ಹೊಡೆದು ಸಾಯಿಸುತ್ತಿದ್ದ ವ್ಯಕ್ತಿಯನ್ನು ರಕ್ಷಿಸಲು ಹೋದ ಪೊಲೀಸರನ್ನೂ ಹೊಡೆದು ಕೊಂದ ಗುಂಪು…!

ಭೋಪಾಲ: ವ್ಯಕ್ತಿಯನ್ನು ಗುಂಪೊಂದು ಹೊಡೆದು ಕೊಂದಿದ್ದು, ಆತನನ್ನು ರಕ್ಷಿಸಲು ಹೋದ ಪೊಲೀಸ್ ಅಧಿಕಾರಿಯನ್ನು ಕೂಡ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಮೌಗಂಜ್​ನಲ್ಲಿ ನಡೆದಿದೆ. ಪೊಲೀಸ್ ತಂಡದ ಮೇಲೆ ದಾಳಿ ಮಾಡುವ ಮೊದಲು ಆದಿವಾಸಿಗಳ ಗುಂಪೊಂದು ವ್ಯಕ್ತಿಯನ್ನು ಅಪಹರಿಸಿ ಕೊಂದಿದೆ. ಘಟನೆ ಶನಿವಾರ ನಡೆದಿದೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಐವರು ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ರೇವಾ ರೇಂಜ್ ಡೆಪ್ಯುಟಿ … Continued

ಗುಜರಾತ್ ವಿವಿ ಹಾಸ್ಟೆಲ್ ಒಳಗೆ ನಮಾಜ್: ವಿದೇಶಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ ಗುಂಪು, ಐವರಿಗೆ ಗಾಯ

ಅಹಮದಾಬಾದ್: ಗುಜರಾತ್ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ನಮಾಜ್ ಮಾಡಲಾಗುತ್ತಿದೆ ಎಂದು ಆರೋಪಿಸಿ ಶನಿವಾರ ರಾತ್ರಿ ಹಾಸ್ಟೆಲ್‌ ಒಳಗೆ ನುಗ್ಗಿದ ಜನರ ಗುಂಪೊಂದು, ಆಫ್ರಿಕಾ ದೇಶಗಳು, ಅಫ್ಘಾನಿಸ್ತಾನ ಮತ್ತು ಉಜ್ಬೇಕಿಸ್ತಾನ ದೇಶಗಳ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದು, ದಾಳಿಯಲ್ಲಿ ಐವರು ವಿದೇಶಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಘಟನೆ ಸಂಬಂಧ ಗುಜರಾತ್‌ನ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿರುವ … Continued

ಸಾಯಿಸುವ ಉದ್ದೇಶದಿಂದಲೇ 800 ಜನರ ಗುಂಪಿನಿಂದ ದಾಳಿ’: ಪಶ್ಚಿಮ ಬಂಗಾಳದ ದಾಳಿ ಘಟನೆ ಬಗ್ಗೆ ಇ.ಡಿ.

ನವದೆಹಲಿ : ತೃಣಮೂಲ ಕಾಂಗ್ರೆಸ್‌ ನಾಯಕರೊಬ್ಬರ ಬೆಂಬಲಿಗರು ತನ್ನ ಅಧಿಕಾರಿಗಳ ಮೇಲೆ ನಡೆದ ದಾಳಿಯ ಬಗ್ಗೆ ವಿವರಗಳನ್ನು ನೀಡಿದ ಜಾರಿ ನಿರ್ದೇಶನಾಲಯವು ಗುಂಪು 800-1,000 ಜನರನ್ನು ಒಳಗೊಂಡಿದ್ದು, “ಸಾವಿಗೆ ಕಾರಣವಾಗುವ ಉದ್ದೇಶ” ಇತ್ತು ಎಂದು ಹೇಳಿದೆ. ಇ.ಡಿ.ಯ ಮೂವರು ಅಧಿಕಾರಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ ಮತ್ತು ಜನಸಮೂಹದಲ್ಲಿರುವ ಜನರು ತಮ್ಮ ಸಿಬ್ಬಂದಿಯ ಮೊಬೈಲ್ ಫೋನ್‌ಗಳು, ವ್ಯಾಲೆಟ್‌ಗಳು ಮತ್ತು … Continued