ಮಾರ್ಗ ಬದಲಾಯಿಸಿದ ಬಿಜೆಪಿ ಪರಿವರ್ತನ ಯಾತ್ರೆ

ಕೋಲ್ಕತ್ತ: ಪೊಲೀಸರ ಆದೇಶದನ್ವಯ ಮುರ್ಶಿದಾಬಾದ್‌ನಲ್ಲಿ ನಡೆಯುತ್ತಿರುವ ಬಿಜೆಪಿಯ ಪರಿವರ್ತನ ಯಾತ್ರೆಯ ಮಾರ್ಗವನ್ನು ಬದಲಾಯಿಸಲಾಯಿತು.
ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಯಾತ್ರೆ ತೆರಳಲು ಪೊಲೀಸರು ಅನುಮತಿ ನೀಡದಿದ್ದರಿಂದ ಪರ್ಯಾಯ ಮಾರ್ಗದಲ್ಲಿ ಯಾತ್ರೆ ನಡೆಯಿತು. ಯಾತ್ರೆ ತೆರಳುವ ಮಾರ್ಗವನ್ನು ಮುಂಚಿತವಾಗಿ ತಿಳಿಸಿದ್ದರು. ಆದರೆ ಆಗ ಆಗ ಯಾವುದೇ ಆಕ್ಷೇಪ ವ್ಯಕ್ತವಾಗಿರಲಿಲ್ಲ. ಆದರೆ ಪೊಲೀಸರು ಮಾರ್ಗ ಬದಲಾಯಿಸುವಂತೆ ಸೂಚಿಸಿದರು. ಪೊಲೀಸರ ವರ್ತನೆ ಅಚ್ಚರಿ ಮೂಡಿಸಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಗೌರಿಶಂಕರ ಘೋಷ್‌ ತಿಳಿಸಿದರು.
ಎಪ್ರಿಲ್‌-ಮೇದಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಕೋಟಕ್‌ ಮಹೀಂದ್ರಾ ಬ್ಯಾಂಕಿಗೆ ಆರ್‌ಬಿಐ ನಿರ್ಬಂಧ : ಹೊಸ ಗ್ರಾಹಕರ ಆನ್‌ಲೈನ್‌ ಸೇರ್ಪಡೆ, ಹೊಸ ಕ್ರೆಡಿಟ್‌ ಕಾರ್ಡ್‌ ವಿತರಣೆಗೆ ಬ್ರೇಕ್‌

ನಿಮ್ಮ ಕಾಮೆಂಟ್ ಬರೆಯಿರಿ

advertisement