ಮುಂಬೈ: ಬಾಂದ್ರಾದ ಮುಂಬೈನ ಬ್ಯಾಂಡ್ಸ್ಟ್ಯಾಂಡ್ನಲ್ಲಿ ಪತಿ ಹಾಗೂ ಮಕ್ಕಳು ನೋಡನೋಡುತ್ತಿದ್ದಂತೆಯೇ 32 ವರ್ಷದ ಜ್ಯೋತಿ ಸೋನಾರ್ ಎಂಬ ಮಹಿಳೆಯನ್ನು ಭಾರಿ ಅಲೆ ಸಮುದ್ರಕ್ಕೆ ಎಳೆದೊಯ್ದಿದೆ.
ದಂಪತಿ ಬಂಡೆಯ ಮೇಲೆ ಕುಳಿತಿದ್ದರು ಮತ್ತು ಅವರ ಮಕ್ಕಳು ಸಂತೋಷದಾಯಕ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲು ಪ್ರಯತ್ನಿಸುತ್ತಿದ್ದರು, ಆಗ ದುರದೃಷ್ಟಕರ ಘಟನೆ ನಡೆದಿದೆ. ಶಕ್ತಿಯುತವಾದ ಅಲೆಯು ಅಪ್ಪಳಿಸಿದಾಗ ಕಣ್ಣು ಮಿಟುಕಿಸುವುದರಲ್ಲಿ ಎಲ್ಲವೂ ನಡೆದುಹೋಗಿದೆ. ಮಕ್ಕಳು ಕೂಗಿಕೊಳ್ಳುತ್ತಿದ್ದಂತೆಯೇ ಮಹಿಳೆ ನೀರು ಪಾಲಾಗಿದ್ದಾಳೆ.
ಘಟನೆಯ ದಿನದಂದು, ಕುಟುಂಬವು ಆರಂಭದಲ್ಲಿ ಜುಹು ಚೌಪಾಟಿಗೆ ಭೇಟಿ ನೀಡಲು ಯೋಜಿಸಿತ್ತು, ಆದರೆ ಹೆಚ್ಚಿನ ಉಬ್ಬರವಿಳಿತದ ಕಾರಣ, ಬೀಚ್ಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿತ್ತು. ಆದ್ದರಿಂದ, ಅವರು ತಮ್ಮ ಆಲೋಚನೆಯನ್ನು ಬದಲಾಯಿಸಿದರು ಮತ್ತು ಬಾಂದ್ರಾ ಕಡೆಗೆ ಹೋಗಲು ನಿರ್ಧರಿಸಿದರು.
ಬಾಂದ್ರಾ ಕೋಟೆಯನ್ನು ತಲುಪಿದ ನಂತರ, ಕುಟುಂಬವು ಫೋಟೋಗಳನ್ನು ತೆಗೆದುಕೊಳ್ಳಲು ಸಮುದ್ರದ ಹತ್ತಿರ ಹೋದರು. ದಂಪತಿ ಬಂಡೆಯ ಮೇಲೆ ಕುಳಿತಿದ್ದರು ಮತ್ತು ಅವರ ಮಕ್ಕಳು ದೂರದಿಂದ ಅವರ ಫೋಟೋಗಳನ್ನು ಕ್ಲಿಕ್ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ, ಬೃಹತ್ ಅಲೆಯೊಂದು ಅವರನ್ನು ಅಪ್ಪಳಿಸಿತು ಹಾಗೂ ಜ್ಯೋತಿಯನ್ನು ಎಳೆದುಕೊಂಡುಹೋಯಿತು. ವೀಡಿಯೊದಲ್ಲಿ, ‘ಮಮ್ಮಿ ಮಮ್ಮಿʼ ಎಂಬ ಮಕ್ಕಳ ಹತಾಶ ಕೂಗು ಕೇಳಿಸುತ್ತದೆ.
ಮುಂಬೈನ ರಬಲೆ ನಿವಾಸಿ ಮುಖೇಶ ಅವರು ಜ್ಯೋತಿಯ ಸೀರೆ ಗಟ್ಟಿಯಾಗಿ ಹಿಡಿದುಕೊಂಡು ಅವಳನ್ನು ಉಳಿಸುವ ಪ್ರಯತ್ನ ಮಾಡಿದರು, ಅದು ವ್ಯರ್ಥವಾಯಿತು. ಪಕ್ಕದಲ್ಲಿದ್ದ ಕೆಲವರು ಪತಿ ಮುಖೇಶ ಅವರ ಪಾದಗಳನ್ನು ಹಿಡಿದು ಅವರನ್ನು ಸುರಕ್ಷಿತವಾಗಿ ಎಳೆದುಕೊಂಡರು.
ಈ ದುರಂತವನ್ನು ಕಂಡ ಅಕ್ಕಪಕ್ಕದಲ್ಲಿದ್ದವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು, ಅಗ್ನಿಶಾಮಕ ದಳದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿದರು.
ಭಾನುವಾರ ಮಧ್ಯಾಹ್ನ ಬಾಂದ್ರಾ ಕೋಟೆಯ ಸಮುದ್ರದಲ್ಲಿ ಮುಳುಗಿದ ಜ್ಯೋತಿ ಸೋನಾರ್ಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು. ಭಾರತೀಯ ಕೋಸ್ಟ್ ಗಾರ್ಡ್ ಸೋಮವಾರ ಆಕೆಯ ದೇಹವನ್ನು ಹೊರತೆಗೆದಿದ್ದಾರೆ.
ಜ್ಯೋತಿ ಸೋನಾರ್ ಅವರ ಮೃತದೇಹವನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ,
ನಿಮ್ಮ ಕಾಮೆಂಟ್ ಬರೆಯಿರಿ