ಕೈವ್‌ನಲ್ಲಿರುವ ‘ಭಯೋತ್ಪಾದಕರು, ಮಾದಕ ವ್ಯಸನಿಗಳ’ ಸರ್ಕಾರ ಉರುಳಿಸಿ: ಉಕ್ರೇನ್ ಸೇನೆಗೆ ರಷ್ಯಾ ಅಧ್ಯಕ್ಷ ಪುಟಿನ್ ಕರೆ

ಮಾಸ್ಕೋ: ಕೈವ್‌ನಲ್ಲಿ ದೇಶದ ಪ್ರಜಾಸತ್ತಾತ್ಮಕವಾಗಿ ಚುನಾಯಿತ ನಾಯಕತ್ವವನ್ನು ಉರುಳಿಸಲು ವ್ಲಾಡಿಮಿರ್ ಪುಟಿನ್ ಉಕ್ರೇನಿಯನ್ ಸೇನೆಗೆ ಕರೆ ನೀಡಿದ್ದಾರೆ. ರಷ್ಯಾದ ಅಧ್ಯಕ್ಷರು ಉಕ್ರೇನಿಯನ್ ನಾಯಕತ್ವವನ್ನು “ಭಯೋತ್ಪಾದಕರು” ಮತ್ತು “ಮಾದಕ ವ್ಯಸನಿಗಳು ಮತ್ತು ನವ-ನಾಜಿಗಳ ಗುಂಪು” ಎಂದು ಉಲ್ಲೇಖಿಸಿದ್ದಾರೆ.
ರಷ್ಯಾದ ಪಡೆಗಳ ವಿರುದ್ಧ ಉಕ್ರೇನ್ ತನ್ನ ನಾಗರಿಕರನ್ನು ಮಾನವ ಗುರಾಣಿಯಾಗಿ ಬಳಸುತ್ತಿದೆ ಎಂದು ಆರೋಪಿಸಿದ ಪುಟಿನ್, ” ನಿಮ್ಮ ಮಕ್ಕಳು, ನಿಮ್ಮ ಹೆಂಡತಿಯರು ಮತ್ತು ಹಿರಿಯರನ್ನು ಮಾನವ ಗುರಾಣಿಗಳಾಗಿ ಬಳಸಲುನವ-ನಾಜಿಗಳಿಗೆ ಅನುಮತಿಸಬೇಡಿ. ಧಿಕಾರವನ್ನು ನಿಮ್ಮ ಕೈಯಲ್ಲಿ ತೆಗೆದುಕೊಳ್ಳಿ. ಮತ್ತೊಮ್ಮೆ, ನಾನು ಉಕ್ರೇನ್ ಸಶಸ್ತ್ರ ಪಡೆಗಳ ಮಿಲಿಟರಿ ಸಿಬ್ಬಂದಿಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಪ್ರಾಸಂಗಿಕವಾಗಿ, ಉಕ್ರೇನ್ ಅಧ್ಯಕ್ಷ ಮತ್ತು ಪ್ರಧಾನ ಮಂತ್ರಿ ಇಬ್ಬರೂ ಯಹೂದಿಗಳು.
ಕೈವ್‌ನಲ್ಲಿ ನೆಲೆಸಿ ಇಡೀ ಉಕ್ರೇನಿಯನ್ ಜನರನ್ನು ಒತ್ತೆಯಾಳಾಗಿ ತೆಗೆದುಕೊಂಡ ಈ ಜಂಕೀಸ್ ಮತ್ತು ನವ-ನಾಜಿಗಳ ಗ್ಯಾಂಗ್‌ಗಿಂತ ನಿಮ್ಮೊಂದಿಗೆ ಒಪ್ಪಂದಕ್ಕೆ ಬರುವುದು ಸುಲಭ ಎಂದು ತೋರುತ್ತದೆ ಎಂದು ಪುಟಿನ್‌ ಹೇಳಿದ್ದಾರೆ.
ಗುರುವಾರ ಮುಂಜಾನೆ ಆಕ್ರಮಣದೊಂದಿಗೆ ರಷ್ಯಾದ ಪಡೆಗಳು ಉಕ್ರೇನ್‌ನ ರಾಜಧಾನಿ ಕೈವ್ ಮೇಲೆ ದಾಳಿ ನಡೆಸಿತು. ತಜ್ಞರ ಪ್ರಕಾರ, ಕೈವ್ ರಷ್ಯಾದ ಪಡೆಗಳ ವಶಕ್ಕೆ ಬರಲು ಕೇವಲ ಗಂಟೆಗಳ ದೂರದಲ್ಲಿದೆ.
ಉಕ್ರೇನ್‌ನಲ್ಲಿನ ರಷ್ಯಾದ ಆಕ್ರಮಣವು ಜಾಗತಿಕ ನಕ್ಷೆಗಳನ್ನು ಮರು-ಚಿತ್ರಿಸಲು ಮತ್ತು ಶೀತಲ ಸಮರದ ಸಮಯದಲ್ಲಿ ಅದು ಹೊಂದಿದ್ದ ಪ್ರಭಾವವನ್ನು ಪುನರುಜ್ಜೀವನಗೊಳಿಸಲು ಕ್ರೆಮ್ಲಿನ್‌ನ ಪ್ರಯತ್ನಗಳಾಗಿದೆ ಎಂದು ಪರಿಣತರು ಹೇಳುತ್ತಾರೆ.
ಈ ಆಕ್ರಮಣವು ಪ್ರಪಂಚದಾದ್ಯಂತ ಟೀಕೆಗೆ ಗುರಿಯಾಗಿದೆ, ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಹಿಂಸಾಚಾರವನ್ನು ತಕ್ಷಣವೇ ಕೊನೆಗೊಳಿಸುವಂತೆ ಕರೆ ನೀಡಿವೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement