ಕಪಿಲ್‌ ಸಿಬಲ್ ಗಾಂಧಿಗಳ ಕಾಂಗ್ರೆಸ್‌ ನಾಯಕತ್ವ ಟೀಕಿಸಿದ ಬೆನ್ನಲ್ಲೇ, ಸಿಬಲ್‌ ಯಾಕೆ ಆರೆಸ್ಸೆಸ್‌-ಬಿಜೆಪಿ ಭಾಷೆಯಲ್ಲಿ ಮಾತನಾಡ್ತಿದ್ದಾರೆ ಎಂದು ಮಾಣಿಕ್ಕಂ ಠಾಗೋರ್ ಪ್ರಶ್ನೆ

ನವದೆಹಲಿ: ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯ ನಂತರ ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹ ಮುಂದುವರಿದಿದ್ದು, ಪಕ್ಷದ ಲೋಕಸಭೆ ವಿಪ್ ಮಾಣಿಕ್ಕಂ ಠಾಗೋರ್ ಅವರು ಮಂಗಳವಾರ ಹಿರಿಯ ನಾಯಕ ಕಪಿಲ್ ಸಿಬಲ್ ನಾಯಕತ್ವದ ವಿರುದ್ಧ ಟೀಕೆಗಳನ್ನು ಮಾಡಿದ್ದಕ್ಕೆ ಸಿಬಲ್‌ ಅವರು ಆರ್‌ಎಸ್‌ಎಸ್-ಬಿಜೆಪಿ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಠಾಗೋರ್, ಕಟ್ಟಾ ರಾಹುಲ್ ಗಾಂಧಿ ನಿಷ್ಠಾವಂತ ಎಂದೇ ಹೇಳಲಾಗುತ್ತಿದ್ದು, ಕಾಂಗ್ರೆಸ್ ಪಕ್ಷವನ್ನು ಕೊಲ್ಲಲು ಮತ್ತು ಭಾರತದ ಕಲ್ಪನೆಯನ್ನು ನಾಶಮಾಡಲು ಗಾಂಧಿಗಳು ಪಕ್ಷದ ನಾಯಕತ್ವದ ಸ್ಥಾನದಿಂದ ಹೊರಗುಳಿಯಬೇಕೆಂದು ಆರೆಸ್ಸೆಸ್ ಮತ್ತು ಬಿಜೆಪಿ ಬಯಸುತ್ತವೆ. ಆರೆಸ್ಸೆಸ್ ಮತ್ತು ಬಿಜೆಪಿ ಏಕೆ ನೆಹರೂ-ಗಾಂಧಿ ನಾಯಕತ್ವದಿಂದ ಹೊರಬರಲು ಬಯಸುತ್ತವೆ? ಏಕೆಂದರೆ ಗಾಂಧಿಯವರ ನಾಯಕತ್ವವಿಲ್ಲದೆ ಕಾಂಗ್ರೆಸ್ ಜನತಾ ಪಕ್ಷವಾಗುತ್ತದೆ. ಕಾಂಗ್ರೆಸ್ ಅನ್ನು ಕೊಲ್ಲುವುದು ಸುಲಭ, ನಂತರ ಭಾರತದ ಕಲ್ಪನೆಯನ್ನು ನಾಶಪಡಿಸುವುದು ಸುಲಭ.ಕಪಿಲ್ ಸಿಬಲ್‌ಗೆ ಅದು ತಿಳಿದಿದೆ ಆದರೆ ಅವರು ಆರ್‌ಎಸ್‌ಎಸ್/ಬಿಜೆಪಿ ಭಾಷೆಯಲ್ಲಿ ಏಕೆ ಮಾತನಾಡುತ್ತಿದ್ದಾರೆ” ಎಂದು ” ಎಂದು ಟಾಗೋರ್ ಟ್ವಿಟರ್‌ನಲ್ಲಿ ಟೀಕಿಸಿದ್ದಾರೆ.

ಗಾಂಧಿಗಳು ಕಾಂಗ್ರೆಸ್‌ ನಾಯಕತ್ವದಿಂದ ದೂರ ಸರಿಯಬೇಕು ಮತ್ತು ಪಕ್ಷವನ್ನು ಮುನ್ನಡೆಸಲು ಬೇರೆ ನಾಯಕರಿಗೆ ಅವಕಾಶ ನೀಡಬೇಕು ಎಂದು ಸಿಬಲ್ ಪ್ರತಿಪಾದಿಸಿದ್ದಾರೆ.
ನನಗೆ ‘ಸಬ್ ಕಿ ಕಾಂಗ್ರೆಸ್’ ಬೇಕು. ಕೆಲವರಿಗೆ ‘ಘರ್ ಕಿ ಕಾಂಗ್ರೆಸ್’ ಬೇಕು” ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಕಪಿಲ್‌ ಸಿಬಲ್ ಕಾಂಗ್ರೆಸ್‌ ನಾಯಕತ್ವದ ಬಗ್ಗೆ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಭಾನುವಾರ ಸಭೆ ನಡೆಸಿದ ನಂತರ ಈ ಹೇಳಿಕೆಗಳು ಬಂದವು ಮತ್ತು ಸುಮಾರು ಐದು ಗಂಟೆಗಳ ಚರ್ಚೆಯ ನಂತರ ಸೋನಿಯಾ ಗಾಂಧಿ ಅವರ ನಾಯಕ್ತವದಲ್ಲಿಯೇ ಕಾಂಗ್ರೆಸ್‌ ಮುನ್ನಡೆಯಲು ಮತ್ತು ಪಕ್ಷವನ್ನು ಬಲಪಡಿಸಲು ಅಗತ್ಯವಾದ ಬದಲಾವಣೆಗಳನ್ನು ಪ್ರಾರಂಭಿಸಲು ಸಭೆ ಒತ್ತಾಯಿಸಿತು.

ಪ್ರಮುಖ ಸುದ್ದಿ :-   ಮುಂಗಾರು ಮಳೆ ತಡೆದದ್ದು ಬರೀ 'ಎಲ್ ನಿನೊ' ಮಾತ್ರವಲ್ಲ ; ಇತರ 5 ಜಾಗತಿಕ ಹವಾಮಾನ ವೈಪರೀತ್ಯಗಳೂ ಕಾರಣ...!

ಪಕ್ಷಕ್ಕಾಗಿ ಯಾವುದೇ ತ್ಯಾಗವನ್ನು ಮಾಡುವ ಗಾಂಧಿಗಳ ಪ್ರಸ್ತಾಪವನ್ನು ಕಾಂಗ್ರೆಸ್‌ ಕಾರ್ಕಾರಿ ಸಮಿತಿ (CWC) ತಿರಸ್ಕರಿಸಿತು, ಇದನ್ನು ಕೆಲವರು ಗಾಂಧಿ ಕುಟುಂಬದವರು ಹಿಂದೆ ಸರಿಯುವ ಪ್ರಸ್ತಾಪವೆಂದು ಪರಿಗಣಿಸಿದರು ಮತ್ತು ಅವರ ನಾಯಕತ್ವದಲ್ಲಿ ನಂಬಿಕೆಯನ್ನು ಇರಿಸಿದರು.
ಕಾಂಗ್ರೆಸ್ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಅವರ ಎಲ್ಲಾ ಮಾಜಿ ನಾಯಕರ ವೀಡಿಯೊವನ್ನು ಹಾಕಿದೆ.
“ನಾವು ಹೋರಾಡುತ್ತೇವೆ. ನಾವು ಜಯಿಸುತ್ತೇವೆ. ನಾವು ನಿಮ್ಮ ಪರವಾಗಿ ಧ್ವನಿ ಎತ್ತುವುದನ್ನು ಮುಂದುವರಿಸುತ್ತೇವೆ” ಎಂದು ಪಕ್ಷವು ಹೇಳಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement