
ನವದೆಹಲಿ: ಈ ವರ್ಷದ ಮೇ ತಿಂಗಳಲ್ಲಿ ಭಾರತದ ಆಪರೇಶನ್ ಸಿಂಧೂರ ದಾಳಿಯ ನಂತರ ಪಾಕಿಸ್ತಾನದ ನೂರ್ ಖಾನ್ ವಾಯುನೆಲೆಯಲ್ಲಿ ಾದರ ಪುನರ್ನಿಮಾಣ ಕೆಲಸಗಳು ನಡೆಯುತ್ತಿವೆ ಎಂದು ಉಪಗ್ರಹದ ಹೊಸ ಚಿತ್ರಗಳು ಸೂಚಿಸುತ್ತವೆ.
ಪಾಕಿಸ್ತಾನದ ಇಸ್ಲಾಮಾಬಾದ್ನಿಂದ 25 ಕಿ.ಮೀ.ಗಿಂತ ಕಡಿಮೆ ದೂರದಲ್ಲಿರುವ ಮಿಲಿಟರಿ ಕಾರ್ಯತಂತ್ರದ ವಾಯುನೆಲೆಯಾದ ನೂರ್ ಖಾನ್ ಪಾಕಿಸ್ತಾನ ವಾಯುಪಡೆಯ ಮಹತ್ವದ ವಾಯುನೆಲೆಯಾಗಿದೆ.
ಮೇ 10 ರಂದು, ಭಾರತವು ಈ ವಾಯುನೆಲೆಯಲ್ಲಿ ಇರುವ ಎರಡು ವಿಶೇಷ ಉದ್ದೇಶದ ಟ್ರಕ್ಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿಯನ್ನು ನಡೆಸಿತು. ಡ್ರೋನ್ ಗಳಿಗೆ ಆಜ್ಞೆ ನೀಡಲು ಮತ್ತು ಅವುಗಳ ನಿಯಂತ್ರಣಕ್ಕಾಗಿ ಬಳಸುವ ಸಂಕೀರ್ಣ ಮತ್ತು ಟ್ರಕ್ಗಳು ಎರಡೂ ನಾಶವಾದವು.

ಭಾರತವು ಈ ವೇಳೆ ಯಾವ ಕ್ಷಿಪಣಿಗಳನ್ನು ಬಳಸಿ ನಾಶಪಡಿಸಿದೆ ಎಂಬುದನ್ನು ಎಂದಿಗೂ ದೃಢಪಡಿಸದಿದ್ದರೂ, ನೂರ್ ಖಾನ್ನಲ್ಲಿರುವ ಸೌಲಭ್ಯವನ್ನು ಬ್ರಹ್ಮೋಸ್ ಅಥವಾ ಸ್ಕಲ್ಪ್ (SCALP) ವಾಯು-ಉಡಾವಣಾ ಭೂ ದಾಳಿ ಕ್ಷಿಪಣಿಗಳು ಅಥವಾ ಎರಡರಿಂದಲೂ ನಾಶಪಡಿಸಿರುವ ಬಲವಾದ ಸಾಧ್ಯತೆಯಿದೆ. ಆಪರೇಶನ್ ಸಿಂಧೂರ ಸಮಯದಲ್ಲಿ, ಬ್ರಹ್ಮೋಸ್ ಅನ್ನು ಭಾರತೀಯ ವಾಯುಪಡೆಯ Su-30 ಯುದ್ಧವಿಮಾನಗಳಿಂದ ಉಡಾಯಿಸಲಾಯಿತು, ಸ್ಕಲ್ಪ್ ಕ್ಷಿಪಣಿಯನ್ನು ರಫೇಲ್ನಿಂದ ಉಡಾಯಿಸಲಾಯಿತು.
ಉಪಗ್ರಹದ ಹೊಸಚಿತ್ರಗಳ ಚಿತ್ರಗಳ ಅನುಕ್ರಮವು, ದಾಳಿಗೆ ಮುನ್ನ, ನೂರ್ ಖಾನ್ ವಾಯುನೆಲೆಯ ಸೌಲಭ್ಯದ ಎರಡೂ ಬದಿಗಳಲ್ಲಿ ಮೇಲ್ಛಾವಣಿಗಳನ್ನು ಹೊಂದಿರುವ ಎರಡು ಟ್ರ್ಯಾಕ್ಟರ್-ಟ್ರೇಲರ್ ಟ್ರಕ್ಗಳನ್ನು ಹೊಂದಿತ್ತು ಎಂದು ಸೂಚಿಸುತ್ತದೆ.
ಮೇ 10, 2025 ರ ಚಿತ್ರವು, ದಾಳಿಗಳು ಎರಡೂ ಟ್ರಕ್ಗಳನ್ನು ನಾಶಪಡಿಸಿದವು ಮತ್ತು ಪಕ್ಕದ ಕಟ್ಟಡಗಳಿಗೆ ಭಾರೀ ಹಾನಿಯನ್ನುಂಟುಮಾಡಿದವು ಎಂದು ತೋರಿಸುತ್ತದೆ.
ಮೇ 17 ರ ಹೊತ್ತಿಗೆ, ಆ ಸ್ಥಳವನ್ನು ತೆರವುಗೊಳಿಸಲಾಯಿತು. ಸೆಪ್ಟೆಂಬರ್ 3 ರ ಚಿತ್ರ (ಈ ವಾರದ ಆರಂಭದಲ್ಲಿ) ಸ್ಥಳದಲ್ಲಿ ಹೊಸ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂಬುದನ್ನು ತೋರಿಸುತ್ತದೆ. ಇದರಲ್ಲಿ ಹೊಸ ಗೋಡೆಗಳ ನಿರ್ಮಾಣವೂ ಸೇರಿವೆ ಎಂದು ಹೇಳಲಾಗಿದೆ.
ಉಪಗ್ರಹದ ಇತ್ತೀಚಿನ ಹೆಚ್ಚಿನ ರೆಸಲ್ಯೂಶನ್ ಚಿತ್ರವು ಪಾಕಿಸ್ತಾನವು ಭಾರತವು ನೂರ್ ಖಾನ್ ವಾಯುನೆಲೆಯಲ್ಲಿ ದಾಳಿ ಮಾಡಿ ಹಾಮಿ ಮಾಡಿದ ಸ್ಥಳವನ್ನು ಪುನರ್ನಿರ್ಮಿಸಲು ಪ್ರಾರಂಭಿಸಿದೆ ಎಂದು ಸೂಚಿಸುತ್ತದೆ. ಭಾರತೀಯ ಕಾರ್ಯಾಚರಣೆಯು ವಾಯುನೆಲೆಯಲ್ಲಿನ ಸೌಲಭ್ಯದೊಳಗೆ ಇರಿಸಲಾಗಿದ್ದ ವಿಶೇಷ ಮಿಲಿಟರಿ ವಾಹನಗಳನ್ನು ನಾಶಪಡಿಸಿತು, ಮತ್ತು ಪಕ್ಕದ ಕಟ್ಟಡಗಳಿಗೆ ಹಾನಿಯನ್ನುಂಟುಮಾಡಿತು. ನಂತರ, ಆಂತರಿಕ ವ್ಯವಸ್ಥೆಗಳು, ವೈರಿಂಗ್ ವೈಫಲ್ಯಗಳು ಅಥವಾ ಇತರ ಹಾನಿಗಳಿಗಾಗಿ ಸುತ್ತಮುತ್ತಲಿನ ಹಲವಾರು ರಚನೆಗಳನ್ನು ಕೆಡವಲಾಯಿತು ಎಂದು ಜಿಯೋ ಇಂಟೆಲಿಜೆನ್ಸ್ ತಜ್ಞ ಡೇಮಿಯನ್ ಸೈಮನ್ ಹೇಳುತ್ತಾರೆ.
ನೂರ್ ಖಾನ್ ಮೇಲಿನ ಐಎಎಫ್ ದಾಳಿಯನ್ನು ಯುದ್ಧತಂತ್ರವಾಗಿ ನೋಡಲಾಯಿತು, ಯಾಕೆಂದರೆ ಭಾರತದ ದಾಳಿಯು ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿಯ ಬಳಿಯ ನೆಲೆಯನ್ನು ಗುರಿಯಾಗಿಸಿಕೊಂಡಿತ್ತು. ಹನಿಯಾದವುಗಳಲ್ಲಿ ಸಾಬ್ ಎರಿಯೆ ವಾಯುಗಾಮಿ ಮುಂಚಿನ ವಾರ್ನಿಂಗ್ ವ್ಯವಸ್ಥೆಗಳು, ಸಿ -130 ಸಾರಿಗೆ ವಿಮಾನಗಳು ಮತ್ತು ಐಎಲ್ -78 ಮಧ್ಯ-ಗಾಳಿ ಇಂಧನ ತುಂಬುವ ವಿಮಾನಗಳನ್ನು ಒಳಗೊಂಡಿವೆ.
ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರನ್ನು ಹತ್ಯೆ ಮಾಡಿದ ನಂತರ ಭಾರತವು ಪಾಕಿಸ್ತಾನದ ಒಳಗಿದ್ದ ಹಲವಾರು ಮಿಲಿಟರಿ ಮತ್ತು ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿ ನಾಶಪಡಿಸಿತು. ಭಾರತದ ವಾಯುಪಡೆಯ ವಿಮಾನಗಳು ಪಾಕಿಸ್ತಾನದಲ್ಲಿ 200 ಕಿಮೀ ದೂರದ ವರೆಗೆ ಒಳಹೊಕ್ಕು ದಾಳಿ ಮಾಡಿತು, ಇದು 1971 ರ ಯುದ್ಧದ ನಂತರ ಪಾಕ್ ವಾಯುಪ್ರದೇಶದಲ್ಲಿ ನಡೆದ ಅತ್ಯಂತ ಒಳಹೊಕ್ಕು ನಡೆದ ದಾಳಿಯಾಗಿದೆ.
.


ನಿಮ್ಮ ಕಾಮೆಂಟ್ ಬರೆಯಿರಿ