ಬೋಗಸ್‌ ಬಿಲ್‌ ತೆಗೆದುಕೊಂಡಿದ್ದರೆ ತನಿಖೆ:ಕಾರಜೋಳ

ಬೆಂಗಳೂರು: ಯಾವುದೇ ಕೆಲಸ ಮಾಡದೆ ಬೋಗಸ್ ಬಿಲ್ ಮಾಡಿ ತೆಗೆದುಕೊಂಡಿದ್ದರೆ ಇಲಾಖೆಯ ಉನ್ನತಾಧಿಕಾರಿಗಳಿಂದ ತನಿಖೆ ಮಾಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವಿಧಾನ ಪರಿಷತ್ತಿಗೆ ತಿಳಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟ ಅನುದಾನವನ್ನು ಆ ವರ್ಗದ ಮನೆಗಳಿಂದ ಹಿಡಿದು ಶಾಲೆ, ಮಾರುಕಟ್ಟೆ, ದೇವಾಲಯದವರೆಗೂ ರಸ್ತೆ ನಿರ್ಮಿಸಲು ಅವಕಾಶ ಕಲ್ಪಿಸಲಾಗಿದೆ. ಅವರು ಹೋಗಿ ಬರುವ ಶಾಲೆ, ದೇವಾಲಯ, ಮಾರುಕಟೆವರೆಗೂ ರಸ್ತೆ ನಿರ್ಮಿಸಿದರೆ ದುರುಪಯೋಗವಾಗುವುದಿಲ್ಲ. ಚರಂಡಿ ನಿರ್ಮಾಣದಲ್ಲೂ ನೀರು ಒಳ ಬರುವ, ಹೊರ ಹೋಗುವ ವ್ಯವಸ್ಥೆ ಇರಬೇಕು ಎಂದರು. ದ್ವೇಷದ ಭಾವನೆ ಬೇಡ ಎಂಬ ಕಾರಣಕ್ಕಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು  ಎಂದು  ಕಾರಜೋಳ  ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರ ಅರವಿಂದಕುಮಾರ್ ಅರಳಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಎಸ್ಸಿ-ಎಸ್ಟಿ ಅನುದಾನ ದುರ್ಬಳಕೆಯಾಗಬಾರದೆಂಬ  ತಮ್ಮ ಕಳಕಳಿಗೆ ನನ್ನ ಸಹಮತ ಇದೆ ಎಂದರು.

ನಾಲ್ಕು ಕಂದಾಯ ವಿಭಾಗದಲ್ಲೂ ನಾಲ್ಕು ಸೈನಿಕ ವಸತಿ ಶಾಲೆ ಆರಂಭಿಸುವ ಚಿಂತನೆ ಇದೆ. ಸೈನಿಕ ಶಾಲೆಗೆ ಬೇಕಾದ ಭೂಮಿ, ಅನುದಾನವನ್ನು ಸರ್ಕಾರ ನೀಡಲಿದ್ದು, ಅದರ ಆಡಳಿತ ನಿರ್ವಹಣೆಯನ್ನು ಸೇನೆಯೇ ನಿರ್ವಹಿಸಲಿದೆ. ಆದರೆ, ಶೇ.50ರಷ್ಟು ಪ್ರವೇಶವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೀಡಬೇಕು ಎಂದು ಹೇಳಿದರು.

 

ಪ್ರಮುಖ ಸುದ್ದಿ :-   ವೀಡಿಯೊಗಳು..| ಬೆಂಗಳೂರಿನಲ್ಲಿ ಭಾರೀ ಮಳೆ : ತಾಪಮಾನ ದಿಢೀರ್‌ ಕುಸಿತ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement