ಬಿಸಿಐ ಅಧ್ಯಕ್ಷ ಮನನ್‌ಕುಕುಮಾರ ಮಿಶ್ರಾ ರಾಜೀನಾಮೆಗೆ ಒತ್ತಾಯಿಸಿ ಪತ್ರ ಬರೆದ ಬಿಸಿಐ ಸಹ ಅಧ್ಯಕ್ಷ ವೈ.ಆರ್. ಸದಾಶಿವ ರೆಡ್ಡಿ

ನವದೆಹಲಿ: ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಸಹ ಅಧ್ಯಕ್ಷ ಹಾಗೂ ಹಿರಿಯ ವಕೀಲ ವೈ.ಆರ್. ಸದಾಶಿವ ರೆಡ್ಡಿ ಅವರು ಬಿಸಿಐ ಅಧ್ಯಕ್ಷ ಮನನ್ ಮಿಶ್ರಾ ಅವರ ರಾಜೀನಾಮೆಗೆ ಆಗ್ರಹಿಸಿ ಪತ್ರ ಬರೆದಿದ್ದಾರೆ. ಮಿಶ್ರಾ ಅವರ ನೇತೃತ್ವದಲ್ಲಿ ದೇಶದ ಕಾನೂನು ವೃತ್ತಿಯ ಪರಮೋಚ್ಚ ಸಂಸ್ಥೆಯು ತನ್ನಿಂದ ನಿರೀಕ್ಷಿಸಲಾಗಿರುವ “ಮಾನದಂಡಗಳಿಂದ ದೂರ ಸರಿದಿದೆ” ಎಂದು ರೆಡ್ಡಿ ಆರೋಪಿಸಿದ್ದಾರೆ. … Continued

“ಇದು ವಿದ್ಯಾರ್ಥಿಗಳು ಮತ್ತು ನನ್ನ ನಡುವಿನ ವಿಚಾರ”: ಬಾರ್ ಕೌನ್ಸಿಲ್ ಆದೇಶಕ್ಕೆ ಸಿಜೆಐ ಸೂರ್ಯಕಾಂತ ತೀವ್ರ ಅಸಮಾಧಾನ

ನವದೆಹಲಿ : ಹೈದರಾಬಾದಿನ ನ್ಯಾಷನಲ್ ಅಕಾಡೆಮಿ ಆಫ್ ಲೀಗಲ್ ಸ್ಟಡೀಸ್ ಆ್ಯಂಡ್ ರಿಸರ್ಚ್ (NALSAR) ವಿಶ್ವವಿದ್ಯಾಲಯದ 2026ರ ಬ್ಯಾಚ್‌ನ ಕಾನೂನು ಪದವೀಧರರನ್ನು ಯಾವುದೇ ರಾಜ್ಯ ಬಾರ್ ಕೌನ್ಸಿಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬಾರದು ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ನೀಡಿದ್ದ ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಕ್ರಮದ ಕುರಿತು ಮುಖ್ಯ ನ್ಯಾಯಮೂರ್ತಿ … Continued

ಸಿಜೆಐ ಆಹ್ವಾನಿಸಿದ್ದಕ್ಕೆ ವಿರೋಧಿಸಿದ ನಾಲ್ಸಾರ್ ವಿದ್ಯಾರ್ಥಿಗಳ ವಿರುದ್ಧ ದೊಡ್ಡ ಕ್ರಮಕ್ಕೆ ಮುಂದಾಗಿ ನಂತರ ಹಿಂಪಡೆದ ಬಿಸಿಐ

ನವದೆಹಲಿ: ಹೈದರಾಬಾದ್‌ನ ನ್ಯಾಷನಲ್ ಅಕಾಡೆಮಿ ಆಫ್ ಲೀಗಲ್ ಸ್ಟಡೀಸ್ ಆ್ಯಂಡ್ ರಿಸರ್ಚ್ (NALSAR) ವಿಶ್ವವಿದ್ಯಾಲಯದ 2026ನೇ ಬ್ಯಾಚ್‌ನ ಕಾನೂನು ಪದವೀಧರರು ವಕೀಲರಾಗಿ ನೋಂದಣಿ ಮಾಡುವುದಕ್ಕೆ ಹೇರಿದ್ದ ನಿರ್ಬಂಧವನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಗುರುವಾರ ಸಂಜೆ ಹಿಂಪಡೆದಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ ಅವರನ್ನು ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಆಹ್ವಾನಿಸುವುದನ್ನು ಕೆಲ ವಿದ್ಯಾರ್ಥಿಗಳು ವಿರೋಧಿಸಿದ ಹಿನ್ನೆಲೆಯಲ್ಲಿ, … Continued

ವಕೀಲರ ಉಡುಪಿನಲ್ಲಿ ಕೋರ್ಟ್‌ಗೆ ಮಮತಾ ಬ್ಯಾನರ್ಜಿ ಹಾಜರು : ವಕೀಲ ವೃತ್ತಿಯ ವಿವರ ಕೇಳಿದ ಬಾರ್ ಕೌನ್ಸಿಲ್

ನವದೆಹಲಿ : ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಕಲ್ಕತ್ತಾ ಹೈಕೋರ್ಟ್‌ಗೆ ವಕೀಲರ ಗೌನ್ ಮತ್ತು ಬಿಳಿ ಬ್ಯಾಂಡ್ ಧರಿಸಿ ಹಾಜರಾದ ಬೆನ್ನಲ್ಲೇ, ಭಾರತೀಯ ವಕೀಲರ ಪರಿಷತ್ತು (Bar Council of India) ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಬ್ಯಾನರ್ಜಿ ಅವರ ದಾಖಲಾತಿ ಮತ್ತು ವಕೀಲ ವೃತ್ತಿಯ ಸ್ಥಿತಿಗತಿಯ ಬಗ್ಗೆ ವಿವರವಾದ ಮಾಹಿತಿಯನ್ನು … Continued