ಜೆಡಿಎಸ್ ತೊರೆದು ಬಿಜೆಪಿ ಸೇರತ್ತೇನೆ ಎಂದ ಎಂಎಲ್‌ ಸಿ ಸಂದೇಶ ನಾಗರಾಜ್

ಬೆಂಗಳೂರು : ಜಾತ್ಯಾತೀತ ಜನತಾ ದಳವನ್ನು ಒಬ್ಬೊಬ್ಬರೇ ತೊರೆಯುತ್ತಿದ್ದು, ಈಗ ವಿಧಾನ ಪರಿಷತ್ ಸದಸ್ಯ, ಚಲನಚಿತ್ರ ನಿರ್ಮಾಪಕ ಸಂದೇಶ್ ನಾಗರಾಜ್ ಪಕ್ಷ ತೊರೆದು ಬಿಜೆಪಿ ಸೇರುವುದಾಗಿ ತಿಳಿಸಿದ್ದಾರೆ. ಮೈಸೂರು-ಚಾಮರಾಜನಗರ ಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ಜೆಡಿಎಸ್‌ನಿಂದ ಗೆದ್ದು ಪರಿಷತ್‌ ಸದಸ್ಯರಾಗಿರುವ ಸಂದೇಶ್‌ ನಾಗರಾಜ್‌ ಅವರು ಅವಧಿ ಮುಗಿಯುವವರೆಗೂ (ಡಿಸೆಂಬರ್‌) ಪಕ್ಷದಲ್ಲೇ ಮುಂದುವರಿಯಲಿದ್ದಾರೆ. ನಂತರ ಬಿಜೆಪಿ ಸೇರುವುದಾಗಿ ತಿಳಿಸಿದ್ದಾರೆ. … Continued