ಕೆ.ಆರ್.ಎಸ್. ಅಣೆಕಟ್ಟು ಗೇಟ್ ಗಳ ಕಂಪ್ಯೂಟರೀಕರಣ

posted in: ರಾಜ್ಯ | 0

ಮೈಸೂರು: ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅವರ ನದುವೆ ನಡೆಯುತ್ತಿದ್ದ ಕೆ.ಆರ್.ಎಸ್. ಜಲಾಶಯ ಬಿರುಕು ಬಿಟ್ಟಿದೆ ಎಂಬ ವಿವಾದ ತಾರಕಕ್ಕೇರಿದ ಬೆನ್ನಲ್ಲೇ ಡ್ಯಾಂ ಗೇಟ್ ಗಳನ್ನು ದುರಸ್ಥಿಗೊಳಿಸಿ ಕಂಪ್ಯೂಟರೀಕರಣಗೊಳಿಸುವ ಕಾರ್ಯಕ್ಕೆ ಸರಕಾರ ಮುಂದಾಗಿದೆ.

ಕೆ.ಆರ್.ಎಸ್, ಡ್ಯಾಂನಲ್ಲಿ ಒಟ್ಟು 173 ಗೇಟ್ ಗಳಿದ್ದು, ಈ ಪೈಕಿ 136 ಗೇಟ್  ಬದಲಾಯಿಸಲಾಗುತ್ತಿದೆ.

ಗುಜರಾತ್ ನ ಅಹಮದಬಾದ್ ಮೂಲದ ಖಾಸಗಿ ಕಂಪನಿಗೆ ಡ್ಯಾಂನ ಗೇಟ್ ಗಳ ಕಂಪ್ಯೂಟರೀಕರಣ ಗುತ್ತಿಗೆ ನೀಡಲಾಗಿದ್ದು, ಅಂದಾಜು 69 ಕೋಟಿ ರೂ. ವೆಚ್ಚದಲ್ಲಿ ೧೫೮ ಗೇಟ್ ಗಳನ್ನು ಕಂಪ್ಯೂಟರೀಕರಣಗೊಳಿಸುವ ಯೋಜನೆ ಇದಾಗಿದೆ.

ಎಲ್ಲವೂ ಅಂದುಕೊಂಡಂತೆ ಆದರೆ ಈ ವರ್ಷದ ಜೂನ್ ತಿಂಗಳ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಕೊರೊನಾ ವೈರಸ್ ಅಬ್ಬರ ಹಾಗೂ ಲಾಕ್ ಡೌನ್ ಗಳಿಂದಾಗಿ ಈ ಯೋಜನೆ ವಿಳಂಬವಾಗಿತ್ತು. ಗೇಟ್ ಗಳ ಜೋಡಣೆ ಪೂರ್ಣಗೊಂಡರೆ ಡ್ಯಾಂ ಮತ್ತಷ್ಟು ಸುರಕ್ಷಿತವಾಗಲಿದೆ ಎಂದು ಕೆ.ಆರ್.ಎಸ್. ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement