ಸಮುದ್ರದ ಆಳದಿಂದ ಪರ್ವತ ಶಿಖರಗಳವರೆಗೆ, ಮಾನವರು ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಭೂಮಿಯನ್ನು ಕಸದ ತೊಟ್ಟಿಯನ್ನಾಗಿ ಮಾಡಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯಗಳು ಕಾಡುಗಳಲ್ಲಿ ಸಹ ನುಸುಳಿವೆ. ಪರಿಣಾಮವಾಗಿ, ಕಾಡು ಪ್ರಾಣಿಗಳು ಸಾಮಾನ್ಯವಾಗಿ ತಮ್ಮ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಅಗಿಯುತ್ತವೆ ಅಥವಾ ನುಂಗುತ್ತವೆ. ಅಂತಹ ಒಂದು ನಿದರ್ಶನದಲ್ಲಿ, ಭುವನೇಶ್ವರದಲ್ಲಿ ಕೆಮ್ಮಿನ ಸಿರಪ್ ಬಾಟಲಿಯನ್ನು ನುಂಗಿದ ನಂತರ ನಾಗರಹಾವು ಉಸಿರಾಡಲು ಹೆಣಗಾಡುತ್ತಿರುವುದು ಕಂಡುಬಂದಿದೆ. ಅದೃಷ್ಟವಶಾತ್, ಹಾವಿನ ಸಹಾಯವಾಣಿಯ ಸ್ವಯಂಸೇವಕರು ಅದನ್ನು ರಕ್ಷಿಸಿದ್ದಾರೆ.
ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ ನಂದಾ ಅವರು X ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ನಾಗರಹಾವಿನ ಬಾಯಿಯಲ್ಲಿ ಕೆಮ್ಮಿನ ಸಿರಪ್ ಬಾಟಲಿಯನ್ನು ತೋರಿಸುವ ಮೂಲಕ ವೀಡಿಯೊ ಆರಂಭವಾಗುತ್ತದೆ. ಬಾಟಲಿಯನ್ನು ನುಂಗಲೂ ಆಗದೆ ಅದನ್ನು ಉಗುಳಳೂ ಆಗದೆ ಹಾವು ಹೆಣಗಾಡುತ್ತಿರುವುದು ಕಂಡುಬಂದಿದೆ. ಇದನ್ನು ನೋಡಿದ ಸ್ಥಳೀಯರು ನಂತರ ‘ಸ್ನೇಕ್ ಹೆಲ್ಪ್ಲೈನ್’ ಮೂಲಕ ಸ್ವಯಂಸೇವಕರನ್ನು ಸಂಪರ್ಕಿಸಿದರು, ಅವರು ಪ್ಲಾಸ್ಟಿಕ್ ಬಾಟಲಿ ನುಂಗಿ ತೊಂದರೆಗೆ ಸಿಲುಕಿದ್ದ ನಾಗರಹಾವಿನ ರಕ್ಷಣೆಗೆ ತಕ್ಷಣವೇ ಧಾವಿಸಿದರು. ಆದರೆ ಅವರು ಬರುವಾಗ ಹಾವಿನ ಗಂಟಲಿನಲ್ಲಿ ಪ್ಲಾಸ್ಟಿಕ್ ಬಾಟಲಿ ಸಿಲುಕಿಕೊಂಡು ಹಾವು ಒದ್ದಾಡುತ್ತಿತ್ತು. ರಕ್ಷಣಾ ತಂಡವು ಹಾವಿನ ಗಂಟಲಿನಿಂದ ಬಾಟಲಿಯನ್ನು ಎಚ್ಚರಿಕೆಯಿಂದ ಹೊರತೆಗೆದು ಕಾಡಿಗೆ ಬಿಟ್ಟಿತು.
”ಭುವನೇಶ್ವರದಲ್ಲಿ ನಾಗರಹಾವು ಕೆಮ್ಮಿನ ಸಿರಪ್ ಬಾಟಲಿಯನ್ನು ನುಂಗಿತ್ತು ಮತ್ತು ಅದು ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡು ಹಾವು ಒದ್ದಾಡುತ್ತಿತ್ತು. ಹಾವಿನ ಸಹಾಯವಾಣಿಯ ಸ್ವಯಂಸೇವಕರು ಹಾವಿನ ಕೆಳ ದವಡೆಯನ್ನು ನಿಧಾನವಾಗಿ ವಿಸ್ತರಿಸಿ ಬಾಟಲಿಯ ಬುಡದ ರಿಮ್ ಅನ್ನು ಮುಕ್ತಗೊಳಿಸಿ ಹಾವನ್ನು ಅಪಾಯದಿಂದ ಪಾರು ಮಾಡಿದ್ದಾರೆ ಎಂದು ಶ್ರೀ ನಂದಾ ಅವರು ವೀಡಿಯೊವನ್ನು ಹಂಚಿಕೊಳ್ಳುವಾಗ ಬರೆದಿದ್ದಾರೆ.
ಇಂಟರ್ನೆಟ್ ಬಳಕೆದಾರರು ರಕ್ಷಣಾ ತಂಡಕ್ಕೆ ಧನ್ಯವಾದ ಅರ್ಪಿಸಿದರು ಮತ್ತು ವನ್ಯಜೀವಿಗಳು ಮತ್ತು ಪರಿಸರಕ್ಕೆ ಹಾನಿಯಾಗದಂತೆ ತಡೆಯಲು ಸರಿಯಾದ ತ್ಯಾಜ್ಯ ವಿಲೇವಾರಿ ಅಭ್ಯಾಸಗಳ ಪ್ರಾಮುಖ್ಯತೆ ಬಗ್ಗೆ ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ