ಉಡುಪಿ : ಜಿಲ್ಲೆಯ ಬೈಂದೂರಿನ ಕಿರಿಮಂಜೇಶ್ವರ ಗ್ರಾಮ ಪಂಚಾಯತ ವ್ಯಾಪ್ತಿಯ ನಾಗೂರು ಸಮೀಪದ ಮನೆಯ ಕುಡಿಯುವ ನೀರಿನ ಬಾವಿಯಲ್ಲಿ ಬೃಹತ್ ಗಾತ್ರದ ಮೊಸಳೆಯೊಂದು ಪ್ರತ್ಯಕ್ಷವಾಗಿದೆ….!
ನಾಗೂರು ಸಮೀಪದ ಕೊಡೇರಿ ವಡೇರ ಮಠ ವಿಶ್ವನಾಥ ಉಡುಪ ಎಂಬವರ ಮನೆಯ ಬಾವಿಯಲ್ಲಿ ಬೃಹತ್ ಮೊಸಳೆ ಕಂಡುಬಂದಿದ್ದು, ದಾರಿ ತಪ್ಪಿ ಬಂದ ಮೊಸಳೆ ಬಾವಿಯ ಆವರಣ ಗೋಡೆ ತಗ್ಗಿನಲ್ಲಿರುವುದರಿಮದ ಮತ್ತು ಬಾವಿಯಲ್ಲಿ ನೀರು ತುಂಬಿದ್ದರಿಂದ ಆಕಸ್ಮಿಕವಾಗಿ ಮೊಸಳೆ ಬಾವಿಗೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ.
ಮಾಹಿತಿ ತಿಳಿದ ತಕ್ಷಣ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯಾಧಿಕಾರಿಗಳು, ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳೀಯರ ಸಹಾಯದಿಂದ ಮೊಸಳೆಯನ್ನು ರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ. ಬಾವಿಗೆ ಬಲೆ ಹಾಕಿ ನಂತರ ಅರಣ್ಯ ಇಲಾಖೆಯವರು ಮೊಸಳೆಗೆ ಬೋನ್ ಇಡಲಾಗಿದೆ. ಮೊಸಳೆ ಬಾವಿಯಿಂದ ಹೊರ ಬರಲು ಬಾವಿಯ ಕಟ್ಟೆಯನ್ನು ನೆಲಕ್ಕೆ ಸಮಾನವಾಗಿ ಒಡೆದು ಹಾಕಲಾಗಿದೆ. ಹಾಗೂ ಮೊಸಳೆ ಬೊನಿನೊಳಗೆ ಬರಲು ಅದರಲ್ಲಿ ಮಾಂಸವನ್ನು ಇಡಲಾಗಿದೆ. ಬಾವಿಯ ಸುತ್ತಲೂ ಸಿಸಿ ಕ್ಯಾಮೆರಾ ಅಳವಡಿಸಿ ದೂರದಿಂದಲೇ ಮೊಸಳೆಯ ಓಡಾಟವನ್ನು ಗಮನಿಸಲಾಗುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ