ ನೀರು ಕುಡಿದ ಕ್ಷುಲ್ಲಕ ಘಟನೆ ಈ ಸಾವಿಗೆ ಕಾರಣವಾಗಿದೆ.
ಚೋಟೆ ಲಾಲ್ ನೀರು ಕುಡಿಯುತ್ತಿದ್ದಾಗ, ದಿನೇಶ್ ಸಹಾನಿ ಮತ್ತು ಮಗ ದೀಪಕ್ ಸಹಾನಿ ನೋಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅವರು, ಅವರು ದೊಣ್ಣೆಯಿಂದ ಹೊಡೆದಿದ್ದಾರೆ. ಗಾಯಾಳು ಚೋಟೆಲಾಲ್‌ ಇತರ ಗ್ರಾಮಸ್ಥರ ಸಹಾಯದಿಂದ ಹೇಗೋ ಮನೆಗೆ ತಲುಪಿದ್ದಾರೆ”ಎಂದು ಸ್ಥಳೀಯ ಚೌಹರಿ ಪೊಲೀಸ್ ಠಾಣೆಯ ಉಸ್ತುವಾರಿ ರಾಘವೇಂದ್ರ ಕುಮಾರ್ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅವರ ಸ್ಥಿತಿ ಹದಗೆಟ್ಟಿದ್ದರಿಂದ, ಅವರ ಪತ್ನಿ ಮಿಥಿಲೇಶ್ ದೇವಿ ಅವರನ್ನು ಶುಕ್ರವಾರ ಚಿಕಿತ್ಸೆಗಾಗಿ ಬೆಗುಸರಾಯ್‌ ಸದರ್ ಆಸ್ಪತ್ರೆಗೆ ಕರೆದೊಯ್ದರು. ಅವರ ಸ್ಥಿತಿ ಗಂಭೀರವಾಗಿದ್ದರಿಂದ ಆಸ್ಪತ್ರೆಯ ವೈದ್ಯರು ಅವರನ್ನು ಪಿಎಂಸಿಎಚ್‌ಗೆ ಕರೆದೊಯ್ದರು ಎಂದು ಕುಮಾರ ಹೇಳಿದ್ದಾರೆ.
ಚೋಟೆ ಲಾಲ್ ಮತ್ತು ಅವರ ಕುಟುಂಬ ತುಂಬಾ ಬಡವರಾಗಿದ್ದರಿಂದ, ಗ್ರಾಮಸ್ಥರು ಅವರ ಚಿಕಿತ್ಸೆಗಾಗಿ ಹಣವನ್ನು ಸಂಗ್ರಹಿಸಿ ಪಿಸಿಎಂಎಚ್‌ಗೆ ಕಳುಹಿಸಿದರು, ಅಲ್ಲಿ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟರು. ಅವರ ಅಂತ್ಯಕ್ರಿಯೆಗೆ ಗ್ರಾಮಸ್ಥರೇ ಹಣ ಸಂಗ್ರಹಿಸಿ ನೀಡಿದ್ದಾರೆ ಮತ್ತೆ ಕುಟುಂಬಕ್ಕೆ ಕಷ್ಟದಲ್ಲಿ ನೆರವಾಗಿದ್ದಾರೆ.
ನಾವು ಮುಖ್ಯ ಆರೋಪಿ ದಿನೇಶ್ ಸಹಾನಿಯನ್ನು ಬಂಧಿಸಿದ್ದೇವೆ. ಮತ್ತೊಬ್ಬ ಆರೋಪ ದೀಪಕ ಸಹಾನಿ ಪರಾರಿಯಾಗಿದ್ದಾನೆ “ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ನಂದಿಗ್ರಾಮ ಉಪಸಮರ : ಮಮತಾಗೆ ಶಾಕ್‌ ಮೇಲೆ ಶಾಕ್‌; ಚಿಹ್ನೆ ಬದಲು, ಕೈಕೊಟ್ಟ ಅಭ್ಯರ್ಥಿ ; ಕಾಂಗ್ರೆಸ್ಸಿಗೆ ಬೆಂಬಲ ಘೋಷಣೆ ಬೆನ್ನಲ್ಲೇ ಕೈ ಅಭ್ಯರ್ಥಿ ಬಂಧನ !

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement