ಮಾಜಿ ಶಾಸಕ ಎಂ. ಜಿ. ಮುಳೆ ಮರಾಠಾ ನಿಗಮದ ಅಧ್ಯಕ್ಷ
ಬೆಂಗಳೂರು: ನವೆಂಬರ್ 2020ರಲ್ಲಿ ಸ್ಥಾಪನೆಯಾದ ಮರಾಠಾ ಅಭಿವೃದ್ಧಿ ನಿಗಮದ ಮೊದಲ ಅಧ್ಯಕ್ಷರಾಗಿ ಮಾಜಿ ಶಾಸಕ ಮಾರುತಿರಾವ್ ಮುಳೆ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಹೆಸರಿಸಿದ್ದಾರೆ. ಕರ್ನಾಟಕ ಮರಾಠಾ ವೆಲ್ಫೇರ್ ಅಸೋಸಿಯೇಷನ್ ಆಯೋಜಿಸಿದ್ದ ಛತ್ರಪತಿ ಶಿವಾಜಿ ಅವರ 395ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೊಮ್ಮಾಯಿ, ‘ನಿಗಮದ ಮುಖ್ಯಸ್ಥರಾಗಿ ಮಾರುತಿರಾವ್ ಮುಳೆ ಅವರನ್ನು ನೇಮಿಸಲು ನಿರ್ಧರಿಸಿದ್ದೇವೆ … Continued