ಉದಯಪುರ ಟೈಲರ್ ಹತ್ಯೆ: ನಿಷೇಧಾಜ್ಞೆ ನಡುವೆ ಕನ್ಹಯ್ಯಾ ಲಾಲ್ ಅಂತ್ಯ ಸಂಸ್ಕಾರಕ್ಕೆ ಪಾಲ್ಗೊಂಡ ಸಾವಿರಾರು ಜನ

ಉದಯಪುರ: ಟೈಲರ್‌ ಕನ್ಹಯ್ಯಾ ಲಾಲ್ ಅವರ ಕ್ರೂರ ಹತ್ಯೆಯು ಉದಯಪುರದಲ್ಲಿ ಕೋಮು ಉದ್ವಿಗ್ನತೆಗೆ ಕಾರಣವಾಗಿ ನಗರದ ಕೆಲವು ಭಾಗಗಳಲ್ಲಿ ಕರ್ಫ್ಯೂ ವಿಧಿಸಲಾಗಿದ್ದರೂ ಸಹ ಹೆಚ್ಚಿನ ಸಂಖ್ಯೆಯ ಜನರ ಸಮ್ಮುಖದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ನಿಷೇಧಾಜ್ಞೆಗಳ ಹೊರತಾಗಿಯೂ ನೂರಾರು ಜನರು ಲಾಲ್ ಅವರ ಅಂತ್ಯಕ್ರಿಯೆಗೆ ಜಮಾಯಿಸಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡಲು ಶವಯಾತ್ರೆಯ ವೇಳೆ ಹಲವು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು … Continued