ಐವರು ಬಾಲಕಿಯರು ಸೇರಿ ಒಂದೇ ಕುಟುಂಬದ ಏಳು ಮಂದಿ ನೀರಿನಲ್ಲಿ ಮುಳುಗಿ ಸಾವು

ಕಡಲೂರು: ತಮಿಳುನಾಡಿನ ಕಡಲೂರು ಜಿಲ್ಲೆಯ ಕೆದಿಲಂ ಚೆಕ್ ಡ್ಯಾಂ ಬಳಿ ಭಾನುವಾರ ಮಧ್ಯಾಹ್ನ ಕೆಸರಿನಲ್ಲಿ ಸಿಲುಕಿ ಐವರು ಬಾಲಕಿಯರು ಸೇರಿದಂತೆ ಒಂದೇ ಕುಟುಂಬದ ಏಳು ಜನ ಸಾವಿಗೀಡಾಗಿದ್ದಾರೆ.
ಅಲ್ಲಿ ಕೆಲ ವರ್ಷಗಳ ಹಿಂದೆ ಮರಳು ತೆಗೆದ ನಂತರ ಗುಂಡಿ ನಿರ್ಮಾಣವಾಗಿದ್ದು, ಅದನ್ನು ಹಾಗಿಯೇ ಬಿಡಲಾಗಿದೆ ಎಂದು ಅವರ ಸಂಬಂಧಿಕರು ದೂರಿದ್ದಾರೆ.
ಎ ಕೂಚಿಪಾಳ್ಯಂ ಗ್ರಾಮದ ಎಂ ನವನೀತಂ (20), ಆಕೆಯ ಅತ್ತಿಗೆ ಜಿ ಪ್ರಿಯಾ (19) ಚೆಕ್ ಡ್ಯಾಂ ಬಳಿಯ ಹೊಂಡದಲ್ಲಿ ಸ್ನಾನ ಮಾಡಲು ನಿರ್ಧರಿಸಿದ್ದರು ಮತ್ತು ಅವರ ಸಂಬಂಧಿಕರು ಹಾಗೂ ಸಹೋದರಿಯರಾದ ಆರ್ ಪ್ರಿಯದರ್ಶಿನಿ (13) ಮತ್ತು ಆರ್ ಕವಿಯಾ (11) – ಕುರಿಂಜಿಪಾಡಿಯಿಂದ ರಜೆಗಾಗಿ ಬಂದವರು ಅವರೊಂದಿಗೆ ಸೇರಿಕೊಂಡರು ಎಂದು ನೆಲ್ಲಿಕುಪ್ಪಂ ಪೊಲೀಸ್ ಠಾಣೆಯ ಮೂಲಗಳು ತಿಳಿಸಿವೆ.
ಕೆಸರಿನಲ್ಲಿ ಸಿಲುಕಿಕೊಂಡವರು  ಒಬ್ಬರನ್ನೊಬ್ಬರು ರಕ್ಷಿಸಲು ಯತ್ನಿಸಿ ಮತ್ತೊಬ್ಬರು ನೀರಿನಲ್ಲಿ ಮುಳುಗಿದರು. ಇತರ ಮೂವರು ಹುಡುಗಿಯರು – ಎಂ ಸುಮತಾ (16) ಎ ಮೋನಿಕಾ (16) ಮತ್ತು ಎ ಸಂಗಾವಿ (15) – ಎಂಬವರು ಸನಿಹದಲ್ಲೇ ನೀರಿನಲ್ಲಿ ಆಟವಾಡುತ್ತಿದ್ದರು ಹಾಗೂ ಮುಳುಗುತ್ತಿದ್ದವರನ್ನು ನೋಡಿ ರಕ್ಷಿಸಲು ಪ್ರಯತ್ನಿಸಿ ಅವರು ಸಹ ಮುಳುಗಿದರು ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ಭಾರತ-ಪಾಕಿಸ್ತಾನ ಪರಮಾಣು ಯುದ್ಧ ನಿಲ್ಲಿಸಲು 'ಸಹಾಯ' ಮಾಡಿದ್ದೇವೆ...ಕದನ ವಿರಾಮಕ್ಕೆ 'ದೊಡ್ಡ ಕಾರಣ' ವ್ಯಾಪಾರ ಎಂದ ಅಮೆರಿಕ ಅಧ್ಯಕ್ಷ ಟ್ರಂಪ್‌

ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿ ಮೇರೆಗೆ ಗ್ರಾಮದಿಂದ ಯುವಕರು ಬಂದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯರನ್ನು ಹೊರಗೆ ತಂದಿದ್ದಾರೆ. ಪೊಲೀಸರು ಆಗಮಿಸಿ ಸಂತ್ರಸ್ತರನ್ನು ಆಂಬ್ಯುಲೆನ್ಸ್ ಮೂಲಕ ಕಡಲೂರಿನ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು, ಆದರೆ ಅವರು ಬರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಏತನ್ಮಧ್ಯೆ, ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ ನೀರಿನ ಅಡಿಯಲ್ಲಿ ಯಾರಾದರೂ ಮಣ್ಣಿನಲ್ಲಿ ಸಿಲುಕಿಕೊಂಡಿದ್ದಾರೆಯೇ ಎಂದು ಪರಿಶೀಲಿಸಿದರು.

ಚೆಕ್ ಡ್ಯಾಂಗಾಗಿ ಮರಳು ಗಣಿಗಾರಿಕೆಯಿಂದ ದೊಡ್ಡ ಹೊಂಡ ಸೃಷ್ಟಿಯಾಗಿದೆ. ಇತ್ತೀಚಿಗೆ ಸುರಿದ ಮಳೆಯಿಂದಾಗಿ ನೀರಿನ ಪ್ರಮಾಣ ಹೆಚ್ಚಿದ್ದು, ಆಳದ ಅರಿವಿಲ್ಲದೆ ಜನರು ಪೊಲೀಸರ ಎಚ್ಚರಿಕೆಯ ನಡುವೆಯೂ ನೀರಿನಲ್ಲಿ ಇಳಿಯುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೃಷಿ ಸಚಿವ ಎಂಆರ್‌ಕೆ ಪನೀರ್‌ಸೆಲ್ವಂ ಅವರು ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ತಮ್ಮ ವೈಯಕ್ತಿಕ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ 25 ಸಾವಿರ ಪರಿಹಾರವನ್ನು ನೀಡಿದರು ಮತ್ತು ಸಾರ್ವಜನಿಕರು ಜಲಮೂಲಗಳಲ್ಲಿ ಆಟವಾಡದಂತೆ ವಿನಂತಿಸಿದರು. ಪ್ರಿಯಾ ಒಂದು ತಿಂಗಳ ಹಿಂದೆ ನವನೀತಮ್ ಅವರ ಸಹೋದರ ಎಂ ಗುನಾಲ್ ಅವರನ್ನು ವಿವಾಹವಾಗಿದ್ದರು, ಸಾವಿಗೀಡಾದ ಇತರರು ಶಾಲಾ ವಿದ್ಯಾರ್ಥಿನಿಯರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮುಖ್ಯಮಂತ್ರಿ ಸ್ಟಾಲಿನ್‌ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ನೀಡಿದ್ದು, ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಪ್ರಧಾನಿ ಮೋದಿ ಭಾಷಣ ಮುಗಿಸಿದ ಬೆನ್ನಲ್ಲೇ ಜಲಂಧರ್‌ ಬಳಿ ಕಣ್ಗಾವಲು ಡ್ರೋನ್ ಹೊಡೆದುರುಳಿಸಿದ ಸೇನೆ ; ವಿದ್ಯುತ್ ಸ್ಥಗಿತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement