ಉತ್ತರ ಕನ್ನಡದ ಮತ್ತೋರ್ವ ಪ್ರತಿಭೆಗೆ ಅಮೆರಿಕ ಲ್ಯುಸಿಯಾನಾ ವಿವಿಯಿಂದ ಚಿಕ್ಕಮಕ್ಕಳ ಅಂತಸ್ರಾವ ತಜ್ಞೆ ಗೌರವ

ಶಿರಸಿ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಸಂಕದಗುಂಡಿಯ ಮೂಲದ ಡಾ. ಜಯಲಕ್ಷ್ಮಿ ನಾರಾಯಣ ಭಟ್ಟ, (MBBS, MD, MPH) ಇವರಿಗೆ ಅಮೆರಿಕದ ಪ್ರತಿಷ್ಠಿತ ಲ್ಯುಸಿಯಾನಾ ವಿಶ್ವವಿದ್ಯಾಲಯದಿಂದ ಚಿಕ್ಕಮಕ್ಕಳ ಎಂಡೋಕ್ರೈನಾಲಜಿ ಫೆಲೋಶಿಪ್ ಗೌರವವನ್ನು ಪ್ರದಾನ ಮಾಡಲಾಯಿತು. ಮಕ್ಕಳ ಮತ್ತು ಹದಿಹರೆಯದವರಲ್ಲಿ ಅಂತಸ್ರಾವಕ ಕಾಯಿಲೆಗಳು ಮತ್ತು ಮಧುಮೇಹ ಮೆಲ್ಲಿಟಸ್ ಹೊಂದಿರುವ ಸಂಶೋಧನೆ ಮತ್ತು ಕ್ಲಿನಿಕಲ್ ಆರೈಕೆಯಲ್ಲಿ ಎಂಡೋಕ್ರೈನಾಲಜಿ ತಜ್ಞರು ಪ್ರಮುಖ ಪಾತ್ರ ವಹಿಸುತ್ತಾರೆ. ಅದರಲ್ಲೂ ಪೀಡಿಯಾಟ್ರಿಕ್ ಎಂಡೋಕ್ರೈನಾಲಜಿ ಫೆಲೋಶಿಪ್ ಸಂಕೀರ್ಣ ಪರೀಕ್ಷೆಯಾಗಿದ್ದು ಮೆಡಿಸಿನ್ ವಿಭಾಗದ ಕಠಿಣ ಪರೀಕ್ಷೆಗಳಲ್ಲಿ ಒಂದೆನಿಸಿದೆ. ಅದರಲ್ಲಿ ಡಾ. ಜಯಲಕ್ಷ್ಮಿ ಭಟ್ಟ ಅವರು ಯಶಸ್ಸುಗಳಿಸಿ ಇದೀಗ ಅಲ್ಲಿನ ಮಕ್ಕಳ ಅಂತಃಸ್ರಾವ ತಜ್ಞೆಯಾಗಿ ಸಂಶೋಧನೆ ಮತ್ತು ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಉಮ್ಮಚಗಿಯ ಸಹಕಾರಿ ಸಂಘದ ಅಧ್ಯಕ್ಷರು ಮತ್ತು ಜಿಲ್ಲೆಯ ಸಹಕಾರಿ ಧುರೀಣ ಎಮ್. ಜಿ. ಭಟ್ಟ ಸಂಕದಗುಂಡಿ ಅವರ ತಮ್ಮನ ಮಗಳು. ಇವರ ತಂದೆ ನಾರಾಯಣ ಭಟ್ಟರು ಕೃಷಿಪಧವೀಧರರು. ವಿಜಯಾ ಬ್ಯಾಂಕಿನಲ್ಲಿ ಉನ್ನತ ಹುದ್ದೆಯಲ್ಲಿ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ. ತಾಯಿ ಲೀಲಾವತಿ ಭಟ್ಟ್ ಅವರು. ಜಯಲಕ್ಷ್ಮಿಯವರು ತಮ್ಮ MBBS ಪದವಿಯನ್ನು ವಿಜಯಪುರದ ಬಿಎಲ್‌ಡಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಗಳಿಸಿದ್ದಾರೆ. ನಂತರ ಅಮೆರಿಕದ ಜಾನ್ ಹಾಪ್ಕಿನ್ ವಿಶ್ವವಿದ್ಯಾಲಯದಿಂದ ಎಂಪಿಎಚ್‌ (MPH) ಅಲಬಾಮಾ ವಿಶ್ವವಿದ್ಯಾಲಯದಿಂದ ಎಂಡಿ (MD) ಪದವಿಯನ್ನು ಪಡೆದ್ದಿದ್ದಾರೆ. ಚಿಕ್ಕಮಕ್ಕಳ ಅಂತಃಸ್ರಾವ ತಜ್ಞೆಯಾಗಿ ಪ್ರಪಂಚದ ಕೆಲವೇ ಪರಿಣಿತ ವೈದ್ಯರಾಗಿ ಗುರುತಿಸಿಲ್ಪಟ್ಟಿದ್ದಾರೆ. ಜಿಲ್ಲೆಗೆ ಹೆಮ್ಮೆಯ ಸಂಗತಿಯೂ ಹೌದು. ಹಾಸಣಗಿಯ ಕೃಷಿಕ ಪರಮೇಶ್ವರ ಭಟ್ಟ ಮತ್ತು ಶಾಂತಾ ದಂಪತಿ ಮಗ ಡಾ. ರಾಮಚಂದ್ರ ಭಟ್ಟರು ಇವರ ಪತಿ.
ಜಯಲಕ್ಷ್ಮಿ ಯವರ ಪತಿ ಡಾ. ರಾಮಚಂದ್ರ ಭಟ್ಟರೂ ಸಹ ಅಮೆರಿಕದ ಪ್ರತಿಷ್ಠಿತ ಯುನಿವರ್ಸಿಟಿ ಆಫ಼್ ಸೌತ್ ಅಲಾಬಾಮದಾ ಮಕ್ಕಳ ವಿಭಾಗದಲ್ಲಿ ನವಜಾತ ಶಿಶು ತಜ್ಞರಾಗಿ (Neonatal-Perinatal medicine Fellowship) ಸೇವೆ ಸಲ್ಲಿಸುತ್ತಿದ್ದಾರೆ. ಇವರು ತಮ್ಮ ಎಂಬಿಬಿಎಸ್‌ ಪದವಿಯನ್ನು ಹುಬ್ಬಳ್ಳಿಯ ಕಿಮ್ಸ್ನಲ್ಲಿ ಪಡೆದಿದ್ದು ನಂತರ ದೆಹಲಿಯ ಮೌಲಾನಾ ಅಜ಼ಾದ ವೈದ್ಯಕೀಯ ಕಾಲೇಜಿನಿಂದ ಎಂಡಿ ಮಾಡಿದ್ದಾರೆ. ನಂತರದಲ್ಲಿ ಅಮೆರಿಕದ ಮೇರಿ ಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಚಿಕ್ಕ ಮಕ್ಕಳ ತಜ್ಞರಾಗಿ ಸ್ನಾತಕೊತ್ತರ ಪದವಿಯನ್ನು ಪಡೆದಿದ್ದರು. ನಂತರ ಇವರು ಅಲಾಬಾಮಾದ ವಿಶ್ವವಿದ್ಯಾಲಯದಿಂದ Fellowship, Neonatal-Perinatal medicine ತಜ್ಞರಾಗಿ ಇದೀಗ ಅಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ. ಅಕಲಿಕ ವಾಗಿ ಜನಿಸುವ ಶಿಶುಗಳ ಅಥವಾ ತೀವ್ರವಾಗಿ ಅನಾರೋಗ್ಯದ ನವಜಾತ ಶಿಶುಗಳಿಳ ಆರೋಗ್ಯದ ಕುರಿತು ವಿಶೇಷ ಕಾಳಜಿಯನ್ನು ವಹಿಸುವದು ಮತ್ತು ಹೆಚ್ಚಿನ ಅಪಾಯದ ಗರ್ಭಧರಿಸಿದ ತಾಯಂದರ ಆರೋಗ್ಯದ ಕುರಿತಾದ ಕಾಳಜಿಯನ್ನು ನಿಯೂನಾಟಾಲಜಿಷ್ಟ್ ವೈದ್ಯರು ನಿರ್ವಹಿಸುತ್ತಾರೆ. ಈ ಕುರಿತು ಇವರ ಅನೇಕ ಸಂಶೋಧನಾ ಪ್ರಬಂಧಗಳು ಅಂತರಾಷ್ಟ್ರೀಯ ಜರ್ನಲ್ ಗಳಲ್ಲಿ ಪ್ರಕಟವಾಗಿರುತ್ತವೆ.

ಪ್ರಮುಖ ಸುದ್ದಿ :-   ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆ : ತಾಯಿ-ಮಗು ಸಾವು

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement