ಹಿಂದೂಗಳಲ್ಲದವರಿಗೆ ಪಾರ್ಕಿಂಗ್ ನಿರ್ಬಂಧಿಸಿದ ಪುತ್ತೂರು ದೇವಸ್ಥಾನ: ಚರ್ಚೆಗೆ ಗ್ರಾಸ

ಮಂಗಳೂರು: ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನವು ಹಿಂದುಗಳಲ್ಲದವರು ತಮ್ಮ ಆವರಣದಲ್ಲಿರುವ ಭತ್ತದ ಗದ್ದೆಯನ್ನು ಪಾರ್ಕಿಂಗ್ ಸ್ಥಳವಾಗಿ ಬಳಸುವುದನ್ನು ನಿಷೇಧಿಸಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ. ದೇವಾಲಯದ ಅಧಿಕಾರಿಗಳು ಸೂಚನಾ ಫಲಕವನ್ನು ಹಾಕಿದ್ದು, ಹಿಂದೂಯೇತರರು ತಮ್ಮ ವಾಹನಗಳನ್ನು ಈ ಪ್ರದೇಶದಲ್ಲಿ ನಿಲ್ಲಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ ಎಂದು ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. … Continued