2,500 ಕೋಟಿ ಕೊಡಿ ನಿಮ್ಮನ್ನ ಸಿಎಂ ಮಾಡ್ತೀವಿ ಎಂದು ದೆಹಲಿಯಿಂದ ಬಂದ ಕೆಲವರು ಹೇಳಿದ್ರು: ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ ಯತ್ನಾಳ್

ಬೆಳಗಾವಿ: ದೆಹಲಿಯಿಂದ ಕೆಲವರು ನಿಮ್ಮನ್ನು ಮುಖ್ಯಮಂತ್ರಿ ಮಾಡ್ತೀವಿ 2500 ಕೋಟಿ ರೂ. ಕೊಡಿ ಎಂದು ಹೇಳುತ್ತ ಬಂದಿದ್ದರು ಎಂಬ ಸ್ಫೋಟಕ ಹೇಳಿಕೆ ನೀಡಿರುವ ಬಿಜೆಪಿ ಶಾಶಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ರಾಮದುರ್ಗದ ಕಾರ್ಯಕ್ರಮವೊಂದಲ್ಲಿ ಮಾತನಾಡಿದ ಅವರು, ಚುನಾವಣಾ ಸಂದರ್ಭದಲ್ಲಿ ಕೆಲವರು ಹಣ ಮಾಡಲು ಹೀಗೆಲ್ಲ ಮಾಡುತ್ತಾರೆ. ದೆಹಲಿಗೆ ಕರೆದುಕೊಂಡು ಹೋಗಿ ಸೋನಿಯಾಗಾಂಧಿ, ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡಿಸುತ್ತೇವೆ ಎಂದೆಲ್ಲ ಸುಳ್ಳು ಹೇಳುತ್ತಾರೆ. ಇಂಥವರನ್ನು ನಂಬಿ ಅಲ್ಲಿ ಇಲ್ಲಿ ಹೋಗಿ ಹಾಳಾಗಬೇಡಿ ಎಂದು ಟಿಕೆಟ್ ಆಕಾಂಕ್ಷಿಗಳಿಗೆ ಕಿವಿಮಾತು ಹೇಳಿದ್ದಾರೆ.

ಮುಖ್ಯಮಂತ್ರೊ ಮಾಡುತ್ತೇವೆ, 2500 ಕೋಟಿ ರೂ.ಗಳನ್ನು ಕೊಡಿ ಎಂದು ಬಂದಿದ್ದವರಿಗೆ ನಾನು 2500 ಕೋಟಿ ಏನೆಂದು ತಿಳಿದಿದ್ದೀರಿ. ಆ ಹಣ ಹ್ಯಾಗೆ ಇಡುವುದು? ಕೋಣೆಯಲ್ಲಿ ಇಡುವುದಾ ಅಥವಾ ಗೋದಾಮಿನಲ್ಲಿ ಇಡುವುದಾ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ ಅವರು, ನಾನು ವಾಜಪೇಯಿ ಕೆಳಗಡೆ ಸಚಿವನಾಗಿ ಕೆಲಸ ಮಾಡಿದ್ದೇನೆ. ಲಾಲ್‌ ಕೃಷ್ಣ ಅಡ್ವಾಣಿ, ರಾಜನಾಥ್‌ಸಿಂಗ್, ಅರುಣ್‌ಜೇಟ್ಲಿ ನನ್ನನ್ನು ಬಸನಗೌಡ ಎಂದು ಪ್ರೀತಿಯಿಂದ ಕರೆದು ಮಾತನಾಡುತ್ತಿದ್ದರು. ನನ್ನಂಥವನಿಗೆ ೨,೫೦೦ ಕೋಟಿ ರೂ. ರೆಡಿ ಮಾಡಿಕೊಳ್ಳಿ. ನಡ್ಡಾ, ಅಮಿತ್ ಶಾ ಮನೆಗೆ ಕರೆದುಕೊಂಡು ಹೋಗ್ತೇವೆ ಎಂದೆಲ್ಲ ಹೇಳುತ್ತಾರೆ. ಇದೆಲ್ಲ ನಡೆಯುತ್ತದಾ..? ಮೋಸ ಮಾಡಲು ಕೆಲವರು ಈ ರೀತಿ ಮಾಡುತ್ತಾರೆ, ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇಂಥವರನ್ನು ನಂಬಿ ಪದೇಪದೇ ದೆಹಲಿಗೆ ಹೋಗಿ ಹಾಳಾಗಬೇಡಿ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್‌: ವೀಡಿಯೊ ನೀಡಿದ್ದು ನಾನೇ ಎಂದಿದ್ದ ಮಾಜಿ ಕಾರು ಚಾಲಕ ಕಾರ್ತಿಕ್ ನಾಪತ್ತೆ...!?

ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕೆಲವರುಗಳು ಸಾಮೂಹಿಕ ವಿವಾಹ, ನೋಟ್‌ಬುಕ್ ವಿತರಣೆ, ತಾಳಿಭಾಗ್ಯ ಮತ್ತೇನೇನೋ ಮಾಡುತ್ತಾರೆ. ನಾಟಕ ಈಗ ಶುರುವಾಗುತ್ತದೆ. ಇನ್ನೂ ಒಂದು ವರ್ಷ ನಡೆಯುತ್ತದೆ. ಇವರು ಜನರನ್ನು ಉದ್ಧಾರ ಮಾಡಲು ಬರುವವರಲ್ಲ. ಮುಂದಿನ ಎಂಎಲ್‌ಎ ಎಲೆಕ್ಷನ್‌ನಲ್ಲಿ ನಿಲ್ಲಲಿಕ್ಕೆ ಬರುವವರು. ಹೀಗಾಗಿ ಈ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಅವರು ಸಲಹೆ ನೀಡಿದರು.
ನಾನು ಗೆದ್ದಿರುವ ಬಿಜಾಪುರ ಕ್ಷೇತ್ರ ಒಂದು ರೀತಿಯಲ್ಲಿ ಪಾಕಿಸ್ತಾನ ಇದ್ದ ಹಾಗೆ. ಅಂತಹ ಕ್ಷೇತ್ರದಲ್ಲಿ ನಾನು ಆರಿಸಿ ಬಂದಿದ್ದೇನೆ. ಅವರದ್ದು ಒಂದು ಲಕ್ಷ ಮತ ಇದೆ. ನಮ್ಮದು ಒಂದೂವರೆ ಲಕ್ಷ ಮತ ಇದೆ. ನಮ್ಮವರು ಬಿಜಾಪುರದಲ್ಲಿ ಮತ ಹಾಕಲು ಹೊರಗೆ ಬರುತ್ತಿರಲಿಲ್ಲ. ಹೊರಗೆ ಬರದಿದ್ದರೆ ಪಾಕಿಸ್ತಾನ ಆಗುತ್ತದೆ ಎಂದು ಹೇಳಿದ್ದೆ. ಹೀಗಾಗಿ ಹೊರಗೆ ಬಂದು ನನಗೆ ಮತ ಹಾಕಿ ಗೆಲ್ಲಿಸಿದ್ದಾರೆ ಎಂದರು.

5 / 5. 3

ನಿಮ್ಮ ಕಾಮೆಂಟ್ ಬರೆಯಿರಿ

advertisement