ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಮೂರನೇ ಅವಧಿಯು ಮೊದಲ ಎರಡಕ್ಕಿಂತ ಭಿನ್ನವಾಗಿರಬಹುದು ಎಂಬ ಮೊದಲ ಸಂಕೇತವಾಗಿ, ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ ಕೇಂದ್ರದ ಅಗ್ನಿಪಥ ಯೋಜನೆಯನ್ನು ಮರುಪರಿಶೀಲಿಸಲು ಪಕ್ಷವು ಬಯಸುತ್ತದೆ ಎಂದು ಜೆಡಿಯು ನಾಯಕರೊಬ್ಬರು ಹೇಳಿದ್ದಾರೆ.
ಬಿಜೆಪಿ ಮಿತ್ರ ಪಕ್ಷ ಜೆಡಿಯುನ ಮುಖ್ಯ ವಕ್ತಾರ ಕೆ.ಸಿ. ತ್ಯಾಗಿ, ಹಲವಾರು ರಾಜ್ಯಗಳಲ್ಲಿ ಯೋಜನೆಯ ವಿರುದ್ಧ ಅಸಮಾಧಾನವಿದೆ ಎಂದು ಹೇಳಿದ್ದಾರೆ. ಆದ್ದರಿಂದ ನಾವು ಅಗ್ನಿವೀರ ಮರುಪರಿಶೀಲಿಸಲು ಕೋರುತ್ತೇವೆ, ನಾವು ಅದನ್ನು ವಿರೋಧಿಸುವುದಿಲ್ಲ ಎಂದು ಅವರು ಹೇಳಿದರು.
ಸರ್ಕಾರ ರಚನೆ ಕುರಿತು ಮಾತನಾಡಿದ ಜೆಡಿಯು ನಾಯಕ ಕೆ.ಸಿ.ತ್ಯಾಗಿ, ಅಗ್ನಿವೀರರ ವಿವಿಧ ಷರತ್ತುಗಳ ಬಗ್ಗೆ ಚರ್ಚೆಯಾಗಬೇಕು. ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತು ನಮ್ಮ ಪಕ್ಷದ ಮುಖ್ಯಸ್ಥರು ತಮ್ಮ ಅಭಿಪ್ರಾಯವನ್ನು ಕಾನೂನು ಆಯೋಗಕ್ಕೆ ಲಿಖಿತವಾಗಿ ನೀಡಿದ್ದಾರೆ ಮತ್ತು ಅವರು ಅದಕ್ಕೆ ಬದ್ಧರಾಗಿರುತ್ತಾರೆ ಎಂದು ಹೇಳಿದರು.
ಸರ್ಕಾರ ರಚನೆಗೆ ಯಾವುದೇ ಪೂರ್ವ ಷರತ್ತಿಲ್ಲ ಎಂದು ಕೆ.ಸಿತ್ಯಾಗಿ ಹೇಳಿದರು. ‘ಬಿಹಾರಕ್ಕೆ ವಿಶೇಷ ಸ್ಥಾನಮಾನ’ದ ಕುರಿತು ಜೆಡಿಯು ಇದು ಯಾವಾಗಲೂ ಪಕ್ಷದ ಬೇಡಿಕೆಯಾಗಿದೆ. ಇದಕ್ಕೂ ಯಾವುದೇ ಪೂರ್ವ ಷರತ್ತಿಲ್ಲ. ಬೇಷರತ್ ಬೆಂಬಲವಿದೆ. ಆದರೆ ಬಿಹಾರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವುದು ನಮ್ಮ ಹೃದಯದಲ್ಲಿದೆ …,” ಎಂದು ಅವರು ಹೇಳಿದರು.
ಜಾತಿ ಆಧಾರಿತ ಜನಗಣತಿ ಕುರಿತು ಜೆಡಿಯು ವಕ್ತಾರ ಕೆ.ಸಿ.ತ್ಯಾಗಿ ಮಾತನಾಡಿ, ”ದೇಶದ ಯಾವ ಪಕ್ಷವೂ ಜಾತಿ ಆಧಾರಿತ ಜನಗಣತಿ ಬೇಡ ಎಂದು ಹೇಳಿಲ್ಲ, ಬಿಹಾರ ಮಾರ್ಗ ತೋರಿಸಿದೆ. ಪ್ರಧಾನಿಯೂ ಸರ್ವಪಕ್ಷ ನಿಯೋಗದಲ್ಲಿ ವಿರೋಧಿಸಿಲ್ಲ. ಜಾತಿ -ಆಧಾರಿತ ಜನಗಣತಿಯು ಈಗಿನ ಅವಶ್ಯಕತೆಯಾಗಿದೆ ಎಂದು ಹೇಳಿದರು.
2022 ರಲ್ಲಿ ಪ್ರಾರಂಭವಾದ ಅಗ್ನಿಪಥ ಯೋಜನೆಯು ಸೈನ್ಯದ ಮೂರು ಸೇವೆಗಳ ವಯಸ್ಸಿನ ಪ್ರೊಫೈಲ್ ಅನ್ನು ಕಡಿಮೆ ಮಾಡುವ ಉದ್ದೇಶದಿಂದ ಸಶಸ್ತ್ರ ಪಡೆಗಳಿಗೆ ಸಿಬ್ಬಂದಿಯನ್ನು ಅಲ್ಪಾವಧಿಗೆ ಸೇರಿಸಲು ಅವಕಾಶ ನೀಡುತ್ತದೆ. ಈ ಯೋಜನೆಯಡಿ ನೇಮಕಗೊಂಡವರನ್ನು ಅಗ್ನಿವೀರ ಎಂದು ಕರೆಯಲಾಗುತ್ತದೆ.
ಯೋಜನೆಯಡಿಯಲ್ಲಿ, 17.5 ವರ್ಷ-21 ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ಸೈನ್ಯಕ್ಕೆ ಸೇರಿಸಲಾಗುತ್ತದೆ. ಈ ನೇಮಕಾತಿಯಲ್ಲಿ ಶೇ.25ರಷ್ಟನ್ನು ಇನ್ನೂ 15 ವರ್ಷಗಳ ಕಾಲ ಉಳಿಸಿಕೊಳ್ಳಲು ಅವಕಾಶವಿದೆ. ಅವರ ಸೇವೆ ಕೊನೆಗೊಳ್ಳುತ್ತಿದ್ದಂತೆ ಉಳಿದವರಿಗೆ ಆರ್ಥಿಕ ಪ್ಯಾಕೇಜ್ ನೀಡಲಾಗುತ್ತದೆ.
ಈ ಯೋಜನೆಯ ಘೋಷಣೆಯು ದೇಶದ ಹಲವಾರು ಭಾಗಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳಿಗೆ ಕಾರಣವಾಯಿತು. ಏಕೆಂದರೆ ಸಶಸ್ತ್ರ ಪಡೆಗಳಿಗೆ ಪ್ರವೇಶಕ್ಕೆ ತಯಾರಿ ನಡೆಸುತ್ತಿರುವ ಯುವಕರು ಅಲ್ಪಾವಧಿಯ ಸೇವಾ ಯೋಜನೆಯನ್ನು ವಿರೋಧಿಸಿದರು.
2024 ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಒಟ್ಟು 240 ಸ್ಥಾನಗಳನ್ನು ಗೆದ್ದು, ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು ಆದರೆ ಸಂಪೂರ್ಣ ಬಹುಮತಕ್ಕೆಂತ ಸ್ವಲ್ಪ ಕಡಿಮೆಯಾಯಿತು. ಆದಾಗ್ಯೂ, ಎನ್ಡಿಎ ಜೊತೆಗೆ ಸೇರಿ 29೩ ಸದಸ್ಯರನ್ನು ಹೊಂದಿದೆ, ಇದು ಸರಳ ಬಹುಮತವಾದ 272 ಕ್ಕಿಂತ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಿತೀಶಕುಮಾರ ಮತ್ತು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ಬೆಂಬಲವಿಲ್ಲದೆ ಬಿಜೆಪಿ ಕೇಂದ್ರದಲ್ಲಿ ಸರ್ಕಾರ ರಚಿಸುವುದು ಕಷ್ಟಸಾಧ್ಯವಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ