ಪೊಲೀಸ್‌ ಕಾನ್‌ಸ್ಟೆಬಲ್‌ ನ ಮಾತು-ಶ್ರವಣದೋಷವುಳ್ಳ ಮಗನ ಸಹಾಯದಿಂದ ಕೊಲೆ ಪ್ರಕರಣ ಭೇದಿಸಿದ ಪೊಲೀಸರು ; ಅದು ಹೇಗೆಂದರೆ…

ಮುಂಬೈ: ಕಾನ್‌ಸ್ಟೆಬಲ್‌ ಒಬ್ಬರ ಮಾತು ಮತ್ತು ಶ್ರವಣದೋಷವುಳ್ಳ ಮಗ ಮುಂಬೈ ಪೊಲೀಸರಿಗೆ ಕೊಲೆ ಪ್ರಕರಣವನ್ನು ಭೇದಿಸಲು ಸಹಾಯ ಮಾಡಿದ್ದಾನೆ. ಆತ ಇದೇ ಅಂಗವೈಕಲ್ಯದಿಂದ ಬಳಲುತ್ತಿರುವ ಆರೋಪಿಯೊಂದಿಗೆ ಸಂವಹನ ನಡೆಸಲು ಸಂಕೇತ ಭಾಷೆ ಬಳಸಿ ಪ್ರಕರಣ ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಗುರುವಾರ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ ಎಂದು ಗುರುವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಗಸ್ಟ್ 5ರಂದು ದಾದರ್ ರೈಲು ನಿಲ್ದಾಣದಲ್ಲಿ ಟ್ರಾಲಿ ಬ್ಯಾಗ್‌ನಲ್ಲಿ ಅರ್ಷದ್ ಅಲಿ ಸಾದಿಕ್ ಅಲಿ ಶೇಖ್ ಎಂದು ಗುರುತಿಸಲಾದ 30 ವರ್ಷದ ವ್ಯಕ್ತಿಯ ಶವ ಪತ್ತೆಯಾದಾಗ ತನಿಖೆ ಪ್ರಾರಂಭಿಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ಕೊಲೆ ಆರೋಪಿಯನ್ನು ಜಯ ಚಾವ್ಡಾ ಎಂದು ಗುರುತಿಸಲಾಗಿದ್ದು, ಆತ ಮಾತು ಮತ್ತು ಶ್ರವಣದೋಷ ಉಳ್ಳವನಾಗಿದ್ದರಿಂದ ಕೊಲೆ ಅಪರಾಧದ ಬಗ್ಗೆ ಆತನಿಂದ ವಿವರಗಳನ್ನು ಪಡೆಯಲು ತೊಂದರೆಯಾಗುತ್ತಿತ್ತು ಎಂದು ಅವರು ಹೇಳಿದರು. “ವಾಕ್ ಮತ್ತು ಶ್ರವಣದೋಷವುಳ್ಳ ಮಕ್ಕಳ ಶಾಲೆಯಾದ ಸಾಧನಾ ವಿದ್ಯಾಲಯದ ವಿಳಾಸವನ್ನು ನಾವು ಹುಡುಕುತ್ತಿದ್ದೆವು. ತನಿಖೆಯ ಭಾಗವಾಗಿ ಸಂಜ್ಞೆ ಭಾಷೆ ಇತ್ಯಾದಿಗಳನ್ನು ಬಳಸಿಕೊಂಡು ಆರೋಪಿಗಳೊಂದಿಗೆ ಮಾತನಾಡಲು ನಮಗೆ ಯಾರಾದರೂ ಬೇಕಾಗಿತ್ತು ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ನೆಲಮಂಗಲ ಬಳಿ ರಸ್ತೆ ಜಗಳ-ಹಲ್ಲೆ ಆರೋಪ: ಮಾಜಿ ಸಂಸದ ಅನಂತಕುಮಾರ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್‌

ನಾವು ಶಾಲೆಯನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿರುವಾಗ, ತನಿಖಾ ತಂಡವು ವಡಾಲಾದಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಆರ್‌ಎಕೆ ಮಾರ್ಗ ಪೊಲೀಸ್ ಠಾಣೆಯ ತಮ್ಮ ಸಹೋದ್ಯೋಗಿಗಳನ್ನು ಭೇಟಿಯಾದರು, ಇದರಲ್ಲಿ ಕಾನ್‌ಸ್ಟೆಬಲ್ ರಾಜೇಶ್ ಸಾತ್ಪುತೆ ಎಂಬವರು ಇದ್ದರು. ಆಗ, ಶಾಲೆಯು ದಾದರ್‌ನಲ್ಲಿದೆ ಮತ್ತು ವಾಕ್ ಮತ್ತು ಶ್ರವಣ ದೋಷ ಹೊಂದಿರುವ ತಮ್ಮ 23 ವರ್ಷದ ಮಗ ಗೌರವ ಎಂಬಾತ ಸಂಸ್ಥೆಯ ಹಳೆಯ ವಿದ್ಯಾರ್ಥಿ ಎಂದು ಸಾತ್ಪುತೆ ನಮಗೆ ತಿಳಿಸಿದರು. ಆಗ ಆತನಿಂದ ತನಿಖೆಗೆ ಸಹಾಯವಾಗಬಹುದು ಎಂದು ರೈಲ್ವೆ ಪೊಲೀಸ್ ತಂಡವು ಸಾತ್ಪುತೆ ಅವರ ನಿವಾಸಕ್ಕೆ ತೆರಳಿ ಗೌರವ ಅವರನ್ನು ದಾದರ ರೈಲ್ವೆ ಪೊಲೀಸ್ ಠಾಣೆಗೆ ಕರೆತಂದರು. ಪೊಲೀಸ್‌ ತಂಡವು ಗೌರವ ಅವರಿಗೆ ಪ್ರಶ್ನಾವಳಿಯನ್ನು ನೀಡಿತು ಮತ್ತು ದಾದರ್ ರೈಲ್ವೆ ನಿಲ್ದಾಣದಲ್ಲಿ ಸೆರೆಹಿಡಿಯಲ್ಪಟ್ಟ ಆರೋಪಿ ಚಾವ್ಡಾ ಅವರೊಂದಿಗೆ ಸಂವಹನ ನಡೆಸುವಂತೆ ಕೇಳಿಕೊಂಡಿತು ಎಂದು ಅಧಿಕಾರಿ ಮಾಹಿತಿ ನೀಡಿದರು.

“ಚಾವ್ಡಾ ಅವರೊಂದಿಗೆ ಗೌರವ ಅವರ ಸಂವಾದವು ನಮಗೆ ಅಪರಾಧ, ಸಹ-ಆರೋಪಿಗಳು ಮತ್ತು ಅದಕ್ಕೆ ಕಾರಣ ಏನು ಎಂಬುದರ ವಿವರಗಳನ್ನು ತಿಳಿದುಕೊಳ್ಳಲು ಸಹಾಯಮಾಡಿತು. ಚಾವ್ಡಾ ಅವರೊಂದಿಗೆ ವಿವಾಹೇತರ ಸಂಬಂಧ ಹೊಂದಿರುವ ಅರ್ಷದ್ ಅಲಿ ಅವರ ಪತ್ನಿ ಸೇರಿದಂತೆ ನಾವು ಪ್ರಕರಣದಲ್ಲಿ ಮೂವರನ್ನು ಬಂಧಿಸಿದ್ದೇವೆ ಎಂದು ಅಧಿಕಾರಿ ಹೇಳಿದರು.
ಕಾನ್‌ಸ್ಟೇಬಲ್ ರಾಜೇಶ್ ಸಾತ್ಪುಟೆ, ಕೊಲೆ ಪ್ರಕರಣದಲ್ಲಿ ತನ್ನ ಮಗ ಪೊಲೀಸರಿಗೆ ಸಹಾಯ ಮಾಡಿರುವುದು ನನಗೆ ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.
“ಗೌರವ ಹತ್ತನೇ ತರಗತಿಯವರೆಗೆ ಸಾಧನಾ ವಿದ್ಯಾಲಯದಲ್ಲಿ ಓದಿದ್ದಾರೆ. ನಂತರ ಮಜಗಾನ್ ಡಾಕ್ ಲಿಮಿಟೆಡ್‌ನಲ್ಲಿ ಪೈಪ್ ಫಿಟ್ಟರ್ ಕೋರ್ಸ್ ಕೂಡ ಮಾಡಿದ್ದಾರೆ. ಅವರ ಪ್ರಯತ್ನದಿಂದಾಗಿ ಪೊಲೀಸರಿಗೆ ಕೊಲೆ ಪ್ರಕರಣದ ಸಂಪೂರ್ಣ ಸರಪಳಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು” ಎಂದು ತಂದೆ ಹೇಳಿದರು.

ಪ್ರಮುಖ ಸುದ್ದಿ :-   ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿ ಅದನ್ನೇ ನಿಗ್ರಹಿಸಿದ ಯುವಕ..! ದೃಶ್ಯ ವೀಡಿಯೊದಲ್ಲಿ ಸೆರೆ-ವೀಕ್ಷಿಸಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement