ಪಟಿಯಾಲ ಜೈಲಿನಲ್ಲಿ ಗುಮಾಸ್ತನಾಗಿ ನವಜೋತ್ ಸಿಧು ಕೆಲಸ, ದಿನಕ್ಕೆ 90 ರೂ. ಸಂಬಳ

ನವದೆಹಲಿ: 1988ರ ರಸ್ತೆ ಗಲಾಟೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಪಂಜಾಬ್ ಕಾಂಗ್ರೆಸ್ ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಪಟಿಯಾಲ ಸೆಂಟ್ರಲ್ ಜೈಲಿನಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಾರೆ. ಸಿಧುಗೆ ಮೂರು ತಿಂಗಳ ಕಾಲ ತರಬೇತಿ ನೀಡಲಾಗುತ್ತದೆ ಮತ್ತು ಸುದೀರ್ಘ ನ್ಯಾಯಾಲಯದ ತೀರ್ಪುಗಳನ್ನು ಸಂಕ್ಷಿಪ್ತಗೊಳಿಸುವುದು ಮತ್ತು ಜೈಲು ದಾಖಲೆಗಳನ್ನು ಹೇಗೆ ಸಂಗ್ರಹಿಸುವುದು ಎಂಬುದನ್ನು ಕಲಿಸಲಾಗುತ್ತದೆ.
ನವಜೋತ್‌ ಸಿಧು, ಜೈಲು ಕೈಪಿಡಿಯಂತೆ ಮೊದಲ 90 ದಿನಗಳವರೆಗೆ ಸಂಬಳ ಪಡೆಯುವುದಿಲ್ಲ. ಅವರ ತರಬೇತಿ ಮುಗಿದ ನಂತರ, ಅವರು ದಿನಕ್ಕೆ 40 ರಿಂದ 90 ರೂಪಾಯಿಗಳ ವರೆಗೆ ಕೂಲಿಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಅವರ ಕೌಶಲ್ಯದ ಆಧಾರದ ಮೇಲೆ ಅವರ ವೇತನವನ್ನು ನಿರ್ಧರಿಸಲಾಗುತ್ತದೆ ಮತ್ತು ಗಳಿಕೆಯನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಜೈಲು ಅಧಿಕಾರಿಯ ಪ್ರಕಾರ, ನವಜೋತ್ ಸಿಧು ಅವರು ಉನ್ನತ ಮಟ್ಟದ ಕೈದಿಯಾಗಿರುವುದರಿಂದ ಬ್ಯಾರಕ್‌ನಿಂದಲೇ ಕೆಲಸ ಮಾಡುತ್ತಾರೆ. ಜೈಲಿನ ಕಡತಗಳನ್ನು ಬ್ಯಾರಕ್‌ನಲ್ಲಿ ಅವರಿಗೆ ಕಳುಹಿಸಲಾಗುವುದು. ಏಕೆಂದರೆ ಅವರನ್ನು ತನ್ನ ಸೆಲ್‌ನಿಂದ ಹೊರಗೆ ಕದಲಲು ಬಿಡುವುದಿಲ್ಲ.
ಜೈಲು ಅಧಿಕಾರಿಗಳ ಪ್ರಕಾರ, ಸಿಧು ಮಂಗಳವಾರ ಗುಮಾಸ್ತನಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಎರಡು ಪಾಳಿಗಳಲ್ಲಿ ಕೆಲಸ ಮಾಡುತ್ತಾರೆ – ಬೆಳಿಗ್ಗೆ 9-ಮಧ್ಯಾಹ್ನ ಮತ್ತು 3 ರಿಂದ ಸಂಜೆ 5 ರವರೆಗೆ.
ಏತನ್ಮಧ್ಯೆ, ಸಿದ್ದು ಇರುವ ಬ್ಯಾರಕ್‌ನಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಐವರು ವಾರ್ಡನ್‌ಗಳು ಮತ್ತು ನಾಲ್ವರು ಜೈಲು ಕೈದಿಗಳಿಗೂ ಸಿಧು ಮೇಲೆ ನಿಗಾ ಇಡುವಂತೆ ಸೂಚಿಸಲಾಗಿದೆ.

ಪ್ರಮುಖ ಸುದ್ದಿ :-   ವಿಜಯಪುರ : 27 ವರ್ಷಗಳಿಂದ ತಲೆಮರೆಸಿಕೊಂಡಿದ್ದ 58 ಮಂದಿ ಸಾವಿಗೀಡಾಗಿದ್ದ ಕೊಯಮತ್ತೂರು ಸ್ಫೋಟದ ಆರೋಪಿ ಬಂಧನ

1988 ರ ರೋಡ್ ರೇಜ್ ಪ್ರಕರಣದಲ್ಲಿ ಕ್ರಿಕೆಟಿಗ-ರಾಜಕಾರಣಿಗೆ ಮೇ 19 ರಂದು ಸುಪ್ರೀಂ ಕೋರ್ಟ್ ಒಂದು ವರ್ಷದ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿತು. ಅವರು ಮೇ 20 ರಂದು ಪಟಿಯಾಲದ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾದರು.
ಏತನ್ಮಧ್ಯೆ, ಸ್ಥೂಲಕಾಯತೆ ಮತ್ತು ಚಯಾಪಚಯ ಅಸ್ವಸ್ಥತೆಯಿಂದ ಬಳಲುತ್ತಿರುವ ನವಜೋತ್ ಸಿಂಗ್ ಸಿಧುಗಾಗಿ ವೈದ್ಯಕೀಯ ಮಂಡಳಿಯು ಡಯಟ್ ಚಾರ್ಟ್ ಅನ್ನು ತಯಾರಿಸಿದೆ. ಡಯಟ್ ಚಾರ್ಟ್ ಇನ್ನೂ ಜೈಲಿಗೆ ತಲುಪಿಲ್ಲ. ಸಿಧು ಸಲಾಡ್ ಮತ್ತು ಹಣ್ಣಿನ ಆಹಾರದಿಂದ ಬದುಕುಳಿದಿದ್ದಾರೆ. ತನಗೆ ಗೋಧಿ ಅಲರ್ಜಿ ಎಂದು ಹೇಳಿ ದಾಲ್ ರೋಟಿ ತಿನ್ನಲು ನಿರಾಕರಿಸಿದ್ದರು.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement