ಮುಂಬೈ ಕಲ್ಯಾಣದಲ್ಲಿ ವಸತಿ ಸಮುಚ್ಚಯಕ್ಕೆ ನುಗ್ಗಿ ಕಟ್ಟಡದೊಳಗೆ ಓಡಾಡಿದ ಚಿರತೆ, ಮೂವರಿಗೆ ಗಾಯ ; ದೃಶ್ಯ ಕ್ಯಾಮರಾದಲ್ಲಿ ಸೆರೆ

ಮುಂಬೈ: ಮುಂಬೈ ಸಮೀಪದ ಕಲ್ಯಾಣ ನಗರದ ವಸತಿ ಪ್ರದೇಶಕ್ಕೆ ಗುರುವಾರ ಚಿರತೆಯೊಂದು ನುಗ್ಗಿದೆ. ಕಟ್ಟಡದ ಕಿಟಕಿಯೊಂದಕ್ಕೆ ಚಿರತೆ ಜಿಗಿಯುವುದನ್ನು ವೀಡಿಯೊ ತೋರಿಸಿದೆ. ಘಟನೆಯಲ್ಲಿ ಮೂವರಿಗೆ ಗಾಯವಾಗಿದ್ದು, ಚಿರತೆಯನ್ನು ಸೆರೆ ಹಿಡಿಯಲಾಗಿದೆ.
ನಾಸಿಕ್‌ನ ಜನನಿಬಿಡ ಪ್ರದೇಶದಲ್ಲಿ ಬುಧವಾರ ಚಿರತೆ ಕಾಣಿಸಿಕೊಂಡ ನಂತರ ಇದು ಮತ್ತೊಂದು ಘಟನೆಯಾಗಿದೆ. ಮತ್ತೊಂದು ವಿಡಿಯೋದಲ್ಲಿ ಕಲ್ಯಾಣದ ಜನರು ಕಟ್ಟಡದ ಹೊರಗೆ ಜಮಾಯಿಸಿದ್ದು, ಚಿರತೆ ಪ್ರವೇಶಿಸಿದ್ದು, ಕಿಟಕಿಯ ಬಳಿ ಕುಳಿತಿರುವುದನ್ನು ಕಾಣಬಹುದು.
ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಅರಣ್ಯಾಧಿಕಾರಿಗಳು ಸ್ಥಳದಲ್ಲಿದ್ದು, ಚಿರತೆಯನ್ನು ಸೆರೆಹಿಡಿಯಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಚಿಂಚಪದ ರಸ್ತೆಯಲ್ಲಿರುವ ಅನುಗ್ರಹ ಕಟ್ಟಡದ ಒಳಕ್ಕೆ ಬೆಳಗ್ಗೆ ಚಿರತೆ ನುಸುಳಿದ್ದು, ಭಯಭೀತರಾದ ನಿವಾಸಿಗಳು ಅರಣ್ಯ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿಗೆ ಕರೆ ಮಾಡಿದ್ದಾರೆ ಎಂದು ರೇಂಜ್ ಫಾರೆಸ್ಟ್ ಆಫೀಸರ್ ಸಂಜಯ್ ಚನ್ನೆ ಹೇಳಿದರು.

ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಚಿರತೆಯನ್ನು ಸೆರೆ ಹಿಡಿಯಲಾಗಿದೆ ಮತ್ತು ಅದನ್ನು ಸ್ಥಳಾಂತರಿಸುವ ಬೋನಿಗೆ ನಾವು ಕಾಯುತ್ತಿದ್ದೇವೆ ಎಂದು ಅವರು ತಿಳಿಸಿದರು.
ಚಿರತೆ ಇರುವ ಬಗ್ಗೆ ಸುದ್ದಿ ಹರಡಿದ ನಂತರ ಈ ಪ್ರದೇಶವು ಅಪಾರ ಜನಸಮೂಹವನ್ನು ಸೆಳೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾನು ಮೊದಲ ಮಹಡಿಯಲ್ಲಿ ಚಿರತೆಯನ್ನು ನೋಡಿದೆ. ಜನರು ಸಹಾಯಕ್ಕಾಗಿ ಕಿರುಚುತ್ತಿದ್ದರು. ಎಚ್ಚರಿಕೆಯನ್ನು ಲೆಕ್ಕಿಸದೆ ವ್ಯಕ್ತಿಯೊಬ್ಬ ಕಟ್ಟಡದ ಒಳಗೆ ಹೋದ ಮತ್ತು ಚಿರತೆ ದಾಳಿ ಮಾಡಿದೆ. ನಮ್ಮಲ್ಲಿ ಕೆಲವರು ಕೈಯಲ್ಲಿ ಕೋಲುಗಳನ್ನು ಹಿಡಿದುಕೊಂಡು ಅದನ್ನು ಓಡಿಸಿದರು ಎಂದು ಸ್ಥಳೀಯರನ್ನು ಉಲ್ಲೇಖಿಸಿ NDTV ವರದಿ ಮಾಡಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ 3-4 ದಿನ ಮಳೆ ಬೀಳುವ ಮುನ್ಸೂಚನೆ

ಬುಧವಾರ ಮಹಾರಾಷ್ಟ್ರದ ನಾಸಿಕ್‌ನ ಜನನಿಬಿಡ ಪ್ರದೇಶದಲ್ಲಿ ಚಿರತೆಯೊಂದು ಕಾಣಿಸಿಕೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿ ಚಿರತೆಗೆ ಟ್ರ್ಯಾಂಕ್ವಿಲೈಸರ್‌ನಿಂದ ಗುಂಡು ಹಾರಿಸಿ, ನಂತರ ಅದನ್ನು ಪಂಜರದಲ್ಲಿ ಬಂಧಿಸಲಾಯಿತು.

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement