ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರವನ್ನು ನಿರ್ವಹಿಸುವಲ್ಲಿ ಪೊಲೀಸರ ಪಾತ್ರವನ್ನು ಶ್ಲಾಘಿಸಿದ ನಂತರ ಪತಿ ತನಗೆ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಆರೋಪಿಸಿ ಮೊರಾದಾಬಾದಿನ 36 ವರ್ಷದ ಮಹಿಳೆಯೊಬ್ಬರು ತನ್ನ ಪತಿ ಮತ್ತು ಅತ್ತೆಯ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.
ಸಂಭಾಲ್ನಲ್ಲಿ ನಡೆದ ಹಿಂಸಾಚಾರದ ವೀಡಿಯೊಗಳನ್ನು ನೋಡದಂತೆ ಪತಿ ತನಗೆ ಎಚ್ಚರಿಕೆ ನೀಡಿದ್ದಾನೆ ಎಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.
ದೊಡ್ಡ ಪ್ರಮಾಣದ ಹಿಂಸಾಚಾರಕ್ಕೆ ಕಡಿವಾಣ ಹಾಕುವಲ್ಲಿ ಆ ದಿನ ಪೊಲೀಸರ ಪಾತ್ರ ಶ್ಲಾಘನೀಯ ಎಂದು ನಾನು ಅವರಿಗೆ ಹೇಳಿದ್ದಕ್ಕೆ ಕೋಪಗೊಂಡ ತನ್ನ ಗಂಡ ತನಗೆ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಇದು ಮಹಿಳೆಯ ಎರಡನೇ ಮದುವೆಯಾಗಿದ್ದು, ಆಕೆ ತನ್ನ ಮೊದಲ ಪತಿಯಿಂದ 2021 ರಲ್ಲಿ ವಿಚ್ಛೇದನ ಪಡೆದಿದ್ದರು.
ವರದಿಯ ಪ್ರಕಾರ, ಮಹಿಳೆ ಗುರುವಾರ ಗುರುಗ್ರಾಮಕ್ಕೆ ಎರಡನೇ ಗಂಡ ಇರುವಲ್ಲಿ ಭೇಟಿ ನೀಡಿದಾಗ ಈ ಘಟನೆ ನಡೆದಿದೆ.
ಆತನ ಕಚೇರಿಯಲ್ಲಿ ಆತನಿಗಾಗಿ ಕಾಯುತ್ತಿದ್ದ ವೇಳೆ ಸಂಭಾಲ್ನಲ್ಲಿನ ಹಿಂಸಾಚಾರದ ವೀಡಿಯೊವನ್ನು ಮಹಿಳೆ ನೋಡಿದ್ದಾರೆ. ಮತ್ತು ಪೊಲೀಸರ ಕ್ರಮಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ, ಅವರ ಪತಿ ಅವರು ವೀಡಿಯೊವನ್ನು ನೋಡುವುದನ್ನು ನೋಡಿದಾಗ ಕೋಪಗೊಂಡರು ಮತ್ತು ಹಾಗೆ ಮಾಡದಂತೆ ಎಚ್ಚರಿಕೆ ನೀಡಿದ್ದಾನೆ. ನಂತರ ತಲಾಖ್ ನೀಡಿದ್ದಾನೆ.
ಮೊರಾದಾಬಾದ್ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಸತ್ಪಾಲ ಅಂತಿಲ್ ಘಟನೆಯನ್ನು ಖಚಿತಪಡಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಮಹಿಳೆಯ ದೂರನ್ನು ಮಹಿಳಾ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
ಭಾರತೀಯ ಕಾನೂನಿನ ಪ್ರಕಾರ, ತ್ರಿವಳಿ ತಲಾಖ್ ಅಪರಾಧವಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮೊರಾದಾಬಾದ್ನ ಮಹಿಳಾ ಠಾಣೆಯ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನವೆಂಬರ್ 19 ರಂದು ಉತ್ತರ ಪ್ರದೇಶದ ಸಂಭಾಲ್ನಲ್ಲಿ ತೊಂದರೆ ಪ್ರಾರಂಭವಾಯಿತು, ಅಲ್ಲಿ ಮೊದಲು ಹಿಂದೂ ದೇವಾಲಯವಿತ್ತು ಎಂಬ ಅರ್ಜಿಗೆ ಸಂಬಂಧಿಸಿದಂತೆ ಮೊಘಲರ ಕಾಲದ ಮಸೀದಿಯೊಂದರ ಸರ್ವೆಗೆ ನ್ಯಾಯಾಲಯವು ಆದೇಶಿಸಿದ ನಂತರ ಗದ್ದಲ ಆರಂಭವಾಯಿತು.
ನವೆಂಬರ್ 24 ರಂದು, ಎರಡನೇ ಸರ್ವೆ ಸಂದರ್ಭದಲ್ಲಿ, ಶಾಹಿ ಜಾಮಾ ಮಸೀದಿ ಬಳಿ ಪ್ರತಿಭಟನೆಗಳು ನಡೆದವು, ಇದು ಭದ್ರತಾ ಪಡೆಗಳೊಂದಿಗೆ ಹಿಂಸಾತ್ಮಕ ಘರ್ಷಣೆಗೆ ಕಾರಣವಾಯಿತು, ಪ್ರತಿಭಟನೆ ಹಿಂಸೆಗೆ ತಿರುಗಿ ನಾಲ್ವರು ಸಾವಿಗೀಡಾದರು ಮತ್ತು ಅನೇಕರು ಗಾಯಗೊಂಡರು.
ಈ ಘಟನೆಯು ಕೋಮು ಉದ್ವಿಗ್ನತೆಗೆ ಕಾರಣವಾಯಿತು ಮತ್ತು ರಾಜ್ಯದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಯಿತು.
ನಿಮ್ಮ ಕಾಮೆಂಟ್ ಬರೆಯಿರಿ