ಪ್ರೀತಿಸಿ ಮದುವೆಯಾದ ತಂಗಿಯನ್ನು ಕೊಚ್ಚಿ ಕೊಲೆ ಮಾಡಿದ ಅಣ್ಣ,ತಾನೇ ಠಾಣೆಗೆ ಬಂದು ಶರಣು..

ನವಲಗುಂದ: ಮನೆಯವರು ಮಾತು ಕೇಳದೆ ಪ್ರೀತಿಸಿ ಬೇರೆ ಸಮುದಾಯದ ಯುವಕನೊಂದಿಗೆ ಮದುವೆಯಾಗಿದ್ದ ತಂಗಿಯನ್ನು ಸ್ವಂತ ಸಹೋದರನೇ ಮಂಗಳವಾರ ಮಧ್ಯಾಹ್ನ ಕೊಲೆ ಮಾಡಿದ ಘಟನೆ ವರದಿಯಾಗಿದೆ. ಯಾರೂ ಇಲ್ಲದ ಸಮಯ ನೋಡಿ ತಂಗಿಯ ಗಂಡನ ಮನೆಗೆ ನುಗ್ಗಿ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರದಿಂದ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶಶಿಕಲಾ(32) ಬರ್ಬರವಾಗಿ ಕೊಲೆಯಾದವಳು. … Continued