ದಾಂಡೇಲಿ: ನದಿ ಪಕ್ಕ ನಡೆದುಕೊಂಡು ಹೋಗುತ್ತಿದ್ದವನ ಎಳೆದೊಯ್ದ ಮೊಸಳೆ

ಕಾರವಾರ : ನದಿ ಪಕ್ಕ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಮೊಸಳೆ ನೀರಿಗೆ ಎಳೆದೊಯ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ವಿನಾಯಕ ನಗರದ ಅಲೈಡ್ ಪ್ರದೇಶದ ಹತ್ತಿರ ಶನಿವಾರ ಸಂಜೆ ನಡೆದಿದೆ.
ಮೊಸಳೆ ಹೊತ್ತೊಯ್ದ ವ್ಯಕ್ತಿಯನ್ನು ಸುರೇಶ್ ವಸಂತ ತೇಲಿ (44) ಎಂದು ಗುರುತಿಸಲಾಗಿದೆ. ದೋಣಿ ಮತ್ತು ಡ್ರೋನ್ ಕ್ಯಾಮೆರಾ ಬಳಸಿ ಅವರ ಶೋಧ ಕಾರ್ಯ ನಡೆಸಲಾಗುತ್ತಿದೆ.

ಘಟನಾ ಸ್ಥಳಕ್ಕೆ ಪೌರಾಯುಕ್ತ ರಾಜಾರಾಮ ಪವಾರ, ನಗರಸಭೆ ಅಧ್ಯಕ್ಷೆ ಸರಸ್ವತಿ ರಜಪೂತ, ಡಿ.ವೈ.ಎಸ್ಪಿ ಕೆ.ಎಲ್.ಗಣೇಶ, ಸಿ.ಪಿ.ಐ ಬಿ.ಎಸ್.ಲೋಕಾಪುರ, ನಗರಸಭಾ ಸದಸ್ಯೆ ಪ್ರೀತಿ ನಾಯರ್ ಮೊದಲಾದವರು ದೌಡಾಯಿಸಿದ್ದಾರೆ. ನಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ, ರಕ್ಷಣಾ ತಂಡ ಹಾಗೂ ಸ್ಥಳೀಯರು ಸುರೇಶ ಅವರ ಹುಡುಕಾಟ ನಡೆಸಿದ್ದಾರೆ.
ದಾಂಡೇಲಿ ನಗರದಲ್ಲಿ ಕೆಲವು ತಿಂಗಳ ಹಿಂದೆ ಬಾಲಕನೊಬ್ಬನನ್ನು ಎಳೆದೊಯ್ದಿತ್ತು, ನಂತರ ಇಬ್ಬರು ಯುವಕರನ್ನು ಎಳೆದೊಯ್ದಿತ್ತು. ಈಗ ಸುರೇಶ ಅವರನ್ನು ಎಳೆದುಕೊಂಡು ಹೋಗಿದೆ. ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement