ಸ್ವೀಡಿಷ್ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಟ್ವೀಟ್ ಮಾಡಿರುವ ವಿವಾದಾತ್ಮಕ ‘ಟೂಲ್ ಕಿಟ್’ ರಚಿಸಿದ್ದಾನೆ ಎಂದು ಹೇಳಲಾಗುತ್ತಿರುವ ಕೆನಡಾದ ವ್ಯಾಂಕೋವರ್ ಮೂಲದ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ (ಪಿಜೆಎಫ್) ಸಂಸ್ಥಾಪಕ ಮೊ ಧಾಲಿವಾಲ್, ಭಾರತದಲ್ಲಿನ ಕೃಷಿ ಪ್ರತಿಭಟನೆಯನ್ನು ಪ್ರತ್ಯೇಕತಾವಾದಿ ಖಲಿಸ್ತಾನಿ ಚಳವಳಿಗೆ ಉತ್ತೇಜನ ನೀಡಲು ಬಳಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರೈತರ ಆಂದೋಲನದಡಿಯಲ್ಲಿ ಪ್ರತ್ಯೇಕತಾವಾದಿ ಚಳವಳಿಗೆ ಉತ್ತೇಜನ ನೀಡುವ ಹಾಗೂ ಬೆಂಬಲ ಪಡೆಯುವ ಪ್ರಯತ್ನದ ಬಗೆಗಿನ ಅನುಮಾನವು ಮೊ ಧಾಲಿವಾಲ್ ಅವರ ಇತ್ತೀಚಿನ ವೀಡಿಯೊ ಕ್ಲಿಪ್ನಿಂದ ದೃಢಪಟ್ಟಟಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ,
ನಾಳೆ ಕೃಷಿ ಮಸೂದೆಗಳು ರದ್ದುಗೊಂಡರೆ ಅದು ವಿಜಯವಲ್ಲ, ಈ ಹೋರಾಟವು ಕೃಷಿ ಮಸೂದೆಗಳನ್ನು ರದ್ದು ಪಡಿಸುವುದರೊಂದಿಗೆ ಆರಂಭವಾಗುತ್ತದೆ, ಅದು ಅಲ್ಲಿಗೆ ಕೊನೆಗೊಳ್ಳುವುದಿಲ್ಲ. ಕೃಷಿ ಮಸೂದೆಗಳನ್ನು ರದ್ದುಪಡಿಸುವುದರೊಂದಿಗೆ ಈ ಹೋರಾಟವೂ ಕೊನೆಗೊಳ್ಳಲಿದೆ ಎಂದು ಯಾರೂ ನಿಮಗೆ ಹೇಳಬಾರದು. ಅವರು ಈ ಚಳವಳಿಯಿಂದ ನಿಮ್ಮ ಶಕ್ತಿಯನ್ನು ಕಳೆಗುಂದಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಇದಕ್ಕೆ ಕಾರಣ. ನೀವು ಪಂಜಾಬ್ನಿಂದ ಪ್ರತ್ಯೇಕವಾಗಿದ್ದೀರಿ, ಮತ್ತು ನೀವು ಖಲಿಸ್ತಾನ್ ಚಳವಳಿಯಿಂದ ಪ್ರತ್ಯೇಕವಾಗಿದ್ದೀರಿ ಎಂದು ಹೇಳಲು ಅವರು ಪ್ರಯತ್ನಿಸುತ್ತಿದ್ದಾರೆ. ನೀವು ಇಲ್ಲ ಎಂದು ಮೊ ಧಾಲಿವಾಲ್ ಈ ವೀಡಿಯೊ ಕ್ಲಿಪ್ನಲ್ಲಿ ಹೇಳಿದ್ದಾರೆ. ಈ ವಿಡಿಯೋ ಜನವರಿ 26 ರಂದು ಭಾರತದ ಕೃಷಿ ಕಾಯ್ದೆ ವಿರೋಧಿಸಿ ಹಾಗೂ ಭಾರತದ ರೈತರ ಹೋರಾಟ ಬೆಂಬಲಿಸಿ ಕೆನಡಾದ ಭಾರತೀಯ ದೂತಾವಾಸದ ಹೊರಗೆ ನಡೆದ ಪ್ರತಿಭಟನೆಯ ಸಮಯದಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಾಗಿದೆ. ಆದರೆ ಈ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಇನ್ನೂ ಖಚಿತವಾಗಿಲ್ಲ.
ನೂತನ ಕೃಷಿ ಕಾಯ್ದೆ ವಿರೋಧಿಸಿ ನವೆಂಬರ್ ಅಂತ್ಯದಲ್ಲಿ ಆರಂಭವಾದ ರೈತರ ಆಂದೋಲನಕ್ಕೆ ಸಂಬಂಧಿಸಿದ ಆನ್ಲೈನ್ ಮತ್ತು ಆಫ್ಲೈನ್ ಪ್ರತಿಭಟನೆಗಳಿಗೆ ಕ್ರಿಯಾ ಯೋಜನೆಯನ್ನು ವಿವರಿಸುವ ಡಾಕ್ಯುಮೆಂಟ್ ಅನ್ನು ಸ್ವೀಡಿಷ್ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಟ್ವೀಟ್ ಮಾಡಿದ ನಂತರ ಮೊ ಧಾಲಿವಾಲ್ ಮತ್ತು ಅವರ ಗುಂಪು ಪಿಜೆಎಫ್ ಜಾಗತಿಕವಾಗಿ ತೀವ್ರ ಗಮನ ಸೆಳೆಯಿತು. ಸಾಮಾಜಿಕ ಮಾಧ್ಯಮದಲ್ಲಿ ಜನರು ಬಳಸಬಹುದಾದ ಟ್ವೀಟ್ಗಳ ಲಿಂಕ್ಗಳೊಂದಿಗೆ ಪೂರ್ಣಗೊಂಡ ಮೊದಲ ಡಾಕ್ಯುಮೆಂಟ್, ಜನವರಿ 26 ರಂದು ಭಾರತದಲ್ಲಿ ನಡೆದ ಗಣರಾಜ್ಯೋತ್ಸವದಂದು ಹೆಚ್ಚಾಗಿ ಕೇಂದ್ರೀಕೃತವಾಗಿತ್ತು, ಈ ಗುಂಪು ಜಾಗತಿಕ ಪ್ರತಿಭಟನೆಯ ದಿನವಾಗಿ ಆಚರಿಸಲು ಉದ್ದೇಶಿಸಿದೆ. ಗ್ರೆಟ್ಟಾ ಈ ಡಾಕ್ಯುಮೆಂಟ್ ಅಳಿಸಿದಳು ಮತ್ತು ನಂತರ ನವೀಕರಿಸಿದ ಮತ್ತು ಸ್ವಚ್ಛಗೊಳಿಸಿದ ಡಾಕ್ಯುಮೆಂಟ್ ಅನ್ನು ಅಪ್ಲೋಡ್ ಮಾಡಿದ್ದಾಳೆ ಎಂದು ಪೊಲೀಸರು ಹೇಳುತ್ತಾರೆ.
ದೆಹಲಿ ಪೊಲೀಸರು ಈ ಟೂಲ್ಕಿಟ್ ಅಥವಾ ದಾಖಲೆ ಆಧಾರದ ಮೇಲೆ ಕ್ರಿಮಿನಲ್ ಪಿತೂರಿ ಮತ್ತು ದೇಶದ್ರೋಹ ಆರೋಪದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದು, ಆದರೆ ಇದರಲ್ಲಿ ಯಾರನ್ನೂ ಹೆಸರಿಸಲಾಗಿಲ್ಲ.
ಈ ಟೂಲ್ ಕೀಟ್ ಸೃಷ್ಟಿಸಿದವರ ಹಿನ್ನೆಲೆ ಮತ್ತು ಪ್ರೇರಣೆ ಹಿನ್ನೆಲೆಯ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಭಾರತ ಸರ್ಕಾರದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಸಾರ್ವಜನಿಕ ಅಭಿಪ್ರಾಯ ಮೂಡಿಸಲು ಪ್ರಯತ್ನಿಸುತ್ತಿರುವ ಗುಂಪಿನ ಉದ್ದೇಶಗಳ ಕುರಿತು ಈ ವಿಡಿಯೋ ಒಳನೋಟವನ್ನು ನೀಡುತ್ತದೆ.
“ಅವರು ಕೃಷಿ ಪ್ರತಿಭಟನೆಗಳನ್ನು ಅವರ ಪ್ರತ್ಯೇಕತಾವಾದಿ ಕಾರ್ಯಸೂಚಿಗೆ ಬೆಂಬಲವನ್ನು ಸಜ್ಜುಗೊಳಿಸಲು ಒಂದು ಆಯುಧವಾಗಿ ಬಳಸುತ್ತಿದ್ದಾರೆ ಎಂಬುದು ತನಿಖೆ ಮಾಡುತ್ತಿರುವ ಪೊಲೀಸರ ಅನಿಸಿಕೆ. ಮೊ ಧಾಲಿವಾಲನ ವೀಡಿಯೊ ಕ್ಲಿಪ್ ಈ ವಿವಾದವನ್ನು ಬೆಂಬಲಿಸುತ್ತದೆ ಎಂದು ಪೊಲೀಸರು ಹೇಳುತ್ತಾರೆ.
ಧಾಲಿವಾಲ್ ಒಬ್ಬನೇ ಅಲ್ಲ: ಕೃಷಿ ಪ್ರತಿಭಟನೆಯಲ್ಲಿ ವಾರಗಟ್ಟಲೆ ಒಳನುಸುಳುವ ಪ್ರತ್ಯೇಕತಾವಾದಿ ಅಂಶಗಳ ಗುಪ್ತಚರ ವರದಿಗಳ ಬಗ್ಗೆ ಮಾತನಾಡುತ್ತಿರುವ ಅಧಿಕಾರಿಗಳು, ಖಲಿಸ್ತಾನಿ ಪರ ಇತರ ವ್ಯಕ್ತಿಗಳು ಮತ್ತು ಗುಂಪುಗಳು ವಿವಿಧ ಹಂತಗಳಲ್ಲಿಯೂ ಸಕ್ರಿಯವಾಗಿವೆ. ದೆಹಲಿ ಗಡಿಯಲ್ಲಿ ಪ್ರತಿಭಟನಾಕಾರರನ್ನು ಸಜ್ಜುಗೊಳಿಸಲು ಯತ್ನಿಸುತ್ತಿರುವ ಪಾಕಿಸ್ತಾನದ ಸಪೋರ್ಟ್ ಖಾಲಿಸ್ಥಾನ ಎಂಬ ಕನಿಷ್ಠ 300 ಹ್ಯಾಶ್ಟ್ಯಾಗ್ ಹ್ಯಾಂಡಲ್ಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದು ದೆಹಲಿ ಪೊಲೀಸರು ಮೊದಲೇ ಹೇಳಿದ್ದರು ಎಂಬುದು ಗಮನಾರ್ಹ.ಪೊಲೀಸರು ಈಗ ಈ ವಿಡಿಯೋ ಕ್ಲಿಪ್ಪಿಂಗ್ ಬಗ್ಗೆ ತನಿಖೆ ನಡೆಸುತ್ತಿದ್ದು, ಇದರ ಬಗ್ಗೆ ಇನ್ನಷ್ಟು ಮಾಹಿತಿ ಕಲೆಹಾಕುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ