ಕಾರವಾರ : ನರೇಂದ್ರ ಮೋದಿಯವರ 71 ನೇ ಜನ್ಮದಿನದ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ, ಮರಳಿನಲ್ಲಿ ಮೋದಿ ಕಲಾಕೃತಿ ಮೂಡಿಬಂದಿದೆ.
ಮೋದಿಯವರ ಅಭಿಮಾನಿ ವಿಷ್ಟು ಎಂಬವರು ಮೋದಿಯವರ ಮರಳಿನ ಕಲಾಕೃತಿ ರಚಿಸಿ ವಿಶಿಷ್ಟವಾಗಿ ಮೋದಿ ಜನ್ಮದಿನವನ್ನು ಆವರಿಸಿದರು. ಅಂಕೋಲದ ವಿಷ್ಟು ಅವರ ಜೊತೆಗೆ ಮೂರು ಜನ ಕಲಾವಿದರು ಆರು ತಾಸುಗಳ ಶ್ರಮದಿಂದ ನಾಲ್ಕು ಅಡಿಗೂ ಹೆಚ್ಚು ಉದ್ದದ ಪ್ರದಾನಿ ಮೋದಿಯವರ ದೊಡ್ಡ ಕಲಾಕೃತಿಯನ್ನು ರಚಿಸಿದ್ದಾರೆ.
ಈ ಮೋದಿಯ ಮರಳಕಲಾಕೃತಿಯು ಶುಕ್ರವಾರ ಕಡಲತೀರದಲ್ಲಿ ಜನಾಕರ್ಷಣೆಗೆ ಕಾರಣವಾಯಿತು. ನೂರಾರುಜನರು ಬಂದು ಮರಳಿನ ಈ ಕಲಾಕೃತಿ ವೀಕ್ಷಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ