ಸಾಲದ ಹಣ ಮರಳಿ ಕೊಡಲು ತಡವಾಗಿದ್ದಕ್ಕೆ ಪತ್ನಿ, ಪುತ್ರನಿಗೆ ಗೃಹ ಬಂಧನ : ಮನನೊಂದು ರೈತ ಆತ್ಮಹತ್ಯೆ

ಬೆಳಗಾವಿ : ಸಾಲ ಮರಳಿಸಲು ವಿಳಂಬವಾಗಿದೆ ಎಂಬ ಕಾರಣಕ್ಕೆ ಪತ್ನಿ ಮತ್ತು ಪುತ್ರನನ್ನು ಗೃಹ ಬಂಧನದಲ್ಲಿ ಇರಿಸಿಕೊಂಡಿದ್ದಕ್ಕೆ ಮನನೊಂದ ರೈತರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕು ಇಸ್ಲಾಂಪುರದಲ್ಲಿ ಬೆಳಕಿಗೆ ಬಂದಿದೆ.
ರಾಜು ಖೋತಗಿ ಎಂಬವರು ಆತ್ಮಹತ್ಯೆ ಮಾಡಿಕೊಂಡ ರೈತ ಎಂದು ಗುರುತಿಸಲಾಗಿದೆ. ಮೃತ ರಾಜು ಭೀಕರ ಬರದಿಂದ ಬೆಳೆ ನಷ್ಟವಾದ ನಂತರ ಅದೇ ಗ್ರಾಮದ ಸಿದ್ದವ್ವ ಎಂಬ ಮಹಿಳೆ ಬಳಿ 5 ತಿಂಗಳ ಹಿಂದೆ 1.5 ಲಕ್ಷ ರೂ. ಸಾಲ ಮಾಡಿದ್ದರು ಎಂದು ಹೇಳಲಾಗಿದೆ. ಇದಕ್ಕೆ ಪ್ರತಿ ತಿಂಗಳು ಶೇಕಡಾ 10 ರಷ್ಟು ಬಡ್ಡಿ ತುಂಬುತ್ತಿದ್ದರಂತೆ. ಎರಡು ದಿನದ ಹಿಂದೆ ಒಂದೇ ಬಾರಿಗೆ ಹಣ ಕೊಡುವಂತೆ ಸಿದ್ದವ್ವ ಕೇಳಿದ್ದಾಳೆ ಎನ್ನಲಾಗಿದೆ.. ಆಗ ರಾಜು ಇನ್ನು ಒಂದೆರಡು ದಿನ ಕಾಲಾವಕಾಶ ಕೇಳಿದ್ದರಂತೆ.

ಇದಕ್ಕೆ ಒಪ್ಪದ ಸಿದ್ಧವ್ವ ಸಾಲ ಮರಳಿಸುವವರೆಗೆ ಪುತ್ರನನ್ನು ಮನೆಯಲ್ಲಿ ಬಿಟ್ಟು ಹೋಗುವಂತೆ ಹೇಳಿದ್ದಾಳೆ. ಸಂಜೆಯಾದರೂ ಪುತ್ರನನ್ನು ಬಿಡದೆ ಇದ್ದಾಗ ಸಿದ್ದವ್ವಳ ಮನೆಗೆ ರಾಜು ಮತ್ತು ಅವರ ಪತ್ನಿ ದುರ್ಗವ್ವ ಹೋಗಿದ್ದಾರೆ ಎನ್ನಲಾಗಿದ್ದು, ಆಗ ಪುತ್ರನನ್ನು ಬಿಟ್ಟು ರಾಜು ಮತ್ತು ದುರ್ಗವ್ವರನ್ನು ಮನೆಯಲ್ಲಿ ಕೂಡ್ರಿಸಲಾಗಿತ್ತು. ಮರುದಿನ ರಾಜುವನ್ನು ಬಿಟ್ಟು ಪುತ್ರ ಬಸವರಾಜು ಮತ್ತು ದುರ್ಗವ್ವರನ್ನು ಗೃಹಬಂಧನದಲ್ಲಿ ಇರಿಸಿದ್ದರಂತೆ. ತನ್ನ ಪತ್ನಿ ಹಾಗೂ ಪುತ್ರನನ್ನು ಗೃಹಬಂಧನದಿಂದ ಬಿಡುವಂತೆ ಪರಿಪರಿಯಾಗಿ ಬೇಡಿಕೊಂಡರೂ ಬಿಡುಗಡೆ ಮಾಡದೇ ಇದ್ದುದರಿಂದ ಮನನೊಂದ ರಾಜು ಮನೆಗೆ ಬಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಡಳಿತ ಸಂಪೂರ್ಣ ವಿಫಲ ; ಬಿ.ಆರ್.​ ಪಾಟೀಲ ಬೆನ್ನಲ್ಲೇ ತಮ್ಮ ಸರ್ಕಾರದ ವಿರುದ್ಧವೇ ಸಿಡಿದೆದ್ದ ಮತ್ತೊಬ್ಬ ಕಾಂಗ್ರೆಸ್ ಶಾಸಕ ; ರಾಜೀನಾಮೆ ಮಾತು

5 / 5. 2

ಶೇರ್ ಮಾಡಿ :

  1. HM SADANANDA

    ಅಯ್ಯೋ ಶಿವನೇ!?
    ಭಂಡ ಮೊಂಡರನ್ನು ನೋಡಿ ಕಲಿಯಿರಿ. ಮಲ್ಯ ಕೇಜ್ರಿವಾಲ್ ರಂಥವರನ್ನು. ಕ್ಯಾಕರಿಸಿ ಉಗುಳಿದರೂ ಏನೂ ಆಗದಂತಿರುತ್ತಾರೆ. ಸಾಲಕ್ಕೆ ಹೆದರಬೇಡಿ. ಕಾನೂನು ನಿಮ್ಮ ಜೊತೆಗಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement