ಬೆಂಗಳೂರಲ್ಲಿ ಮಳೆ ಆರ್ಭಟ: ಹಲವು ಬಡಾವಣೆಗಳು ಬುಳುಬುಳು, ಜನಜೀವನ ತತ್ತರ

ಬೆಂಗಳೂರು: ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ಅಕ್ಷರಶಃ ನಲುಗಿ ಹೋಗಿದೆ. ಗಣೇಶ ಹಬ್ಬದ ಸಡಗರಕ್ಕೆ ವರುಣ ನೀರೆರೆದಿದ್ದಾನೆ. ಮಹಾನಗರದ ಬಡಾವಣೆಗಳ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ರಾತ್ರಿಯಿಡೀ ಜನ ಜಾಗರಣೆ ಮಾಡುವಂತಾಗಿದೆ. ಹಬ್ಬದ ಸಂಭ್ರಮದಲ್ಲಿರಬೇಕಾದ ಜನರು ಮನೆಯಿಂದ ನೀರು ಹೊರಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರೀ ಮಳೆಯಿಂದ ಸರ್ಜಾಪುರ ರಸ್ತೆ, ಸಾಯಿ ಲೇಔಟ್, ನಾಗವಾರ, … Continued